Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಅವಕಾಶ ಇಲ್ಲದೆ ಮನೆ ಸೈಟ್ ಆಸ್ತಿ ಎಲ್ಲನೂ ಮಾರಿಕೊಳ್ಳಬೇಕಾಯ್ತು ಅಂತ ಕಣ್ಣೀರು ಹಾಕಿದ ನಟ ಅಭಿಜಿತ್

Posted on July 26, 2022 By Rishi The Power No Comments on ಅವಕಾಶ ಇಲ್ಲದೆ ಮನೆ ಸೈಟ್ ಆಸ್ತಿ ಎಲ್ಲನೂ ಮಾರಿಕೊಳ್ಳಬೇಕಾಯ್ತು ಅಂತ ಕಣ್ಣೀರು ಹಾಕಿದ ನಟ ಅಭಿಜಿತ್

ಅಭಿಜಿತ್ ಕರ್ನಾಟಕ ಕಂಡ ಸುರದ್ರೂಪಿ ನಾಯಕ. 90ರ ದಶಕದ ಚಾಕಲೇಟ್ ಹೀರೋ. ಚಿತ್ರದುರ್ಗದಿಂದ ಸಿನಿಮಾ ಅವಕಾಶಗಳನ್ನು ಅರಸಿ ತಾನೊಬ್ಬ ನಾಯಕ ಆಗಲೇಬೇಕು ಎನ್ನುವ ಹಂಬಲ ಹೊತ್ತು ಗಾಂಧಿನಗರದ ಕಡೆಗೆ ಬಂದ ಅಭಿಜಿತ್ ಅವರು ಜೀವನದಲ್ಲಿ ಎರಡು ರೀತಿ ಅನುಭವಗಳನ್ನು ಪಡೆದುಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಸಾಕಷ್ಟು ಸೈಕಲ್ ಹೊಡೆದು ಅವಕಾಶಗಳಿಗಾಗಿ ಅಲೆಯುತ್ತಿದ್ದ ಅಭಿಜಿತ್ ಅವರಿಗೆ ಮೊದಮೊದಲು ಕಾಲೇಜ್ ಹೀರೋ ಎನ್ನುವ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸುವ ಅವಕಾಶ ದೊರಕಿತು. ಆ ಸಮಯದಲ್ಲಿ ಎಲ್ಲಾ ಹೊಸ ಪ್ರತಿಭೆಗಳನ್ನು ಮೊದಲು ಈ ರೀತಿ ರೋಲ್ ಗೆ ಹಾಕಿಕೊಳ್ಳುವುದು ವಾಡಿಕೆಯಾಗಿತ್ತು ಶಶಿಕುಮಾರ್ ಅವರು ಹಾಗೂ ದೇವರಾಜ್ ಅವರು ಈ ರೀತಿ ಎಲ್ಲರೂ ಕೂಡ ವಿಲ್ಲನ್ ರೋಲ್ ಮಾಡಿ ನಂತರ ಹೀರೋ ಅವಕಾಶ ಪಡೆದುಕೊಂಡವರು.

