ಹಿಂದೆ ಡಯಾಬಿಟಿಸ್ ಎಂದರೆ ಅದನ್ನು ವಯೋ ಸಹಜ ಕಾಯಿಲೆ ಎಂದುಕೊಳ್ಳಲಾಗುತ್ತಿತ್ತು. ಅದರಲ್ಲೂ ಗ್ರಾಮೀಣ ಪ್ರದೇಶದವರು ವಯಸ್ಸಾಗಿ 70, 80 ದಾಟಿದರೂ ಡಯಾಬಿಟಿಸ್ ಇಲ್ಲದೆ ಬದುಕಿರುವ ಉದಾಹರಣೆಗಳು ಕೂಡ ಇತ್ತು. ಡಯಾಬಿಟಿಸ್ ಬರುವುದು ಶ್ರೀಮಂತರಿಗೆ, ಜೀವನದಲ್ಲಿ ಸೋಂಬೇರಿಗಳಾಗಿ ಆರಾಮಾಗಿ ಇರುವವರಿಗೆ ಎಂದು ಕೂಡ ಮಾತನಾಡಲಾಗುತ್ತಿತ್ತು.
ಆದರೆ ಈಗಿನ ಕಾಲದಲ್ಲಿ 20ರ ಆಸಪಾಸಿನವರೆಗೂ ಕೂಡ ಡಯಾಬಿಟಿಸ್ ಬರುತ್ತಿದೆ ಗರ್ಭಿಣಿ ಸ್ತ್ರೀಯರಿಗೆ ಡಯಾಬಿಟಿಸ್ ಆಗುತ್ತಿದೆ, ಇನ್ನು ಪ್ರಪಂಚವನ್ನೇ ಅರಿಯದ ಮುದ್ದು ಕಂದಮ್ಮಗಳಿಗೂ ಕೂಡ ಡಯಾಬಿಟಿಸ್ ಕಾಡುತ್ತಿದೆ. ಯಾಕೆ ಇಷ್ಟು ಬೇಗ ಬದುಕು ಈ ರೀತಿ ಬದಲಾಗಿ ಹೋಯಿತು ಅದರಲ್ಲೂ ಕೇವಲ 20-30 ವರ್ಷಗಳ ಅಂತರದಲ್ಲಿ ಇಷ್ಟೊಂದು ಬದಲಾವಣೆ ಹೇಗಾಯಿತು ಎಂದು ನೋಡುವುದಾದರೆ.
ಎಲ್ಲದಕ್ಕೂ ಕೂಡ ನಾವು ಈಗ ಬದಲಾಯಿಸಿಕೊಂಡಿರುವ ನಮ್ಮ ಜೀವನ ಶೈಲಿಗೆ ಕಾರಣ ಎಂದೇ ಹೇಳಬಹುದು. ಈಗ ನಾವು ಬದುಕುತ್ತಿರುವ ರೀತಿ ಡಯಾಬಿಟಿಸ್ ಮಾತ್ರವಲ್ಲ ಇನ್ನು ಅನೇಕ ಕಾಯಿಲೆಗಳಿಗೆ ಆಹ್ವಾನವಾಗಿದೆ. ಡಯಾಬಿಟಿಸ್ ಖಂಡಿತ ಕಾಯಿಲೆ ಅಲ್ಲ. ಇದು ಒಂದು ಡಿಸಾರ್ಡರ್. ದೇಹದಲ್ಲಿ ಏನೋ ವ್ಯತ್ಯಾಸವಾಗುತ್ತಿದೆ ಎನ್ನುವುದನ್ನು ತಿಳಿಸಿ ಮುಂದೆ ಇದನ್ನು ನಿಯಂತ್ರಣದಲ್ಲಿ ಇಡದೆ ಇದ್ದರೆ ದೊಡ್ಡ ಅನಾಹುತ ದೇಹಕ್ಕೆ ಕಾದಿದೆ ಎನ್ನುವುದನ್ನು ತಿಳಿಸುವ ಸೂಚನೆ ಇದು.
