ಕೃಷಿ ಇಂದು ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲ. ರೈತನು ಕೂಡ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಪ್ರಸ್ತುತವಾಗಿ ಜನರಿಗೆ ಯಾವುದು ಬೇಡಿಕೆ ಇದೆ ಅದನ್ನು ಹೆಚ್ಚು ಇಳುವರಿ ನೀಡುವಂತೆ ಬೆಳೆದರೆ ಯಾವುದೇ ವ್ಯಾಪಾರಸ್ಥನಿಗಿಂತ ಕಡಿಮೆ ಇಲ್ಲದಂತೆ ಹಣ ಮಾಡಬಹುದು.
ಆದರೆ ಕೃಷಿಯಲ್ಲಿ ಖಂಡಿತವಾಗಿಯೂ ರಿಸ್ಕ್ ಇದ್ದೇ ಇರುತ್ತದೆ ಯಾಕೆಂದರೆ ಕೃಷಿ ಎನ್ನುವುದು ಮೊದಲು ಕೇಳುವುದು ಶ್ರದ್ದೆ ಹಾಗೂ ಶ್ರಮ. ಯಾರು ಭೂಮಿ ತಾಯಿಯನ್ನು ನಂಬಿ ಮನಸಾರೆಯಾಗಿ ಪ್ರಾರ್ಥಿಸಿ, ಕೃಷಿಗೆ ಕೈ ಹಾಕುತ್ತಾರೆ ಅವರಿಗೆ ಖಂಡಿತವಾಗಿಯೂ ಈ ಮಣ್ಣು ಕೈಹಿಡಿಯುತ್ತದೆ. ಆದರೆ ಸ್ವಲ್ಪ ಬುದ್ಧಿವಂತಿಕೆ ಇದ್ದರೆ ಮಾತ್ರ ದೊಡ್ಡ ಮಟ್ಟದಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚು ಆದಾಯ ಪಡೆಯಬಹುದು.
ಈಗ ಮಾರ್ಕೆಟ್ ನಲ್ಲಿ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ. ಆರೋಗ್ಯದ ದೃಷ್ಟಿಯಿಂದ ಜನರು ಹಣ್ಣುಗಳನ್ನು ಖರೀದಿಸುತ್ತಾರೆ ಹಾಗೂ ಹಣ್ಣುಗಳು ಬಳಸಿ ಅನೇಕ ಔಷಧಿಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಕೂಡ ತಯಾರಿಸಬಹುದಾದ ಕಾರಣ ಈ ಹಣ್ಣುಗಳಿಗೆ ವಿಪರೀತ ಬೇಡಿಕೆ ಇರುತ್ತದೆ. ಹಾಗಾಗಿ ಹಣ್ಣಿನ ಕೃಷಿಯನ್ನು ರೈತನೇನಾದರೂ ಅಳವಡಿಸಿಕೊಂಡರೆ ಆತ ಆರಂಭದಲ್ಲಿ ಸ್ವಲ್ಪ ಕಷ್ಟ ಪಟ್ಟರೆ ನಿರಂತರವಾಗಿ ಪ್ರತಿನಿತ್ಯವೂ ಆದಾಯ ಪಡೆಯಬಹುದು.
ಈ ಸುದ್ದಿ ಓದಿ:- ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ.!
ಅದು ಕೂಡ ಲಕ್ಷಗಟ್ಟಲೇ ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ನಮ್ಮ ಕರ್ನಾಟಕದ ಒಬ್ಬ ರೈತ ದಾಳಿಂಬೆ ಕೃಷಿ ಮಾಡಿ ಇಂದು ಮೊದಲ ಬೆಳೆಯಲ್ಲೇ ಕೋಟಿ ಹಣ ಸಂಪಾದನೆ ಮಾಡಿದ್ದಾರೆ. ಅವರ ಉದಾಹರಣೆಯೊಂದಿಗೆ ಈ ದಾಳಿಂಬೆ ಕೃಷಿ ಕೆಲ ಪ್ರಮುಖ ಸಂಗತಿಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಮಹಾರಾಷ್ಟ್ರದ ಜೈನ್ ಎನ್ನುವ ಕಂಪನಿಯಿಂದ ದಾಳಿಂಬೆ ಸಸಿಗಳನ್ನು ಖರೀದಿಸಿರುವ ರೈತ ಇಂದು ಅವುಗಳನ್ನು ಕಷ್ಟಪಟ್ಟು ಬೆಳೆಸಿ ಫಲವನ್ನು ಕೂಡ ಪಡೆಯುತ್ತಿದ್ದಾರೆ. ಬಾಲ್ಯದಿಂದಲೂ ಕೂಡ ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು ರಜಾ ದಿನಗಳಲ್ಲಿ ತಂದೆ ಹಾಗೂ ತಾತನಿಗೆ ಸಹಾಯ ಮಾಡಲು ಜಮೀನಿಗೆ ಹೋಗುತ್ತಿದ್ದರಂತೆ, ತಾವು ಬೆಳೆದು ಒಂದು ಹಂತಕ್ಕೆ ಬಂದ ಮೇಲೆ ಇದೇ ಕೃಷಿಯಿಂದ ಆದರ್ಶನಾಗಿ ಬದುಕಬೇಕು ಎಂದು ನಿರ್ಧರಿಸಿ ಬಹಳ ಧೈರ್ಯ ಮಾಡಿ ದಾಳಿಂಬೆ ಕೃಷಿ ಆರಂಭಿಸಿ ಬಿಟ್ಟರು.