WhatsApp Group Join Now
Telegram Group Join Now

ಹಾಗೆಯೇ ಅಭಿಜಿತ್ ಅವರು ಸಹ ಕೆಲವೊಂದು ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಖಳನಾಯಕನಾಗಿ ಅಥವಾ ಮತ್ಯಾವುದಾದರೂ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ನಂತರ ಹೀರೋ ಆಗಿ ಮೆರೆದವರು. ಶ್ರುತಿ ಅವರ ಅಭಿನಯದ ರಂಜಿತ ಎನ್ನುವ ಸಿನಿಮಾವು ಅಭಿಜಿತ್ ಅವರ ವೃತ್ತಿ ಬದುಕನ್ನು ಬದಲಿಸಿದ ಮೊದಲ ಸಿನಿಮಾ. ಈ ಸಿನಿಮಾದ ಅದ್ಭುತ ಯಶಸ್ಸು ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿಜಿತ್ ಅವರಿಗೆ ಬಹಳಷ್ಟು ಅವಕಾಶವನ್ನು ತಂದು ಕೊಟ್ಟಿತ್ತು
ಅಭಿಜಿತ್ ಅವರ ಹೆಸರನ್ನು ಸಿನಿಮಾಗಳಿಗಾಗಿ ಅಭಿಜಿತ್ ಎಂದು ಬದಲಾಯಿಸಲಾಯಿತು ಆದರೆ ಅವರ ನಿಜವಾದ ಹೆಸರು ರಾಮಸ್ವಾಮಿ ಎನ್ನುವುದಾಗಿತ್ತು. ಇವರು ಸಂಗೀತದ ಬಗ್ಗೆ ಸಿಕ್ಕಾಪಟ್ಟೆ ಒಲವು ಹೊಂದಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಪೋಷಕ ಪಾತ್ರದಲ್ಲಿ ಖಳನಾಯಕನಾಗಿ ಸಿನಿಮಾ ಹೀರೋ ಆಗಿ ಸಿಂಗರ್ ಆಗಿ ಈ ರೀತಿ ಎಲ್ಲಾ ಕೆಲಸಗಳಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದವರು ಅಭಿಜಿತ್ ಅವರು.

ಶೃತಿ ಅವರೊಂದಿಗೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಇವರು ಹೀರೋ ಆಗಿ ಬಹುದಿನಗಳ ಕಾಲ ಬೇಡಿಕೆಯಲ್ಲಿ ಇದ್ದವರು. ಹೆಚ್ಚಿನ ಜನರು ಇವರನ್ನು ವಿಷ್ಣುವರ್ಧನ್ ಅವರ ರೀತಿಯಲ್ಲಿ ಹೋಲುತ್ತಾರೆ ಎಂದು ಕೂಡ ಮಾತನಾಡುತ್ತಿದ್ದರು. ಹಾಗೂ ವಿಷ್ಣುವರ್ಧನ್ ಅವರ ಆಪ್ತ ಬಳಗದಲ್ಲಿ ಕೂಡ ಅಭಿಜಿತ್ ಅವರು ಗುರುತಿಸಿಕೊಂಡಿದ್ದರು. ಡಾಕ್ಟರ್ ವಿಷ್ಣುವರ್ಧನ್ ಅವರೊಂದಿಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ ಇವರು ಹೆಚ್ಚಾಗಿ ವಿಷ್ಣು ವರ್ಧನ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ನಿಜ ಜೀವನದಲ್ಲಿ ಎಷ್ಟೋ ಜನ ಇವರನ್ನು ವಿಷ್ಣುವರ್ಧನ್ ಅವರ ತಮ್ಮ ಎಂದೇ ಭಾವಿಸಿದ್ದರು ಹಾಗೂ ಇವರು ಎಲ್ಲೇ ಹೋದರು ಕೂಡ ಇವರಿಗೆ ವಿಷ್ಣುವರ್ಧನ್ ಅವರ ತಮ್ಮ ಎನ್ನುವ ರೀತಿಯಲ್ಲಿಯೇ ಗೌರವ ತೋರುತ್ತಿದ್ದರು. ಅದರಲ್ಲೂ ವಿಷ್ಣುವರ್ಧನ್ ಅವರೊಂದಿಗೆ ಇವರು ಅಭಿನಯಿಸಿದ ಯಜಮಾನ ಸಿನಿಮಾದ ಅದ್ಭುತವಾದ ಯಶಸ್ಸಿನ ನಂತರ ಇವರನ್ನು ಕನ್ನಡದ ಜನತೆ ಮತ್ತಷ್ಟು ಇಷ್ಟ ಪಟ್ಟರು.

