ಎಲ್ಲಾ ರೈತರಿಗೂ ಸರ್ಕಾರದಿಂದ ಭರ್ಜರಿ ಉಡುಗೊರೆ, ಪ್ರತಿ ಕೃಷಿ ಉಪಕರಣಗಳ ಮೇಲೆ ಭಾರಿ ಸಬ್ಸಿಡಿ.!

 

WhatsApp Group Join Now
Telegram Group Join Now

ರೈತರಿಗೆ ಸರ್ಕಾರ ವತಿಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. 10,000 ರೂ. ಮೌಲ್ಯಕ್ಕೂ ಮೇಲ್ಪಟ್ಟ ಎಲ್ಲಾ ಕೃಷಿ ಉಪಕರಣಗಳು ಹಾಗೂ ಕೃಷಿ ರಕ್ಷಣಾ ಸಾಧನಗಳಿಗಾಗಿ ರೈತರು ಸಬ್ಸಿಡಿಯನ್ನು ಪಡೆಯಬಹುದು. ಯಾವುದೇ ಭದ್ರತಾ ಠೇವಣಿ ಇಡದೆ ಕೃಷಿ ಯಂತ್ರೋಪಕರಣಗಳು ಹಾಗೂ ಸಾಧನಗಳನ್ನು ಖರೀದಿಸಬಹುದಾಗಿದ್ದು, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಬಹಳ ಅನುಕೂಲವಾಗುವಂತಹ ಯೋಜನೆ ಎನ್ನಬಹುದು.

ಈ ಪ್ರಯೋಜನವನ್ನು ಪಡೆಯಲು ಇಚ್ಚಿಸುವ ರೈತರು ಕೃಷಿ ಇಲಾಖೆಯ ಪೋರ್ಟಲ್ ನಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು. ಆಸಕ್ತ ರೈತರಿಗಾಗಿ ಯೋಜನೆ ಕುರಿತು ಪ್ರಮುಖ ವಿವರಗಳನ್ನು ತಿಳಿಸುತ್ತಿದ್ದೇವೆ ಈ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಹಂಚಿಕೊಂಡು ಅವರಿಗೆ ಅನುಕೂಲ ಮಾಡಿಕೊಡಿ.

ಯೋಜನೆಯ ಹೆಸರು:- ಯಂತ್ರೋಪಕರಣಗಳು ಹಾಗೂ ಕೃಷಿ ರಕ್ಷಣಾ ಸಾಧನಗಳ ಖರೀದಿಗೆ ಸಬ್ಸಿಡಿ ಯೋಜನೆ…

ಯೋಜನೆ ಸಲ್ಲಿಸಲು ಯಾರು ಅರ್ಹರು:-

* ಈ ಯೋಜನೆಗೆ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (SRLM) ಮತ್ತು ಕೃಷಿ ಇಲಾಖೆಗೆ ಸಂಬಂಧಿಸಿದ ರೈತರು, ನೋಂದಾಯಿತ ರೈತರು, ಸಹಕಾರ ಸಂಘಗಳು, ಸ್ವ-ಸಹಾಯ ಗುಂಪುಗಳು (SHGS), ಗ್ರಾಮ ಪಂಚಾಯತ್ ಮತ್ತು FPO ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

* ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿದ ರೈತರು ಮಾತ್ರ ಅನುದಾನ ಸಂಖ್ಯೆ 83 ರಿಂದ ಮತ್ತು ಪರಿಶಿಷ್ಟ ವರ್ಗಕ್ಕೆ (ST) ಸೇರಿದ ರೈತರು ಅನುದಾನ ಸಂಖ್ಯೆ 2 ರ ಪ್ರಕಾರ, ಸಾಮಾನ್ಯ ವರ್ಗಕ್ಕೆ ಸೇರಿದ ರೈತರು ಅನುದಾನ ಸಂಖ್ಯೆ 11 ರ ಪ್ರಕಾರ ಪ್ರಯೋಜನ ಪಡೆಯಬಹುದು ಆದರೆ ಮೀಸಲಾತಿ ಪಡೆಯುವ ರೈತರು ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯ.

