ಪಶುಸಂಗೋಪನೆ & ಹೈನುಗಾರಿಕೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 2 ಲಕ್ಷ ರೂಪಾಯಿ. ಅರ್ಜಿ ಸಲ್ಲಿಸುವ ವಿಧಾನ & ಬೇಕಾಗುವ ದಾಖಲೆಗಳೇನು ನೋಡಿ.

 

WhatsApp Group Join Now
Telegram Group Join Now

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಕೆ ಆಗಲೇಬೇಕು. ಎಲ್ಲರೂ ಸಹ ಕೃಷಿ ಮೂಲವನ್ನು ಅನುಸರಿಸಿದರೆ ಆಹಾರ ಅಭಾವ ಉಂಟಾಗಬಹುದು. ಈ ಕಾರಣಕ್ಕಾಗಿ ಮೀನುಗಾರಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಇವುಗಳನ್ನು ಕೂಡ ಸರ್ಕಾರಗಳು ಉತ್ತೇಜಿಸುತ್ತಿವೆ. ಸದ್ಯಕ್ಕೀಗ ಕರ್ನಾಟಕ ಸರ್ಕಾರದಲ್ಲೂ ಕೂಡ ಮೀನುಗಾರಿಕೆ ಮತ್ತು ಹೈನುಗಾರಿಕೆ ಮಾಡುವವರಿಗೆ ಯೋಜನೆ ಒಂದು ಜಾರಿಯಾಗಿದ್ದು, ಈ ಯೋಜನೆ ಮೂಲಕ ಇದಕ್ಕೆ ಆಸಕ್ತಿ ತೋರುವ ಅರ್ಹ ಫಲಾನುಭವಿ ರೈತರುಗಳಿಗೆ 2 ಲಕ್ಷದವರೆಗೂ ಕೂಡ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ.

ನಮ್ಮ ರಾಜ್ಯದ ಅನೇಕ ರೈತರುಗಳಿಗೆ ಸರ್ಕಾರದ ಈ ಯೋಜನೆಗಳ ಮಾಹಿತಿ ತಲುಪದೇ ಇಂತಹ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ಅಂಕಣದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಬಗ್ಗೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಮತ್ತು ಯೋಜನೆಗಿರುವ ನಿರ್ಬಂಧಗಳು ಏನು ಎನ್ನುವ ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿದ್ದೇವೆ. ಈ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೂ ಹಂಚಿಕೊಂಡು ಹೆಚ್ಚಿನ ರೈತರಿಗೆ ಯೋಜನೆಯ ವಿವರ ತಲುಪುವಂತೆ ಮಾಡಿ.

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:-
● ರೈತರ ಜಮೀನಿನ ಪಹಣಿ ಪತ್ರ
● ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ನೀರು ಬಳಕೆ ಪತ್ರ
● ರೈತನ ಆಧಾರ್ ಕಾರ್ಡ್
● ಬಿಳಿ ಹಾಳೆಯಲ್ಲಿ ಬರೆದ ಎಸ್ಟಿಮೇಟ್ ಪತ್ರ
(ಜನಸಂಖ್ಯೆ ಎಷ್ಟಿರುತ್ತದೆ ಮೇವಿನ ಖರ್ಚು ಎಷ್ಟಾಗುತ್ತದೆ, ಇತರೆ ಖರ್ಚು ಎಷ್ಟಾಗುತ್ತದೆ ಎನ್ನುವುದರ ಅಂದಾಜು ಮಾಹಿತಿ ಹೊಂದಿರಬೇಕು)
● ಹೇಳಿಕೆ ಪತ್ರ
● ರೇಷನ್ ಕಾರ್ಡ್
● DCC ಬ್ಯಾಂಕ್ ಉಳಿತಾಯ ಖಾತೆ ಪುಸ್ತಕದ ಪ್ರತಿ