ಜೊತೆಗೆ ಕೋಟಿಗೊಬ್ಬ ಎನ್ನುವ ಸಿನಿಮಾದಲ್ಲೂ ಕೂಡ ಇವರ ಪೊಲೀಸ್ ಪಾತ್ರ ಬಹಳಷ್ಟು ಜನರಿಗೆ ಮೆಚ್ಚುಗೆಯಾಗಿತ್ತು. ಈಗ 50ರ ಆಸುಪಾಸಿನಲ್ಲಿ ಇರುವ ಅಭಿಜಿತ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಸ್ವಲ್ಪ ದೂರ ಆಗಿದ್ದಾರೆ ಅನಿಸುತ್ತದೆ. ಆದರೆ ಅದಕ್ಕೂ ಕೂಡ ಕಾರಣ ಇದೆ. ಅಭಿಜಿತ್ ಅವರು ಸ್ವಲ್ಪ ವರ್ಷಗಳವರೆಗೆ ಹೀರೋ ಆಗಿ ತುಂಬಾ ಯಶಸ್ಸನ್ನು ಕಂಡರು ಅವರು ಅಭಿನಯಿಸಿದ್ದ ಬಹುತೇಕ ಸಿನಿಮಾಗಳು ಭರ್ಜರಿ ಹಿಟ್ ಗಳಿಸಿದ್ದರೂ ಕೂಡ ಅದು ಯಾಕೋ ಕೆಲವು ವರ್ಷಗಳ ನಂತರ ಹೀರೋ ಆಗಿ ಅವರಿಗೆ ಅವಕಾಶಗಳು ಕಡಿಮೆಯಾಗಿತ್ತು ಅಥವಾ ಅವರು ಹೀರೋ ಆಗಿದ್ದ ಸಿನಿಮಾಗಳು ನಂತರದ ದಿನಗಳಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಆದರೆ ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ಇವರು ಗುರುತಿಸಿಕೊಂಡರೆ ಆ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದವು ಆದರೆ ಸೋಲೋ ಆಗಿ ಇವರು ಸಿನಿಮಾಗಳನ್ನು ಮಾಡಿದರೆ ಆ ಸಿನಿಮಾ ಸೋಲುತ್ತಿತ್ತು.

ಅವರು ಕೊನೆಯದಾಗಿ ಸಿಬಿಐ ಶಿವ ಎನ್ನುವ ಸಿನಿಮಾವನ್ನು ರಾಮ್ ಕುಮಾರ್ ಅವರ ಜೊತೆ ಅಭಿನಯಿಸಿ ನಿರ್ದೇಶನ ಕೂಡ ಮಾಡಿದ್ದರು ಆದರೆ ಆ ಸಿನಿಮಾ ಕೂಡ ಫ್ಲಾಫ್ ಆಗಿ ಹೋಗಿತ್ತು. ಮತ್ತು ಇವರ ಸಿನಿಮಾಗಳು ಸೋಲುತ್ತಿದ್ದ ಕಾರಣ ನಂತರ ಇವರಿಗೆ ಹೀರೋ ಆಗಿ ಅವಕಾಶಗಳು ಬರಲಿಲ್ಲ ಯಾವುದಾದರು ಸಣ್ಣಪುಟ್ಟ ಪಾತ್ರಕ್ಕೆ ಇವರನ್ನು ಕರೆಯುತ್ತಿದ್ದರು. ಹೀಗಾಗಿ ತುಂಬಾ ಸ್ವಾಭಿಮಾನಿ ಆಗಿದ್ದ ಇವರು ಹೀರೋ ಆಗಿ ಮಿಂಚಿ ಈಗ ಹೇಗೆ ಈ ರೀತಿ ಪಾತ್ರಗಳನ್ನು ಒಪ್ಪಿಕೊಳ್ಳುವುದು ಎನ್ನುವ ಕಾರಣಕ್ಕೆ ಸಿನಿಮಾ ಇಂಡಸ್ಟ್ರಿ ಇಂದ ದೂರ ಉಳಿಯಬೇಕಾಯಿತು. ಆ ಸಮಯದಲ್ಲಿ ಸತತವಾಗಿ 8 ವರ್ಷಗಳ ಕಾಲ ಯಾವುದೇ ಒಂದು ಸಿನಿಮಾದ ಅವಕಾಶ ಇಲ್ಲದೆ ಮನೆಯಲ್ಲೇ ಖಾಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಅಭಿಜಿತ್ ಅವರಿಗೆ ಎದುರಾಗಿತ್ತು. ಅಂತಹ ಸಮಯದಲ್ಲಿ ಬಹಳವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇವರು ಜೀವನ ನಿರ್ವಹಣೆಗಾಗಿ ತಾವು ಗಳಿಸಿದ್ದ ಆಸ್ತಿಯನ್ನು ಮಾರುವ ಸ್ಥಿತಿಯನ್ನು ಕೂಡ ತಲುಪಿದ್ದರು.