* ಕಳೆದ 3 ವರ್ಷಗಳಲ್ಲಿ ಮಾನವ ಡ್ರಾ ಅದವಾ ಪ್ರಾಣಿ ಬಿಡಿಸಿದ ಕೃಷಿ ಉಪಕರಣಗಳು ಅಥವಾ ಕೃಷಿ ಸಂರಕ್ಷಣಾ ಸಾಧನಗಳಿಗೆ ಮರು-ಸಬ್ಸಿಡಿಯನ್ನು ಅನುಮತಿಸಲಾಗುವುದಿಲ್ಲ.
* 10,000 ರೂ.ವರೆಗಿನ ಎಲ್ಲಾ ಕೃಷಿ ಯಂತ್ರೋಪಕರಣಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಥವಾ ISI ಯ ಗುಣಮಟ್ಟದ ಗುರುತು ಪಡೆದರೆ ಮಾತ್ರ ಸಬ್ಸಿಡಿಯನ್ನು ಪಾವತಿಸಲಾಗುತ್ತದೆ.

* ಮೊದಲು ಬಂದವರಿಗೆ ಮೊದಲು ಸೇವೆ ಎಂಬ ತತ್ವದ ಮೇಲೆ ಜಿಲ್ಲಾವಾರು ನಿಗದಿಪಡಿಸಿದ ಗುರಿಯವರೆಗೆ ವಿತರಿಸಲಾಗುತ್ತದೆ.
* ಸದ್ಯಕ್ಕಿದು ಉತ್ತರ ಪ್ರದೇಶದ ರೈತರುಗಳಿಗೆ ಸಿಗುತ್ತಿದ್ದು, ಉಳಿದ ರಾಜ್ಯ ಸರ್ಕಾರಗಳು ಮಾದರಿಯಾಗಿ ತೆಗೆದುಕೊಂಡು ಯೋಜನೆ ಜಾರಿಗೆ ತರುವ ಸಾಧ್ಯತೆಗಳಿವೆ.

ಸಿಗುವ ಅನುದಾನ:-

* ರೈತರಿಗೆ 10,000 ರೂ.ವರೆಗಿನ ಎಲ್ಲಾ ಕೃಷಿ ಉಪಕರಣಗಳ ಮೇಲೆ 50% ರಷ್ಟು ಸಬ್ಸಿಡಿ ನೀಡಲಾಗುತ್ತದೆ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ರೈತರು ಸೇರಿದಂತೆ ಮಹಿಳಾ ರೈತರಿಗೂ 50%ರಷ್ಟು ಸಹಾಯಧನ ನೀಡಲಾಗುವುದು.
* ಇತರೇ ರೈತರಿಗೆ 40% ರಷ್ಟು ಅನುದಾನ.
* ರೈತರು ಆಯ್ಕೆ ಮಾಡಿದ ಯೋಜನೆಯ ಅನುದಾನದ ಆಧಾರದ ಮೇಲೆ ಉಪಕರಣದ ಮೇಲೆ ಪಾವತಿಸಬೇಕಾದ ಸಹಾಯಧನವನ್ನು ನಿರ್ಧರಿಸಲಾಗುತ್ತದೆ.

ಬೇಕಾಗುವ ದಾಖಲೆಗಳು:-

* ಅರ್ಜಿ ಸಲ್ಲಿಸುವ ರೈತರ ಆಧಾರ್ ಕಾರ್ಡ್
* ಪಾಸ್‌ಪೋರ್ಟ್ ಅಳತೆಯ ಫೋಟೋ
* ರೈತರ ಬ್ಯಾಂಕ್ ಖಾತೆ ವಿವರ
* ಪ್ರತಿಕೃಷಿ ಉಪಕರಣಗಳ ಖರೀದಿಗೆ ಗಣಕೀಕೃತ ಬಿಲ್
* ಸ್ವಯಂ ಪ್ರಮಾಣೀಕೃತ ಪತ್ರ
* ರೈತನ ಮೊಬೈಲ್ ಸಂಖ್ಯೆ.

ಅರ್ಜಿ ಸಲ್ಲಿಸುವ ವಿಧಾನ:-
* UP ಕೃಷಿ ಇಲಾಖೆಯ ಅಧಿಕೃತ ವೆಬ್‌ಸೈಟ್ www.upagriculture.com ಗೆ ಭೇಟಿ  ಅರ್ಜಿ ಸಲ್ಲಿಸಬೇಕು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment

WhatsApp Group Join Now
Telegram Group Join Now