ಹಿಂದಿನ ಕಾಲದವರಿಗೆ ಈ ಸಮಸ್ಯೆ ಇಲ್ಲ ಈಗ ಯಾಕೆ ಇಷ್ಟು ಬೇಗ ಡಯಾಬಿಟಿಕ್ ಆಗುತ್ತಿದ್ದೇವೆ ಎಂದು ಕುಳಿತು ಒಮ್ಮೆ ಯೋಚನೆ ಮಾಡಿದರೆ, ನಾವು ಮಾಡುತ್ತಿರುವ ಸಾಕಷ್ಟು ತಪ್ಪುಗಳು ಕಣ್ಣ ಮುಂದೆ ಬರುತ್ತವೆ. ಅವುಗಳಲ್ಲಿ ಕೆಲವನ್ನು ತಿದ್ದುಕೊಂಡು ಬಿಟ್ಟರೆ ಜೀವನದಲ್ಲಿ ಡಯಾಬಿಟಿಸ್ ಮಾತ್ರವಲ್ಲದೆ ಇನ್ನು ಅದೆಷ್ಟು ಕಾಯಿಲೆಗಳಿಂದ ತಪ್ಪಿಸಿಕೊಂಡು ಸಂತೋಷದಿಂದ ಜೀವಿಸಿ, ನೆಮ್ಮದಿಯಾಗಿ ಬದುಕನ್ನು ಮುಗಿಸಬಹುದು.
ಆಗಿನ ಕಾಲದಲ್ಲಿ ಶಾಲೆಗೆ, ಕಾಲೇಜಿಗೆ, ಆಫೀಸ್ ಗೆ ಅಥವಾ ಹೊಲಗದ್ದೆಗಳಿಗೆ ಆಗಲಿ ನಡೆದುಕೊಂಡೇ ಹೋಗುತ್ತಿದ್ದರು ಆದರೆ ಈಗ ಮಕ್ಕಳಿಗೆ ಶಾಲೆಗೆ ವ್ಯಾನ್, ಆಫೀಸ್ ಗೆ ಹೋಗಲು ಬೈಕ್ ಕಾರು, ರೈತನು ಕೂಡ ಜಮೀನಿಗೆ ಇಂದು ನಡೆದುಕೊಂಡು ಹೋಗುತ್ತಿಲ್ಲ ಇದು ಮುಖ್ಯ ಕಾರಣ.
ಜೊತೆಗೆ ಡಯಾಬಿಟಿಕ್ ಬಂದವರೇ ಅಥವಾ ಹೃದಯ ಸಂಬಂಧಿತ ಸಮಸ್ಯೆ ಇದ್ದವರೇ ವಾಕಿಂಗ್ ಮಾಡಬೇಕು ವ್ಯಾಯಾಮ ಮಾಡಬೇಕು ಎನ್ನುವ ಕೆ’ಟ್ಟ ಮನಸ್ಥಿತಿ ನಮ್ಮ ತಲೆಗೆ ತುಂಬಿದೆ, ಅದನ್ನು ಬಿಟ್ಟು ಪ್ರತಿನಿತ್ಯವೂ ವಾಕಿಂಗ್ ಮಾಡುವುದು ವ್ಯಾಯಾಮ ಯೋಗ ರೂಢಿಸಿಕೊಳ್ಳೋದು ದೇಹಕ್ಕೆ ಒಳ್ಳೆಯದು ಎನ್ನುವ ಮನವರಿಕೆ ಆಗಬೇಕು.