ಹಾಗೂ ಅದರಲ್ಲಿ ಸ್ವಲ್ಪ ಪ್ರಮಾಣದ ಸೈಟು ಹಾಗೂ ಆಸ್ತಿಪಾಸ್ತಿಯನ್ನು ಕೂಡ ಮಾರಬೇಕಾಯಿತು ಆದರೆ ಸದ್ಯ ಈಗ ಅವರ ಮಕ್ಕಳು ಬೆಳೆದು ದೊಡ್ಡವರಾಗಿ ಸೆಟಲ್ ಆಗಿರುವ ಕಾರಣ ಅವರ ಪರಿಸ್ಥಿತಿ ಸುಧಾರಿಸಿದೆ ಮತ್ತು ಇತ್ತೀಚೆಗೆ ಅವರಿಗೆ ಕಿರುತೆರೆಯಲ್ಲಿ ಒಳ್ಳೆ ಅವಕಾಶಗಳು ಬರುತ್ತಿದ್ದು ಈಗ ಕಿರುತೆರೆಯಲ್ಲಿ ಸತ್ಯ ಎನ್ನುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂಬರ್ ಒನ್ ಜೋಡಿ ಎನ್ನುವ ಕಾರ್ಯಕ್ರಮದಲ್ಲಿ ಕೂಡ ಅಭಿಜಿತ್ ಹಾಗೂ ಅವರ ಪತ್ನಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಣ್ಣೀರಿಟ್ಟು ಅವರ ಕಷ್ಟದ ದಿನಗಳನ್ನು ನೆನೆಸಿಕೊಂಡು ಅಭಿಜಿತ್ ಅವರು ಭಾವುಕರಾಗಿದ್ದಾರೆ. ಅಭಿಜಿತ್ ಅವರ ಜೀವನದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Entertainment Tags:Abhijith, Actor abhijith
WhatsApp Group Join Now
Telegram Group Join Now

Post navigation

Previous Post: ಮನೆ ಬಿಟ್ಟರೆ ವಿಷ್ಣು ಹೆಸರಿನಲ್ಲಿ ಬೇರೆ ಯಾವ ಆಸ್ತಿಯೂ ಇಲ್ಲವಂತೆ ಕೊನೆ ದಿನದಲ್ಲಿ ವಿಷ್ಣುವರ್ಧನ್ ಅನುಭವಿಸಿದ ಸಂ.ಕ.ಷ್ಟ ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.
Next Post: ಯಾವುದೇ ಕಾರಣಕ್ಕೂ ಈ 5 ಆಹಾರ ಸೇವಿಸಿಬೇಡಿ ಈ ಆಹಾರ ಸೇವಿಸಿದರೆ ಹೃ.ದ.ಯಾ.ಘಾ.ತ ಕಟ್ಟಿತ್ತ ಬುತ್ತಿ.

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore