ಸ್ಟಾರ್ ನಟರುಗಳ ಮಕ್ಕಳಿಗೆ ಚಿತ್ರರಂಗಕ್ಕೆ ಬರುವುದು ಕಷ್ಟವೇನಲ್ಲ, ಸಾಕಷ್ಟು ಕಲಾವಿದರ ಮಕ್ಕಳು ಸಹ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ಕೆಲವೊಬ್ಬರು ಚಿತ್ರರಂಗದಲ್ಲಿ ಯಶಸ್ಸನ್ನು ಕಂಡರೆ ಇನ್ನೂ ಕೆಲವರು ಕಲೆಯಿಂದ ಹಿಂದೆ ಸರಿದಿದ್ದಾರೆ ಕಲಾ ಸರಸ್ವತಿ ಎಲ್ಲರಿಗೂ ಸಹ ಒಲಿಯುವುದಿಲ್ಲ. ಆದರೆ ಈ ಸಾಲಿನಲ್ಲಿ ಪುನೀತ್ ರಾಜ್ಕುಮಾರ್ ಅವರು ಬರುವುದಿಲ್ಲ ಸ್ಟಾರ್ ನಟನ ಮಗನಾಗಿದ್ದರೂ ಸಹ ಪುನೀತ್ ರಾಜ್ಕುಮಾರ್ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ಡಾಕ್ಟರ್ ರಾಜ್ಕುಮಾರ್ ಅವರ ಮೂರು ಜನ ಮಕ್ಕಳು ಸಹ ಚಿತ್ರರಂಗದಲ್ಲಿ ಇಂದಿಗೂ ಸಹ ನೆಲೆಯೂರಿದ್ದಾರೆ ಅದರಲ್ಲಿಯೂ ಪುನೀತ್ ರಾಜ್ಕುಮಾರ್ ಅವರು ಈ ಸಾಲಿನಲ್ಲಿ ಮುಂದೆ ಇದ್ದಾರೆ. ನಟನಾಗಿ ನಿರ್ಮಾಪಕನಾಗಿ, ಸಂಗೀತಗಾರನಾಗಿ, ಡ್ಯಾನ್ಸರ್ ಆಗಿ ಅಪ್ಪು ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದರೆ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮ್ಮ ಚಿತ್ರರಂಗಕ್ಕೆ ದೊಡ್ಡ ಹೊಡೆತವೇ ಬಿದ್ದಂತೆ ಆಗಿದೆ.
ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಪ್ಪು ಅವರು ದೊಡ್ಡ ಸ್ಟಾರ್ ನಟನಾಗಿ ಗುರುತಿಸಿಕೊಂಡು ಪುನೀತ್ ರಾಜ್ಕುಮಾರ್ ಅವರ ಜೊತೆಯಲ್ಲಿ ಸಿನಿಮಾಗಳನ್ನು ಮಾಡಲು ಸಾಕಷ್ಟು ಜನ ನಿರ್ದೇಶಕರು ಕಾಯುತ್ತಾ ಇದ್ದರು. ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಎಲ್ಲೆಡೆ ಯಶಸ್ವಿಯಾದಂತಹ ಪ್ರದರ್ಶನ ಕಾಣುತ್ತಿದೆ ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕೂಡ ಆಗುತ್ತಿದೆ. ಸಾಕಷ್ಟು ಜನ ಅಪ್ಪು ಅವರ ಅಭಿಮಾನಿಗಳು ಈ ಸಿನಿಮಾ ನೋಡಿ ಅಪ್ಪು ಅವರನ್ನು ಹಾಡಿ ಹೊಗಳಿದ್ದಾರೆ. ಕೇವಲ ಅಭಿಮಾನಿಗಳು ಅಷ್ಟೇ ಅಲ್ಲದೆ ನಮ್ಮ ಕನ್ನಡ ಚಿತ್ರರಂಗದ ಸಾಕಷ್ಟು ನಟ ಮತ್ತು ನಟಿಯರು ಸಹ ಚಿತ್ರಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಚಿತ್ರ ಶೂಟಿಂಗ್ ಇರುವ ಸಂದರ್ಭದಲ್ಲಿಯೇ ಒಳ್ಳೆಯ ಸಂದೇಶಗಳಿರುವ ಬೇರೆ ಯಾವುದೇ ಸಿನಿಮಾ ಆಫರ್ಗಳು ಬಂದರೂ ಸಹ ಅದಕ್ಕೆ ಸಹಿ ಹಾಕುತ್ತಿದ್ದರು.
