ಗಂಡನ ಮೇಲೆ ಸುಳ್ಳು ಹೇಳಿ ವಿ-ಚ್ಛೇ-ದನ ಕೇಸ್ ಹಾಕುವವರು ಹುಷಾರಾಗಿರಿ.! ರೂಲ್ಸ್ ಬದಲಾಗಿದೆ.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ವಿ’ಚ್ಛೇ’ಧ’ನದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಈ ವಿಚಾರದಲ್ಲಿ ಆಶ್ಚರ್ಯ ಎನಿಸುತ್ತಿರುವುದು ಪತಿ ಅಥವಾ ಪತ್ನಿ ಯಾರೇ ವಿಚ್ಛೇದನ ಪಡೆದುಕೊಳ್ಳಲು ಕೊಡುತ್ತಿರುವ ಕಾರಣಗಳು. ವಿಚ್ಛೇದನ ಬಯಸುವ ಪ್ರತಿ ಅಥವಾ ಕೆಲವೊಂದು ಸಮಯದಲ್ಲಿ ಪತ್ನಿಯು ಕೂಡ ಪ್ರಿಟಿಷನ್ ನಲ್ಲಿ ಹಾಕುತ್ತಿರುವ ಪಾಯಿಂಟ್ ಳು ಬಹಳ ಆಶ್ಚರ್ಯ ಎನಿಸುತ್ತಿದೆ.

ಯಾಕೆಂದರೆ ಸತ್ಯಕ್ಕೆ ದೂರವಾದ ಇದುವರೆಗೂ ಕಂಡು ಕೇಳಿರದಂತಹ ಆರೋಪಗಳನ್ನೆಲ್ಲ ಮಾಡಿರುತ್ತಾರೆ. ಕೆಲವೊಮ್ಮೆ ಪತಿ ಕಳಿಸಿದ್ದ ಈ ನೋಟಿಸ್ ನೋಡಿದ ತಕ್ಷಣವೇ ಹೆಂಡತಿ ಪ್ಯಾನಿಕ್ ಆಗುವ ಅಥವಾ ಹೊಟ್ಟೆ ಉರಿದುಕೊಳ್ಳುವ ಅದೇ ರೀತಿ ಪತ್ನಿ ಕಳಿಸಿರುವ ನೋಟಿಸ್ ನೋಡಿ ಪಇದರಲ್ಲಿರುವ ಒಂದು ಪಾಯಿಂಟ್ ಕೂಡ ನಿಜ ಇಲ್ಲ ಎಂದು ನೋಟಿಸ್ ಪಡೆದವರು ಅಲ್ಲಗಳೆದಿರುವುದನ್ನು ಕೂಡ ಕೇಳಿರುತ್ತೇವೆ.

ಹಾಗಾದರೆ ಈ ರೀತಿ ಸುಳ್ಳು ಕೇಸ್ ಹಾಕಿದಮೇಲೆ ಅದನ್ನು ಸುಳ್ಳು ಎಂದು ಅಥವಾ ತಾವು ಹೇಳಿದ್ದೆಲ್ಲ ನಿಜ ಎಂದು ಸಾಬೀತು ಮಾಡಿಕೊಳ್ಳುವ ಜವಾಬ್ದಾರಿಯ ಯಾರದ್ದಾಗಿರುತ್ತದೆ ಗೊತ್ತಾ?. ಯಾವುದೇ ಒಂದು ಕೇಸ್ ಹಾಕುವಾಗ ಅದನ್ನು ಸಾಕ್ಷಿ ಸಮೇತವಾಗಿ FIR ಮಾಡಬೇಕು ಎನ್ನುವ ನಿಯಮ ಇಲ್ಲ. ಸಾಕ್ಷಿಗಳು ಇಲ್ಲದೆ ಕೂಡ FIR ಆಗುತ್ತದೆ ಆದರೆ ಕೇಸ್ ಗೆಲ್ಲಲು ಸಾಕ್ಷಿ ಬೇಕು.

ಸಾಮಾನ್ಯವಾಗಿ ಗಂಡನಿಗೆ ಕಾಯಿಲೆ ಇದೆ ಅಥವಾ ಬೇರೆ ಸಂಬಂಧ ಇದೆ, ಹೆಂಡತಿಯು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ಸಹೋದರ ಸಹೋದರಿಯನ್ನು ಅವಮಾನ ಮಾಡುತ್ತಾಳೆ ಇನ್ನು ಹತ್ತಾರು ಕಾರಣಗಳನ್ನು ಕೊಟ್ಟು ವಿ’ಚ್ಛೇ’ದ’ನ ಕೋರಿ ಧಾವೆ ಹಾಕುತ್ತಾರೆ. ಇವುಗಳಿಗೆ ಒಂದು ಅರ್ಥ ಇದೆ, ಈ ರೀತಿ ನಡೆದಿದ್ದರೂ ಇರಬಹುದು ಆದರೆ ಕೆಲವರು ವಿಚಿತ್ರವಾದ ಸುಳ್ಳು ಆರೋಪ ಮಾಡುತ್ತಾರೆ, ಸತ್ಯಕ್ಕೆ ಬಹಳ ದೂರವಾಗಿರುತ್ತದೆ ಇಂತವರು ಸುಳ್ಳು ಹೇಳುತ್ತಿದ್ದರೆ ಎಚ್ಚರ ಇರಲಿ.

