ಸರ್ಕಾರಿ ಅರಣ್ಯ ಭೂಮಿ (forest land) ಅಕ್ಕ ಪಕ್ಕ ಕೃಷಿ ಮಾಡುತ್ತಿದ್ದ ರೈತರಿಗೆ (farmers) ಸರ್ಕಾರದ ಕಡೆಯಿಂದ ಒಂದು ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ಈ ರೀತಿ ಕಾಡಂಚಿನ ಕೃಷಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದ ರೈತರು ಅರಣ್ಯ ಇಲಾಖೆಯಿಂದ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಇದಕ್ಕೆಲ್ಲ ಕಾರಣ ಕಂದಾಯ ಭೂಮಿಯನ್ನು ಅರಣ್ಯ ಭೂಮಿಯ ಎಂದು ನೋಟಿಫೈ ಮಾಡಿರುವುದು.
ಇದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲ ದಶಕಗಳ ಕಾಲದಿಂದ ಇದು ಹೀಗೆ ನಡೆದುಕೊಂಡೇ ಬರುತ್ತಿದೆ. ಅದೇ ರೀತಿ ಆ ರೈತ ಕುಟುಂಬಗಳು ಕೂಡ ಈ ಸಮಸ್ಯೆಗಳಿಂದ ಪಾಡು ಪಡುತ್ತಲೇ ಇದ್ದಾರೆ. ಇವುಗಳ ಜಂಟಿ ಸರ್ವೆ ಕಾರ್ಯ ನಡೆದರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುವುದು ತಜ್ಞರ ಸಲಹೆ ಈ ಬಗ್ಗೆ ಅನೇಕ ಬಾರಿ ಸರ್ಕಾರ ಮಟ್ಟದಲ್ಲಿ ಚರ್ಚೆ ಆದರೂ ಕ್ರಮ ಜರುಗಿರಲಿಲ್ಲ.
ಈಗ ಅಂತಿಮವಾಗಿ ಫೆಬ್ರವರಿ 17ರಂದು ನಡೆದ ಚಳಿಗಾಲದ ಅಧಿವೇಶದಲ್ಲಿ ಸಚಿವ ಸಂಪುಟವು (Cabinet Permit) ಇದಕ್ಕೆ ಒಪ್ಪಿಗೆ ನೀಡಿದ್ದು, ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Revenue Minister Krishna Bairegowda) ರವರೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ತಿಳಿಸಿದ್ದಾರೆ.
ಈ ಸುದ್ದಿ ಓದಿ:- SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಬೇಸರದ ಸುದ್ದಿ.!
ಈ ಸಂಬಂಧ ಈಗ ಸರ್ಕಾರದ ಅಧಿಕೃತ ಅಧಿಸೂಚನೆ ಕೂಡ ಹೊರ ಬಿದ್ದಿದೆ ಶೀಘ್ರದಲ್ಲಿ ಅರಣ್ಯ ಭೂಮಿ ಮತ್ತು ಕೃಷಿ ಭೂಮಿ ಜಂಟಿ ಸರ್ವೆ ಕಾರ್ಯ (Forest and Revenue Joint Survey) ಆರಂಭವಾಗಿದ್ದು, ರೈತರ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವ ಭರವಸೆಯನ್ನು ಹುಟ್ಟಿಸಿದೆ.
ಈ ಜಂಟಿ ಸರ್ವೆ ಕಾರ್ಯ ನಡೆಯುವುದರಿಂದ ಸಿಗುವ ಅನುಕೂಲತೆ ಏನೆಂದರೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಗಡಿ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಒಂದು ವೇಳೆ ಅರಣ್ಯ ಇಲಾಖೆಗೆ ಏನಾದರೂ ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ಪರಿಗಣಿಸಿದ್ದರೆ ಜಂಟಿ ಸರ್ವೆ ಅಥವಾ ಡ್ರೋನ್ ಸರ್ವೆಯಿಂದ ಇದನ್ನು ಖಚಿತಪಡಿಸಿ ಅರಣ್ಯ ಇಲಾಖೆಗೆ ಇದನ್ನು ಡಿ ನೋಟಿಫಿಕೇಶನ್ (de – Notification) ಮಾಡಲು ಸೂಚಿಸಲಾಗುವುದು, ಈ ಭರವಸೆಯನ್ನು ಕಂದಾಯ ಸಚಿವರ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವಂತಹ ಸಚಿವರು ಜಂಟಿ ಸರ್ವೆ ಬಳಿಕ ಕಂದಾಯ ಭೂಮಿ ಹಾಗೂ ಅರಣ್ಯ ಭೂಮಿಗಳ ನಡುವಿನ ಗಡಿ ಯನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಬಳಿಕ ಡಿ ನೋಟಿಫಿಕೇಶನ್ ಆದ ಭೂಮಿಯಲ್ಲಿ ರೈತರೇನಾದರೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೆ ಅಂತಹ ಅರ್ಹ ರೈತರು ಫಾರಂ 57ರ ಅಡಿ ಅರ್ಜಿ ಸಲ್ಲಿಸಿದರೆ ಬಗರ್ ಹುಕುಂ ಆಪ್ (Bagar Hukum App) ಮೂಲಕ ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ.
