ರಾಜ್ಯದ ಜನತೆಗೆ ಸಿಹಿ ಸುದ್ದಿ, 10 ನಿಗಮಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಿರಿ‌.!

 

WhatsApp Group Join Now
Telegram Group Join Now

ರಾಜ್ಯದ ಯುವ ಜನತೆಗೆ ಸರ್ಕಾರದ ವತಿಯಿಂದ ಸಿಹಿ ವಿಚಾರವಿದೆ. ಅದೇನೆಂದರೆ, ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ನಿಗಮಗಳು ಇವೆ. ಈ ನಿಗಮಗಳಿಗೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆಯಾಗುತ್ತದೆ. ಆ ಹಣವನ್ನು ನಿಗಮವು ಕಲ್ಯಾಣ ಯೋಜನೆಗಳನ್ನು ರೂಪಿಸಿ ಅರ್ಹರಿಗೆಸಾಲರೂಪದಲ್ಲಿ ಅಥವಾ ಸಬ್ಸಿಡಿ ರೂಪದಲ್ಲಿ ನೀಡುತ್ತದೆ ಈ ಮೂಲಕ ಎಲ್ಲಾ ವರ್ಗದವರ ಅಭಿವೃದ್ಧಿ ಬಯಸುವುದೇ ಸರ್ಕಾರದ ಉದ್ದೇಶವಾಗಿದೆ.

ಅಂತೆಯೇ 2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಹಲವು ನಿಗಮಗಳಲ್ಲಿ ವಿವಿಧ ಯೋಜನೆಯಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ ಯಾವ ಯಾವ ನಿಗಮದಡಿ ಈ ಸೌಲಭ್ಯ ಸಿಗುತ್ತದೆ ಮತ್ತು ಯಾವ ಯೋಜನೆಗಳಿಗೆ ಅರ್ಜಿ ಹಾಕಬಹುದು ಮತ್ತು ಬೇಕಾಗುವ ದಾಖಲೆಗಳೇನು ಎನ್ನುವುದರ ಬಗ್ಗೆ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಗೃಹಲಕ್ಷ್ಮೀ ಯೋಜನೆ 2ನೇ ಕಂತಿನ ಹಣ ಯಾವಾಗ ಬಿಡುಗಡೆ.? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿಖರ ಮಾಹಿತಿ.!

ನಿಗಮಗಳು:-
● ವೀರಶೈವ ಲಿಂಗಾಯತ ನಿಗಮ
● ಅಂಬಿಗ ಚೌಡಯ್ಯ ನಿಗಮ
● ಡಿ.ದೇವರಾಜು ಅರಸು ನಿಗಮ
● ಒಕ್ಕಲಿಗ ಅಭಿವೃದ್ಧಿ ನಿಗಮ
● ಮಡಿವಾಳ ಮಾಚಿದೇವ ನಿಗಮ
● ಸವಿತಾ ಸಮಾಜ ನಿಗಮ
● ಮರಾಠ ನಿಗಮ
● ವಿಶ್ವಕರ್ಮ ಸಮುದಾಯ ನಿಗಮ
● ಉಪ್ಪಾರ ಅಭಿವೃದ್ಧಿ ನಿಗಮ
● ಕರ್ನಾಟಕ ಅಲೆಮಾರಿ ನಿಗಮ

ಯೋಜನೆಗಳು:-
● ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
● ಗಂಗಾ ಕಲ್ಯಾಣ ಯೋಜನೆ
● ಸ್ವಾವಲಂಬಿ ಸಾರಥಿ ಯೋಜನೆ
● ಜೀವ ಜಲ ಯೋಜನೆ
● ಕಾಯಕ ಕಿರಣ ಯೋಜನೆ
● ವಿದೇಶ ವಿದ್ಯಾವಿಕಾಸ ಯೋಜನೆ
● ಭೋಜನಾಲಯ ಕೇಂದ್ರ ಯೋಜನೆ
● ವಿಭೂತಿ ನಿರ್ಮಾಣ ಘಟಕ ಯೋಜನೆ
● ಚೈತನ್ಯ ಸಬ್ಸಿಡಿ ಮತ್ತು ಸಾಫ್ಟ್ ಸಾಲ ಯೋಜನೆ
● ಚೈತನ್ಯ ನೇರ ಸಾಲ ಯೋಜನೆ
● ಮೈಕ್ರೋ ಕ್ರೆಡಿಟ್ ಸಾಲ ಯೋಜನೆ
● ಅರಿವು ಶಿಕ್ಷಣ ಸಾಲ ಯೋಜನೆ
● ಇನ್ನಿತರ ಆಯಾ ಸಮುದಾಯಕ್ಕೆ ಸಂಬಂಧಪಟ್ಟ ಹಲವು ಕಲ್ಯಾಣ ಯೋಜನೆಗಳು.