ಈ ರೀತಿ ಸುಳ್ಳು ಪ್ರಿಟಿಷನ್ ಹಾಕಿ ನೋಟಿಸ್ ಸ್ವೀಕರಿಸಿದವರು ಕೂಡ ಭ’ಯ ಹೋಗುವ ಅಗತ್ಯ ಇಲ್ಲ. ಕೆಲವೊಬ್ಬರು ವಿಚ್ಛೇದನ ಕೊಡಲು ಮನಸ್ಸಿಲ್ಲದಿದ್ದರೂ ಕೂಡ ಅವರು ಸೇರಿಸಿರುವ ಅಂಶಗಳನ್ನು ನೋಡಿ ಬೇಸರವಾಗಿ ಬೇರೆ ದಾರಿ ಇಲ್ಲದೆ ಇವರ ಸಹವಾಸ ಬೇಡ ಎಂದು ಡಿ’ವೋ’ರ್ಸ್ ಗೆ ಒಪ್ಪಿಕೊಂಡು ಬಿಡುತ್ತಾರೆ.

ಆದರೆ ನೀವು ನಿಜಕ್ಕೂ ಕೂಡ ಅಂತಹ ಕೃತ್ಯಗಳನ್ನು ಮಾಡಿಲ್ಲ ಅಂದಾಗ ಆ ನೋಟಿಸ್ ಸ್ವೀಕರಿಸಿ ಕೇಸ್ ಮುನ್ನಡೆಸಿ ಕೋರ್ಟ್ ನಲ್ಲಿ ಅದೆಲ್ಲ ಸುಳ್ಳು ಎಂದು ಹೇಳಿ ಆದರೆ ಅದನ್ನೆಲ್ಲ ಸುಳ್ಳು ಎಂದು ನೀವು ಸಾಬೀತು ಸಾಕ್ಷಿ ಕೊಡಲೇಬೇಕಾದ ಅಗತ್ಯತೆ ಇಲ್ಲ. ನಿಮ್ಮ ಮೇಲೆ ಆರೋಪ ಮಾಡಿದವರು ಅದಕ್ಕೆ ಸಾಕ್ಷಿಗಳನ್ನು ಕೊಟ್ಟು ಕೋರ್ಟ್ ನಲ್ಲಿ ಇದೆಲ್ಲವೂ ಸತ್ಯ ಎಂದು ಪ್ರೂವ್ ಮಾಡಿಕೊಳ್ಳಬೇಕಾದ ಹೊಣೆಗಾರಿಕೆ ಅವರಿಗೆ ಇರುತ್ತದೆ.

ಕೆಲವರು ಸುಲಭವಾಗಿ ಈ ವಿಷಯಗಳು ನನಗೆ ಗೊತ್ತಿರಲಿಲ್ಲ ನಮ್ಮ ಲಾಯರ್ ಕಳಿಸಿರುವುದು ಎಂದು ಹೇಳಿಬಿಡುತ್ತಾರೆ. ಈ ರೀತಿ ಹೇಳಿ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆದರೆ ಆ ಎಲ್ಲಾ ವಿಷಯಗಳು ಕೂಡ ನಿಮ್ಮ ಗಮನಕ್ಕೆ ಬಂದಿದೆ, ನೀವೇ ಹೇಳಿದ ವಿಷಯಗಳನ್ನು ಅದರಲ್ಲಿ ಸೇರಿಸಲಾಗಿದೆ, ನೀವು ಅದನ್ನು ಓದಿ ಧೃಡೀಕರಿಸಿದ್ದೀರಿ ಎಂದೇ ಕೋರ್ಟ್ ನಂಬುತ್ತದೆ.

ಹಾಗಾಗಿ ಈ ರೀತಿ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಯಾವ ಗ್ರೌಂಡ್ಸ್ ಮೇಲೆ ಕೇಸ್ ದಾಖಲಿಸಿದ್ದೀರಾ ಅವರ ಮೇಲೆ ಆರೋ ‌ಪಗಳನ್ನು ಸಾಬೀತು ಮಾಡಿಕೊಂಡರೆ ಮತ್ತೆ ನಿಮ್ಮ ಕೇಸ್ ನಿಲ್ಲುತ್ತದೆ ಮತ್ತು ಇಲ್ಲವಾದರೆ ಸುಳ್ಳು ಆರೋಪ ಮಾಡಿದ ತಪ್ಪಿಗೆ ನಿಮಗೆ ದಂಡ ಕೂಡ ಆಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now