ಮೊದಲಿಗೆ ರೂ.40 ಒಂದು ಸಸಿ ಖರೀದಿಸಿ 5 ಎಕರೆ ಜಮೀನಿಗೆ ಒಟ್ಟು 2250 ದಾಳಿಂಬೆ ಮರಗಳನ್ನು ನೆಟ್ಟು ಬೆಳೆಸಿದ ಇವರು ಇಂದು ನಿರಂತರವಾಗಿ ಅದರ ಪ್ರಯೋಜನವನ್ನು ಪಡೆಯುತ್ತಾ ಇದ್ದಾರೆ ಮತ್ತು ಇದು ಎಷ್ಟು ಕ’ಷ್ವವಾಗಿತ್ತು ಮತ್ತು ಈಗ ಎಷ್ಟು ಸಂತೋಷವಾಗಿದೆ ಎನ್ನುವ ಬಗ್ಗೆ ಆಸಕ್ತಿಯಿಂದ ಬರುವವರೆಗೆ ಮಾಹಿತಿ ಕೂಡ ನೀಡುತ್ತಿದ್ದಾರೆ.
ಈ ಸುದ್ದಿ ಓದಿ:- ಯುವನಿಧಿ ಯೋಜನೆ ಫಲಾನುಭವಿಗಳೇ ಇಲ್ಲಿ ಗಮನಿಸಿ… ನಿಮಗೆ ಹಣ ಬರಬೇಕಾದ್ರೆ ಪ್ರತಿ ತಿಂಗಳು ಈ ದಾಖಲೆ ಸಲ್ಲಿಸಬೇಕು.!
ದಾಳಿಂಬೆ ಕೃಷಿ ಮಾಡಲು ಖಂಡಿತವಾಗಿ ರಿಸ್ಕ್ ಇದ್ದೇ ಇದೆ. ಯಾಕೆಂದರೆ ಫಲ ಬರುವವರೆಗೆ ಅಂದರೆ ಒಂದೆರಡು ವರ್ಷ ಆರಂಭದಲ್ಲಿ ಅವುಗಳಿಗೆ ಸರಿಯಾಗಿ ಗೊಬ್ಬರ ಹಾಗೂ ನೀರು ಕೊಟ್ಟು ಪೋಷಣೆ ಮಾಡಿಕೊಳ್ಳಬೇಕು. ಫಸಲು ಬಂದ ಮೇಲೆ ಗಿಡಗಳಿಗೆ ರೋಗ ಬೀಳದಂತೆ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಔಷಧಿ ಕೂಡ ಲೀಟರ್ ಗಟ್ಟಲೆ ಬೇಕಾಗುತ್ತದೆ ಮತ್ತು ಫಸಲು ಕೈಗೆ ಸಿಕ್ಕಿದ ಮೇಲೆ ಕಳ್ಳರ ಕಾಟ ಇರುತ್ತದೆ.
ಜಮೀನಿನಲ್ಲಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನು ಬೆಲೆ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ ಸದಾಕಾಲ ದಾಳಿಂಬೆ ಒಳ್ಳೆಯ ಬೆಲೆಗೆ ಮಾರಾಟ ಆಗುತ್ತದೆ. ಯಶಸ್ವಿ ರೈತನ ಕಡೆಯಿಂದ ಆತನ ಯಶೋಗಾಥೆ ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.