ತನ್ನ ಗಂಡನ ಹೆಂಡತಿಯರಿಗೆ ಬಾಣಂತನ ಮಾಡಿದ ರೇಖಾದಾಸ್.

ನಮ್ಮ ಚಂದನ ವನದಲ್ಲಿ ಸಾಕಷ್ಟು ನಟರು ಮತ್ತು ನಟಿಯರನ್ನು ನಾವು ನೋಡಿದ್ದೇವೆ, ಬಣ್ಣ ಹಚ್ಚುವ ನಟ ಮತ್ತು ನಟಿಯರ ಜೀವನ ನಾವು ಎಣಿಕೆ ಮಾಡಿದರೆ ಸುಲಭವಾಗಿ ಇರುವುದಿಲ್ಲ. ಅದರಲ್ಲಿ ರೇಖಾದಾಸ್ ಕೂಡ ಒಬ್ಬರು ಕನ್ನಡ ಚಿತ್ರರಂಗದಲ್ಲಿ ಬಣ್ಣದ ರಾಣಿ ಎಂದೆಂದೂ ಗುರುತಿಸಿ ಕೊಂಡಿರುವಂತಹ ರೇಖಾ ದಾಸ್ ಅವರು ಕನ್ನಡದ ಚಲನಚಿತ್ರ ರಂಗದ ಬಹು ಮುಖ್ಯವಾದ ಪ್ರತಿಭೆ. ತಮ್ಮ 14ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ಬಾಲನಟಿಯಾಗಿ ಪ್ರವೇಶ ಮಾಡಿದರು. ರೇಖಾ ದಾಸ್ ನಟಿಸಿದಂತಹ ಮೊದಲ ಚಿತ್ರವೆಂದರೆ ಅದು ‘ಕಂಪನ’ ಟೈಗರ್ ಪ್ರಭಾಕರ್ ಅವರ ಈ ಸಿನಿಮಾದಲ್ಲಿ ಆದರೆ ಅವರಿಗೆ ಅಷ್ಟೊಂದು ಹೆಸರನ್ನು ತಂದು ಕೊಡಲಿಲ್ಲ. ಇವರಿಗೆ ದೊಡ್ಡ ಬ್ರೇಕ್ ಅನ್ನು ನೀಡಿದಂತಹ ಸಿನಿಮಾ ಎಂದರೆ ಅದು ಶಶಿಕುಮಾರ್ ಅವರ ಅಭಿನಯದ ‘ಬಾರೆ ನನ್ನ ಮುದ್ದಿನ ರಾಣಿ’ ಈ ಚಿತ್ರ ಇವರಿಗೆ ದೊಡ್ಡ ಹೆಸರು ತಂದು ಕೊಟ್ಟಿತು.

WhatsApp Group Join Now
Telegram Group Join Now

ಇವರು ಚಿತ್ರರಂಗದಲ್ಲಿ ರಂಗಭೂಮಿ ಜೊತೆಗೆ ತಮ್ಮ ಕಿರುತೆರೆಯಲ್ಲೂ ಸಹ ಅಭಿನಯದ ಛಾಪನ್ನು ಮೂಡಿಸಿದ್ದಾರೆ. ರೇಖಾ ದಾಸ್ ಅವರ ಮೇಕಪ್ ಶೈಲಿಯಿಂದಾಗಿ ಅವರು ಜನರಿಗೆ ಹೆಚ್ಚು ಪರಿಚಿತರಾದರು. ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಟೆನ್ನಿಸ್ ಕೃಷ್ಣ ಅವರ ಪತ್ನಿಯಾಗಿ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡಿರುವಂತಹ ಇವರ ಕಾಂಬಿನೇಶನ್ ನಲ್ಲಿ ಮೂಡಿ ಬಂದಿರುವಂತಹ ಚಿತ್ರಗಳು ಎಲ್ಲವೂ ತುಂಬಾ ಚೆನ್ನಾಗಿದೆ. ಇವರು ಚಿತ್ರರಂಗದಲ್ಲಿ ನಟಿಸುತ್ತಿರುವಂತಹ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಓಮ್ ಪ್ರಕಾಶ್ ಅವರ ಹಿಂದೆ ಬಿದ್ದು ಅವರನ್ನು ಮದುವೆಯಾಗುವಂತೆ ಒತ್ತಾಯಿಸಿದರು ಆದರೆ ಪ್ರಾರಂಭದಲ್ಲಿ ರೇಖಾ ದಾಸ್ ಅವರು ಇದನ್ನು ಒಪ್ಪಲಿಲ್ಲ ನಂತರ ಓಂ ಪ್ರಕಾಶ್ ಅವರು ಎಡಬಿಡದೆ ಅವರನ್ನು ಕಾಡಿದರು ನಂತರ ರೇಖಾ ದಾಸ್ ಮದುವೆಗೆ ಒಪ್ಪಿಕೊಂಡ ನಿರ್ದೇಶಕರಾದ ಓಂ ಪ್ರಕಾಶ್ ಅವರ ಕೈ ಹಿಡಿದರು.