ಲೀಸ್ (ಬೋಗ್ಯಕ್ಕೆ) ತೆಗೆದುಕೊಂಡಿರುವ ಮನೆ ಅಂಗಡಿ ಅಥಾವ ಜಮೀನಿನ ಮೇಲೆ ಲೋನ್ ( ಸಾಲ ) ಪಡೆಯಬಹುದಾ.? ಹೊಸ ರೂಲ್ಸ್.!

ಯೋಜನೆ ಪ್ರಯೋಜನ ಪಡೆಯಲು ಅರ್ಹತೆಗಳು:-
● ಅರ್ಜಿ ಸಲ್ಲಿಸುವವರು 18 ವರ್ಷದ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು
● ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
● ಕುಟುಂಬದ ಆದಾಯವು ಗರಿಷ್ಠ 3.5 ಲಕ್ಷವನ್ನು ಮೀರಿರಬಾರದು
● ಕುಟುಂಬದ ಯಾವ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗದಲ್ಲಿರಬಾರದು.
● ಕುಟುಂಬದ ಯಾವ ಸದಸ್ಯರು ಕಳೆದ ಐದು ವರ್ಷಗಳಿಂದ ಸರ್ಕಾರದ ಇತರೆ ಯಾವುದೇ ಇಲಾಖೆ ಅಥವಾ ನಿಗಮಗಳಿಂದ ಯಾವುದೇ ಯೋಜನೆ ಫಲಾನುಭವಿಗಳಾಗಿರಬಾರದು.

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತದೆ.! ಬಾಡಿಗೆ ಮನೆ ಅಥವಾ ಸ್ವಂತ ಮನೆಗೆ ಹೋಗುವ ಮುನ್ನ ಇದನ್ನು ನೋಡಿ.!

ಬೇಕಾಗುವ ದಾಖಲೆಗಳು:-
● ಸಕ್ಷಮ ಪ್ರಾಧಿಕಾರದಿಂದ ನೀಡಲಾಗುವ ಜಾತಿ ಪ್ರಮಾಣ
● ಸಕ್ರಮ ಪ್ರಾಧಿಕಾರದಿಂದ ನೀಡಲಾಗುವ ಆದಾಯ ಪ್ರಮಾಣ ಪತ್ರ
● ನಿವಾಸ ದೃಢೀಕರಣ ಪತ್ರ
● ಆಧಾರ್ ಕಾರ್ಡ್
● ಬ್ಯಾಂಕ್ ಪಾಸ್ ಬುಕ್ ವಿವರ
● ಸ್ವಯಂ ಘೋಷಣಾ ಪತ್ರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
● ಮುಖ್ಯವಾಗಿ ಯೋಜನೆಯ ಬಗ್ಗೆ ವಿಸ್ತೃತ ವರದಿ

ಪ್ರಯೋಜನ:-
ಈ ಮೇಲೆ ತಿಳಿಸಿದ ಯೋಜನೆಗಳಿಗೆ ಯೋಜನವಾರು ಸಬ್ಸಿಡಿ ರೂಪದ ಸಾಲ ಮತ್ತು ಅಥವಾ ಬಡ್ಡಿದರದ ಸಾಲ ನೀಡಲಾಗುತ್ತದೆ.

ರೈತರಿಗೆ ಗುಡ್ ನ್ಯೂಸ್ ಇನ್ಮುಂದೆ ಹಗಲಿನಲ್ಲಿ ವಿದ್ಯುತ್ ನೀಡಲು ಹೊಸ ಯೋಜನೆ ಜಾರಿ.!

ಅರ್ಜಿ ಸಲ್ಲಿಸುವ ವಿಧಾನ:-
● ಈ ಯೋಜನೆಗಳ ಪ್ರಯೋಜನ ಕೊಡಲು ಅರ್ಹರಿರುವವರು ಮೊದಲಿಗೆ ಕೇಳಲಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು
● ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
● ಆಯಾ ನಿಗಮಗಳ ವೆಬ್ಸೈಟ್ ಗಳಿಗೆ ತೆರಳಿ ಅರ್ಜಿ ಸಲ್ಲಿಸುವ ಲಿಂಕ್ ಮಾಡಿ ವಿವರಗಳನ್ನು ತುಂಬಿಸಿ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬಹುದು.
● ಉನ್ನತ ಅಧಿಕಾರಿಗಳು ನಿಮ್ಮ ಅರ್ಜಿ ಪರಿಶೀಲನೆ ನಡೆಸಿ ನೀವು ಅರ್ಹರಿದ್ದರೆ ಅನುದಾನವನ್ನು ನಿಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾಯಿಸುತ್ತಾರೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now