ಒಂದರ ಮೇಲೊಂದರಂತೆ ಅವರಿಗೆ ಚಿತ್ರಗಳು ಒದಗಿ ಬರುತ್ತಿದ್ದವು ನಿರ್ದೇಶಕರು ಇವರ ಚಿತ್ರಗಳಿಗೆ ಕೋಟಿ ಕೋಟಿ ಹಣವನ್ನು ಇನ್ವೆಸ್ಟ್ ಮಾಡಲು ಕಾತುರದಿಂದ ಕಾಯುತ್ತಾ ಕುಳಿತಿದ್ದರು ಪುನೀತ್ ರಾಜ್ಕುಮಾರ್ ಅವರ ಚಿತ್ರಗಳ ಮೇಲೆ ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದರು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಓರ್ವ ನಟನಿಗೆ ಅತಿ ಹೆಚ್ಚಾಗಿ ಚಿತ್ರವನ್ನು ನಿರ್ಮಿಸಿದೆ ಎಂದರೆ ಅದು ಪುನೀತ್ ರಾಜ್ಕುಮಾರ್ ಅವರಿಗೆ ಮಾತ್ರ ಎನ್ನಬಹುದು. ಇದನ್ನು ನೋಡಿದರೆ ನಮಗೆ ತಿಳಿಯುತ್ತದೆ ಪುನೀತ್ ರಾಜ್ಕುಮಾರ್ ಅವರ ಗ್ರೇಸ್ ಸಿನಿಮಾದಲ್ಲಿ ಎಷ್ಟಿತ್ತು ಎಂಬುದು. ಪುನೀತ್ ರಾಜ್ಕುಮಾರ್ ಅವರು ಸಾ’ವ’ನ್ನ’ಪ್ಪುವ ಮೊದಲು ಸಾಕಷ್ಟು ಸಿನಿಮಾಗಳಿಗಲ್ಲಿ ನಟಿಸಲು ಸಹಿಯನ್ನು ಸಹ ಹಾಕಿದ್ದರು. ಆ ಎಲ್ಲಾ ಸಿನಿಮಾಗಳು ಸಹ ಅವರ ಅಗಲಿಕೆಯ ನಂತರ ಉಳಿದುಕೊಂಡಿವೆ, ಕೆಲವೊಂದು ಸಿನಿಮಾಗಳು ಘೋಷಣೆಯಾಗಿದ್ದರೆ ಇನ್ನು ಕೆಲವು ಸಿನಿಮಾಗಳು ಘೋಷಣೆ ಆಗಿರಲಿಲ್ಲ, ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಲೂಸಿಯಾ ಪವನ್ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲಿ ಪುನೀತ್ ನಟಿಸಬೇಕಿದ್ದು ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳೂ ಕೂಡ ಆರಂಭಗೊಂಡಿದ್ದವು.
ಮತ್ತೊಂದು ಚಿತ್ರ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಕಾಂಬಿನೇಷನ್ ಸೆಟ್ಟೇರಬೇಕಿತ್ತು ಆದರೆ ಇದು ಸಹ ಕನಸಾಗಿಯೇ ಉಳಿದುಕೊಂಡಿತು. ಅಷ್ಟೇ ಅಲ್ಲದೆ ದಿನಕರ್ ತೂಗುದೀಪ್ ಅವರ ನಿರ್ದೇಶನದ ಚಿತ್ರ ಒಂದಕ್ಕೆ ಗ್ರೀನ್ ಸಿಗ್ನಲ್ ಅನ್ನು ಕೊಟ್ಟಿದ್ದರು ಅದು ಸಹ ನೆರವೇರಲಿಲ್ಲ. ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಶನ್ ನಲ್ಲಿ ಪುನೀತ್ ಅವರು ಆರ್ಮಿ ಆಫೀಸರ್ ಗೆಟಪ್ನಲ್ಲಿ ಕಾಣಿಸಿಕೊಳ್ಳಬೇಕಿತ್ತು ಆ ಚಿತ್ರಕ್ಕು ಒಪ್ಪಿಗೆ ಕೊಡಲಾಗಿತ್ತು. ಈ ಎಲ್ಲಾ ಸಿನಿಮಾಗಳು ಸಹ ಅಪ್ಪು ಅಗಲಿಕೆಯ ನಂತರ ಹಾಗೆಯೇ ಉಳಿದುಕೊಂಡು ಬಿಟ್ಟಿವೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.