ಮದುವೆಯ ನಂತರ ಪ್ರಾರಂಭದ ದಿನಗಳು ಚೆನ್ನಾಗಿದ್ದರೂ ನಂತರ ಅವರಿಬ್ಬರ ಮಧ್ಯೆ ಒಂದಷ್ಟು ಭಿನ್ನಾಭಿಪ್ರಾಯಗಳು ಪ್ರಾರಂಭವಾದವು. ಓಮ್ ಪ್ರಕಾಶ್ ಮತ್ತು ರೇಖಾದಾಸ್ ಅವರಿಗೆ ಒಬ್ಬಳು ಮಗಳು ಜನಿಸಿದಳು. ಅವರೇ ಶ್ರಾವ್ಯ ರಾವ್ ಇವರು ಪ್ರಸ್ತುತದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ರೇಖಾದಾಸ್ ಅವರು ಕನ್ನಡದಲ್ಲಿ 680ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಜೊತೆಗೆ ತುಳುವಿನಲ್ಲಿ 3 ಚಿತ್ರಗಳಲ್ಲಿ ನಟಿಸಿದ್ದಾರೆ, ಇವರು ಸುಮಾರು 6000 ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ 500ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಸುಮಾರು 3500 ಹಾಸ್ಯ ಕಾರ್ಯಕ್ರಮಗಳು ಸುಮಾರು 3000 ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ಸಹ ಇವರು ನಟಿಸಿದ್ದಾರೆ.

ಇಷ್ಟೆಲ್ಲಾ ಪ್ರತಿಭೆಯನ್ನು ಇಟ್ಟುಕೊಂಡಿರುವಂತಹ ರೇಖಾದಾಸ್ ಅವರ ಜೀವನ ಅಂದುಕೊಂಡಷ್ಟು ಈಸಿಯಾಗಿ ಇರಲಿಲ್ಲ ಅವರು ತಮ್ಮ ಗಂಡನಿಂದ ಸಾಕಷ್ಟು ನೋವನ್ನು ಅನುಭವಿಸಿದ್ದರು ರೇಖಾದಾಸ್ ಅವರಿಗೆ ವಿಚ್ಛೇದಿತ-ದ-ನ ನೀಡಿದಂತಹ ಒಮ್ ಪ್ರಕಾಶ್ ಅವರು ನಂತರ ಬೇರೆ ಮದುವೆಯನ್ನು ಮಾಡಿಕೊಳ್ಳುತ್ತಾರೆ ಅಂತಹ ಸಂದರ್ಭಗಳಲ್ಲಿ ಪ್ರಕಾಶ್ ಅವರ ಪತ್ನಿ ರೇಖಾ ದಾಸ್ ಅವರ ಸ್ವತಹ ಬಾಣಂತನವನ್ನು ಮಾಡಿದ್ದಾರೆ. ಈ ಒಂದು ವಿಷಯವನ್ನು ಕೇಳಿದರೆ ನೋವುಂಟಾಗುತ್ತದೆ. ಈ ವಿಷಯ ಬದ್ದ ಬಗ್ಗೆ ನಿಮ್ಮ ಅನಿಸಿಕೆಗಳು ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now