ಈಗ ಆಹಾರದಲ್ಲಿ ಸಕ್ಕರೆ ಬಳಕೆ ಹೆಚ್ಚಾಗಿದೆ, ಹಿಂದಿನ ಕಾಲದಲ್ಲಿ ಬೆಲ್ಲ, ಜೇನುತುಪ್ಪ ಬಳಸುತ್ತಿದ್ದರು. ಅದು ಕೂಡ ಶುಗರ್ ಬರುವುದಕ್ಕೆ ಮುಖ್ಯ ಕಾರಣವಾಗಿದೆ. ಹಾಗೆ ಹಿಂದಿನ ಕಾಲದಲ್ಲಿ ರಾಗಿ ಸಜ್ಜೆ ನವಣೆ ಉರ್ದು ಮುಂತಾದ ದಾನ್ಯಗಳನ್ನು ತಿನ್ನುವವರು ಬಡವರು ಎನ್ನುವ ಭಾವನೆ ಇತ್ತು ಅದನ್ನು ತಿನ್ನಲು ರೂಢಿಸಿಕೊಂಡವರು ಇಂದು ಆರೋಗ್ಯವಾಗಿದ್ದಾರೆ ಆದರೆ ಬಿಳಿ ಬಣ್ಣದ ಪದಾರ್ಥಗಳನ್ನು ತಿನ್ನುವುದು ಪ್ರತಿಷ್ಠೆ ಎಂದುಕೊಂಡವರೆಲ್ಲ ಸಕ್ಕರೆ ಕಾಯಿಲೆಗೆ ತುತ್ತಾಗಿದ್ದಾರೆ.
ಈ ರೀತಿಯ ಸಣ್ಣ ಸಣ್ಣ ತಪ್ಪುಗಳಿಂದ ನಾವಿಂದು ಶುಗರ್ ಮಾತ್ರವಲ್ಲದೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ . ಇದನ್ನು ಕಂಟ್ರೋಲ್ ಮಾಡಲು ಅತಿ ಮುಖ್ಯವಾಗಿ ನಾವು ತಿನ್ನುವ ಆಹಾರದ ಮೇಲೆ ಬಹಳ ಎಚ್ಚರಿಕೆ ಇರಬೇಕು. ಯಾಕೆಂದರೆ ಇತಿ ಮಿತ ಕಾಲ ನಿಯಮವರಿತು ತಿಂದಾಗ ದೇಹ ಬಹಳ ಆರೋಗ್ಯವಾಗಿ ಇರುತ್ತದೆ.
ನಾವು ಯಾವುದನ್ನು ತಿನ್ನುತ್ತಿದ್ದೇವೆ ಎನ್ನುವುದರ ಬಗ್ಗೆ ನಮಗೆ ಸ್ಪಷ್ಟ ಜ್ಞಾನ ಇರಬೇಕು ಜೊತೆಗೆ ನಾವು ಎಷ್ಟು ತಿನ್ನಬೇಕು ಎನ್ನುವ ಮಿತಿಯು ಗೊತ್ತಿರಬೇಕು ಹಾಗೆ ಕಾಲಕ್ಕೆ ತಕ್ಕ ಹಾಗೆ ಸರಿಯಾದ ಸಮಯಕ್ಕೆ ಊಟ ನಿದ್ರೆ ಆಗಬೇಕು. ಇಂದು ದೇಹಕ್ಕೆ ಬೇಡ ಅದನ್ನು ತಿನ್ನುತ್ತಿದ್ದೇವೆ ಪ್ರಕೃತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಬಾಯಿ ರುಚಿಗೆ ಸಿಕ್ಕಸಿಕ್ಕದನ್ನೆಲ್ಲ ತಿಂದು ರೋಗಿಗಳಾಗುತ್ತಿದ್ದೇವೆ.
ಉದಾಹರಣೆಗೆ ಹುಟ್ಟುಹಬ್ಬಗಳಿಗೆ ಕೇಕ್ ಕೊಡುತ್ತಾರೆ. ಅದಕ್ಕೆ ಹಾಕುವ ಕಲರಿಂದ ಹಿಡಿದು ಕ್ರೀಮ್ ವರೆಗೆ ಅನೇಕ ಕೆಮಿಕಲ್ ತುಂಬಿರುತ್ತದೆ, ನಾವೇ ನಮ್ಮ ಕೈಯಾರೆ ವಿ’ಷ ತಿಂದು ಮತ್ತೆ ಬೇರೆಯವರಿಗೂ ಹಂಚುತ್ತಿದ್ದೇವೆ. ಅದರ ಬದಲು ಕಡಲೆ ಚಕ್ಕೆ ಅಥವಾ ಮೈಸೂರು ಪಾಕ್ ಮಾಡಿಸಿ ಹಂಚಬಹುದು ಇಂತಹ ಬದಲಾವಣೆ ಬರಬೇಕು.
