ರೈತರಿಗೆ ಒಂದರ ನಂತರ ಒಂದರಂತೆ ಸಿಹಿ ಸುದ್ದಿಗಳು ದೊರೆಯುತ್ತದೆ ರಾಜ್ಯದ ಎಲ್ಲಾ ರೈತರಿಗೆ ಗುಡ್ ನ್ಯೂಸ್ ಎಂದೆ ಹೇಳಬಹುದು ಬೆಳೆ ವಿಮೆ ಇದ್ದವರಿಗೆ ಮತ್ತು ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ದೊರೆಯಲಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ಬೆಳೆ ವಿಮೆ ಮಾಡಿಸಿರುವಂತಹ ರೈತರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಬೆಳೆ ವಿಮೆ ಮಾಡಿಸುವ ಸಲುವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನೋಂದಾಯಿಸಿ ಕೊಂಡಿರುವಂತಹ ಪ್ರತಿಯೊಬ್ಬ ರೈತರು ಈ ಯೋಜನೆಯ ಫಲಾನುಭವಿ ಗಳಾಗಿರುತ್ತಾರೆ. ಈ ಯೋಜನೆಯ ಅಡಿಯಲ್ಲಿ ನೀವು ನಿಮ್ಮ ಜಮೀನಿಗೆ ಬೆಳೆ ಬೆಳೆಯಲು ವಿಮೆ ಮಾಡಿಸಿದ್ದರೆ ಸರ್ಕಾರವು ನಿಮಗೆ ಬೆಳೆ ಬಂದರು ಬರದೇ ಇದ್ದರೂ ಸಹ ವಿಮೆಯ ಹಣವನ್ನು ಮಂಜೂರಾತಿ ಮಾಡುತ್ತದೆ. ಕೃಷಿ ಇಲಾಖೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಿರುವಂತಹ ರೈತರಿಗೆ ಕೆಲವೇ ದಿನಗಳಲ್ಲಿ ವಿಮಾ ಪಾವತಿ ಮಾಡಲಾಗುತ್ತಿದೆ.
2022-23ನೇ ಸಾಲಿನ ಮುಂಗಾರು ಬೆಳೆಗಳ ವಿಮಾ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಿದೆ. ಪ್ರಸಕ್ತ ವರ್ಷದಲ್ಲೇ ಈ ಒಂದು ಹಣ ನಿಮ್ಮ ಖಾತೆಗೆ ಬರಲಿದ್ದು ನೀವು ನಿಮ್ಮ ಖಾತೆಯಲ್ಲಿ ಇದನ್ನು ಚೆಕ್ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರವು 2022-23 ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಉಂಟಾದಂತಹ ರೈತಬರಿಗೆ ನಷ್ಟದ ಪರಿಹಾರವಾಗಿ ಒಟ್ಟು 10.54 ಲಕ್ಷಗಳು. ರೈತರಿಗೆ 973.91 ಕೋಟಿ ರೂಪಾಯಿಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ ಈಗಾಗಲೇ 5.59 ಲಕ್ಷ ರೈತರಿಗೆ 297.93 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೆಯೇ 6171 ವಿಮಾ ಘಟಕಗಳಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ 4.95 ಲಕ್ಷ ರೈತರಿಗೆ 675.98 ಕೋಟಿ ವಿಮೆ ಮಾಡಿದ ವರ್ಷದಲ್ಲೇ ನೀಡಲಾಗಿದ್ದು ರೈತರ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡುವಂತೆ ವಿಮಾ ಸಂಸ್ಥೆಗಳು ತಿಳಿಸಿದ್ದಾರೆ. ನೀವು ಸಹ ನಿಮ್ಮ ಜಮೀನಿಗೆ ವಿಮೆ ಮಾಡಿಸಿದ್ದರೆ ನಿಮ್ಮ ಬೆಳೆಗಳು ಹಾನಿಗೆ ಒಳಗಾಗಿದ್ದರೆ ವಿಮಾ ಸಂಸ್ಥೆಗಳ ಮೂಲಕ ಹಣವನ್ನು ಪಡೆದುಕೊಳ್ಳಬಹುದು ಕೇಂದ್ರ ಸರ್ಕಾರವು ಈ ರೀತಿಯಾದಂತಹ ಒಂದು ಯೋಜನೆಗಳನ್ನು ರೂಪಿಸಿರುವುದರಿಂದ ರೈತರ ಸಂಕಷ್ಟಗಳಿಗೆ ನೆರವಾಗಲು ಇದು ಸಹಾಯವಾಗುತ್ತದೆ.
ಯಾರೆಲ್ಲ ರೈತರು ತಮ್ಮ ಜಮೀನಿಗೆ ವಿಮೆ ಮಾಡಿಸಿಲ್ಲ ಅಂತಹವರು ಇದರ ಲಾಭವನ್ನು ಪಡೆದುಕೊಳ್ಳಲು ಆಗುವುದಿಲ್ಲ ಆದ್ದರಿಂದ ನೀವು ನಿಮ್ಮ ಬೆಳೆ ಬೆಳೆಯುವ ಮೊದಲು ನಿಮ್ಮ ಜಮೀನಿಗೆ ವಿಮೆಯನ್ನು ಮಾಡಿಸಿ ನಂತರ ಬೆಳೆಯನ್ನು ಬೆಳೆಯುವುದರಿಂದ ನಿಮ್ಮ ಬೆಳೆ ಹಾನಿಗೆ ಒಳಗಾದರೆ ಇದರ ನಷ್ಟವನ್ನು ಸರ್ಕಾರವು ತುಂಬಿಕೊಡುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರು ವಿಮೆ ಮಾಡಿಸುವುದನ್ನು ಮರೆಯಲೇ ಬಾರದು.
ತಮ್ಮ ಜಮೀನಿಗೆ ವಿಮೆ ಮಾಡಿಸಿರುವಂತಹ ರೈತರು ಪ್ರಸಕ್ತ ವರ್ಷದಲ್ಲಿ ತಮ್ಮ ಬೆಳೆಗಳು ಹಾನಿಗೆ ಒಳಗಾಗಿದ್ದರೆ ವಿಮಾ ಸಂಸ್ಥೆಗಳ ಮೂಲಕ ರೈತರ ಖಾತೆಗೆ ಹಣವು ಬಂದು ಸೇರಲಿದೆ. ಕೇಂದ್ರ ಸರ್ಕಾರವು ರೈತರಿಗೆ ಇನ್ನಷ್ಟು ಯೋಜನೆಗಳನ್ನು ರೂಪಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಈ ಯೋಜನೆಗಳ ನೆರವು ರೈತರಿಗೆ ಮುಟ್ಟುವ ಹಾಗೆ ಸರ್ಕಾರವು ನೋಡಿಕೊಳ್ಳಬೇಕು.