ಈ ಸುದ್ದಿ ಓದಿ:- ಒಂದು ಮಷೀನ್ ನಿಂದ ಹಲವಾರು ಲಾಭಗಳು, ವರ್ಷದ 12 ತಿಂಗಳು ನಡೆಯುವ ಬಿಸಿನೆಸ್ ದಿನಕ್ಕೆ ಕಡಿಮೆ ಎಂದರೂ 4,000 ಲಾಭ ಫಿಕ್ಸ್.!
ಇದು ನಮ್ಮ ಸರ್ಕಾರದ ಕರ್ತವ್ಯ ಮತ್ತು ನಾವು ನೀಡುತ್ತಿರುವ ಭರವಸೆ ಎಂದು ಹೇಳಿದ್ದಾರೆ ಇದು ಅನೇಕ ರೈತರ ಪಾಲಿಗೆ ಅಪಾರ ಸಂತೋಷ ನೀಡಿದೆ. ಯಾಕೆಂದರೆ ತಲೆಮಾರುಗಳಿಂದ ಆ ಭೂಮಿಯಲ್ಲಿ ತೊಡಗಿಕೊಂಡಿದ್ದರು ಇದನ್ನು ಅರಣ್ಯ ಇಲಾಖೆ ನೋಟಿಫೈ ಮಾಡಿದ್ದ ಕಾರಣ RTC, ಪೋಡಿ, ಪೌತಿ ಖಾತೆ ಹೀಗೆ ಕಂದಾಯ ಇಲಾಖೆ ಸೇವೆಗಳು ಮತ್ತು ಈ ದಾಖಲೆಗಳು ಇಲ್ಲದೆ ಕಾರಣ ರೈತರಿಗೆ ಸರ್ಕಾರ ಸಿಗುತ್ತಿದ್ದ ಸವಲತ್ತುಗಳು ಸಿಗದೇ ರೈತರು ಸಮಸ್ಯೆ ಅನುಭವಿಸುತ್ತಿದ್ದರು.
ಮತ್ತು ಆ ಭೂಮಿಗಳಿಗೆ ಕುಡಿಯುವ ನೀರು, ರಸ್ತೆ ಇಂತಹ ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸುವುದು ಕಷ್ಟವಾಗಿತ್ತು. ಒಂದು ವೇಳೆ ಜಂಟಿ ಸರ್ವೆ ಕಾರ್ಯ ನಡೆದರೆ ಇವು ಇತ್ಯರ್ಥವಾಗಲಿದೆ ಹಾಗಾಗಿ ಇದೀಗ ರೈತರು ರಿಲೀಫ್ ಆಗಿದ್ದಾರೆ.
ಸದ್ಯಕ್ಕಿರುವ ಮಾಹಿತಿ ಪ್ರಕಾರ ಈ ಜಿಲ್ಲೆಗಳ ಸರ್ವೆ ಕಾರ್ಯ ನಡೆದಿದೆ.
* ಚಾಮರಾಜನಗರ ಜಿಲ್ಲೆ – 28,45,964 ಎಕರೆ
* ಚಿಕ್ಕಬಳ್ಳಾಪುರ ಜಿಲ್ಲೆ – 47,809,31 ಎಕರೆ
* ದಕ್ಷಿಣ ಕನ್ನಡ ಜಿಲ್ಲೆ – 21,983 ಎಕರೆ
* ಚಿಕ್ಕಮಗಳೂರು ಜಿಲ್ಲೆ – 13,09,27 ಎಕರೆ