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ನಂತರದ ಕ್ರಮಗಳು:-
● ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಲಗತ್ತಿಸಿ, ಅರ್ಜಿ ಬರೆದು ಸಂಬಂಧಿಸಿದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ
ನಿಮ್ಮ ಏರಿಯಾದ DCC ಬ್ಯಾಂಕಿಗೆ ಬೇಟಿ ಕೊಟ್ಟು ಮ್ಯಾನೇಜರ್ ಅವರಿಗೆ ಸಹ ಅರ್ಜಿ ಸಲ್ಲಿಸಬಹುದು.
● ನೀವು ಅರ್ಜಿ ಸಲ್ಲಿಸಿದ ದಿನಾಂಕದ ಒಂದು ತಿಂಗಳ ಒಳಗೆ ಹೈನುಗಾರಿಕೆ ಆರಂಭಿಸಲು ನಿಮಗೆ ಬಡ್ಡಿ ರಹಿತ ಎರಡು ಲಕ್ಷ ರೂಪಾಯಿ ಲೋನ್ ಸಿಗುತ್ತದೆ.

ನಿಬಂಧನೆಗಳು:-
● ಒಂದು ಕುಟುಂಬಕ್ಕೆ ಒಬ್ಬರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಬಹುದು. ಈ ಕಾರಣದಿಂದಲೇ ರೇಷನ್ ಕಾರ್ಡನ್ನು ಅಗತ್ಯ ದಾಖಲೆಯಾಗಿ ತೆಗೆದುಕೊಳ್ಳಲಾಗುತ್ತದೆ.
● ಅರ್ಜಿದಾರರು ಸ್ಥಳೀಯ ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯರಾಗುರುವುದು ಕಡ್ಡಾಯವಾಗಿರುತ್ತದೆ.
● ಎರಡು ಲಕ್ಷದವರೆಗೆ ಮಾತ್ರ ಬಡ್ಡಿ ರಹಿತ ಸಾಲವಾಗಿರುತ್ತದೆ ಒಂದು ವೇಳೆ ಹೆಚ್ಚಿನ ಮೊತ್ತದ ಸಾಲ ಬೇಕಾದರೆ ಅದಕ್ಕೆ ಸಾಮಾನ್ಯ ಬಡ್ಡಿ ಅನ್ವಯಿಸುತ್ತದೆ.

● ಬೆಳೆ ಸಾಲ ಪಡೆದ ರೈತರು ಕೂಡ ಹೈನುಗಾರಿಕೆ ಆರಂಭಿಸಲು ಸಾಲ ಪಡೆಯಬಹುದು, ಆದರೆ ಎರಡು ಸಾಲದ ಒಟ್ಟು ಮೊತ್ತ ಮೂರು ಲಕ್ಷ ಇರುವಂತಿಲ್ಲ.
● ಹೊಸ ವಾರ್ಷಿಕ ವರ್ಷ ಆರಂಭವಾಗುವ ಮುನ್ನ ಅರ್ಜಿ ಸಲ್ಲಿಸುವುದು ಒಳ್ಳೆಯದು.
● ಒಟ್ಟು ಸಾಲ ನೀಡುವಿಕೆಯ ಗುರಿಯಲ್ಲಿ SC,ST ಕೆಟಗರಿಗೆ 24% ಮೀಸಲು.
● ಈ ಯೋಜನೆಯಲ್ಲಿ ಸಹಾಯಧನ ಪಡೆದು ಖರೀದಿಸುವ ಎಲ್ಲಾ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಹಸು ಮರಣ ಹೊಂದಿದರೆ ರೈತನಿಗೆ ಇನ್ಸೂರೆನ್ಸ್ ಹಣ ಸಿಗಲಿ ಎನ್ನುವ ಉದ್ದೇಶದಿಂದ ಇದನ್ನು ಕೇಳಲಾಗಿದೆ
● ತೆಗೆದುಕೊಂಡ ಸಾಲ ಮರುಪಾವತಿ ಮಾಡಬೇಕು ಎನ್ನುವುದು ಕೂಡ ಕಡ್ಡಾಯ ನಿಯಮಗಳಲ್ಲಿ ಒಂದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now