ಪ್ಲಾಸ್ಟಿಕ್ ತಟ್ಟೆ ಲೋಟ ಬಳಸುವ ಬದಲು ಬಾಳೆಎಲೆ ಅಡಿಕೆಯಲ್ಲಿ ಮುತ್ತುಗದ ಎಲೆ ಅಥವಾ ಪಿಂಗಾಣಿ, ಹಿತ್ತಾಳೆ, ಬೆಳ್ಳಿ ಪಾತ್ರೆಗಳಲ್ಲಿ ಊಟ ಮಾಡುವುದು ನೀರು ಕುಡಿಯುವುದು ಬಹಳ ಉತ್ತಮ ಪರಿಣಾಮ ಬೀರುತ್ತದೆ. ಆಗಿನ ಕಾಲದಲ್ಲಿ ಈ ರೀತಿ ಹೆಚ್ಚು ಪ್ಲಾಸ್ಟಿಕ್ ಬಳಕೆ ಇರಲಿಲ್ಲ ಹಾಗಾಗಿ ಅವರು ಹೆಚ್ಚು ಆರೋಗ್ಯವಾಗಿದ್ದರು.
ಈಗ ಮನುಷ್ಯ ಎಷ್ಟು ವಿಷಯವಾಗುತ್ತಿದ್ದಾನೆ ಎಂದರೆ ಮುಂದೆ ಒಂದು ದಿನ ಮನುಷ್ಯ ಸ’ತ್ತಾ’ಗ ಆತನನ್ನು ಹೂಳುವುದು ಅಥವಾ ಸುಡುವುದು ಕೂಡ ಪ್ರಕೃತಿಗೆ ಮಾ’ರ’ಕವಾಗಬಹುದು ಎನ್ನುವ ಹಂತ ತಲುಪುತ್ತಿದ್ದಾನೆ. ಆಗಿನ ಕಾಲದಲ್ಲಿ ಯಾರಿಗೂ ದು’ರಾ’ಸೆ ಹೆಚ್ಚಾಗಿ ಇರಲಿಲ್ಲ. ಒಂದು ಮನೆ ಕಟ್ಟಿದರೆ, ಮಕ್ಕಳಿಗೆ ಮದುವೆ ಮಾಡಿದರೆ, ಮಗನಿಗೆ ಹುದ್ದೆ ದೊರಕಿದರೆ ಅವರ ಬದುಕು ಸಾರ್ಥಕ ಎಂದುಕೊಳ್ಳುತ್ತಿದ್ದರು.
ಆದರೆ ಈಗ ಕೋಟಿ ಕೋಟಿ ಹಣಗಳಿಸಿದರು ಆ ತೃಪ್ತಿ ಇಲ್ಲ. ಹಣವನ್ನು ಕಾಪಾಡಿಕೊಳ್ಳುವುದರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಹಣದ ಹಿಂದೆ ಬಿಟ್ಟು ಅಥವಾ ಮತ್ಯಾವುದೋ ದಾಕ್ಷಿಣ್ಯಕ್ಕೆ ಒಳಗಾಗಿ ಹೋಲಿಕೆಗಾಗಿ ಬದುಕಿ ಬದುಕನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಆರೋಗ್ಯಕರವಾಗಿ ಜೀವನವನ್ನು ಜೀವಿಸಿ ಬದುಕಿನ ಮೌಲ್ಯವನ್ನು ಸವಿಯುತ್ತ ಬದುಕು ಸವೆಸುವುದು ಉತ್ತಮ.