ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಈಗ ಎಷ್ಟು ಪ್ರಮುಖ ದಾಖಲೆಗಳಾಗಿವೆ ಎಂದು ಎಲ್ಲರಿಗೂ ತಿಳಿದಿದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದರೆ ಸರ್ಕಾರಿ ವಲಯದಲ್ಲಿ ಮಾತ್ರವಲ್ಲದೆ ಖಾಸಗಿ ವಲಯದಲ್ಲೂ ಕೂಡ ಯಾವ ಕಾರ್ಯಗಳು ಆಗುವುದಿಲ್ಲ. ಒಂದು ಮಗುವನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ಪ್ರತಿಯೊಂದು ಹಂತದಲ್ಲೂ ಕೂಡ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಬೇಕೇ ಬೇಕು.
ಈ ರೀತಿ ಆಧಾರ್ ಕಾರ್ಡ್ ನಂತರದ ಸ್ಥಾನ ಪಡಿತರ ಚೀಟಿಗೆ ಹೋಗುತ್ತದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಪಡಿತರ ಚೀಟಿಯು ನಮ್ಮ ಕುಟುಂಬದ ಸ್ಥಾನಮಾನವನ್ನು ನಿರ್ಧರಿಸುತ್ತದೆ. ಹಾಗಾಗಿ ಇದೊಂದು ಪ್ರಮುಖ ಗುರುತಿನ ಚೀಟಿ ಗುರುತಿನ ಪುರಾವೆಯಾಗಿ ಮಾತ್ರ ಅಲ್ಲದೆ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಇದು ಅವಶ್ಯಕ.
9 ಲಕ್ಷದವರೆಗೆ ಯಾವುದೇ ಬಡ್ಡಿ ಕಟ್ಟುವ ಅಗತ್ಯ ಇಲ್ಲ, ಗೃಹ ಸಾಲ ಮಾಡುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್.!
ಸರ್ಕಾರ ಅರ್ಹತಾ ಮಾನದಂಡಗಳನ್ನು ನಿರ್ಧರಿಸುವಾಗ ರೇಷನ್ ಕಾರ್ಡ್ ನ್ನು ಗಮನದಲ್ಲಿಟ್ಟುಕೊಂಡು ಆ ಪ್ರಕಾರವಾಗಿಯೇ ಆದೇಶಿಸುತ್ತದೆ. ಇದರಿಂದಲೇ ತಿಳಿಯುತ್ತದೆ ರೇಷನ್ ಕಾರ್ಡ್ ಎಷ್ಟು ಪ್ರಮುಖ ದಾಖಲೆ ಎಂದು. ಈ ರೇಷನ್ ಕಾರ್ಡ್ ನಲ್ಲಿ ಬಡತನ ರೇಖೆಗಿಂತ ಮೇಲಿರುವವರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಪ್ರತ್ಯೇಕವಾಗಿ ರೇಷನ್ ಕಾರ್ಡ್ ನೀಡಲಾಗುತ್ತದೆ.
ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ BPL ಕಾರ್ಡ್ ಪಡೆದ ಕುಟುಂಬಗಳು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಇವರಿಗೆ ಶೈಕ್ಷಣಿಕ ವೆಚ್ಚಗಳು, ವೈದ್ಯಕೀಯ ಕರ್ಚು ವೆಚ್ಚಗಳು ಇವುಗಳಲ್ಲಿ ರಿಯಾಯಿತಿ ಇರುತ್ತದೆ. ಅಂತೆಯೇ ಸರ್ಕಾರದಿಂದ ಸಿಗುವ ಕಲ್ಯಾಣ ಯೋಜನೆಗಳಿಗೆ ಅರ್ಹರಾಗುತ್ತಾರೆ.
ಆದರೆ ಇವೆಲ್ಲ ಸೌಲಭ್ಯಗಳು ಕೂಡ APL ಕಾರ್ಡ್ ಇರುವವರೆಗೂ ಸಿಗುತ್ತದೆ ಎನ್ನುವುದು ಅನುಮಾನ ಬಡತನ ರೇಖೆಗಿಂತ ಕೆಳಗಿರುವವರನ್ನು, ಆರ್ಥಿಕವಾಗಿ ಹಿಂದುಳಿದವರು ಎಂದು ನಿರ್ಧಾರ ಮಾಡುವುದರಿಂದ ಅವರನ್ನು ಗುರಿಯಾಗಿರಿಸಿಕೊಂಡು ಕೆಲ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ.
ಆದರೆ ಕೆಲವರು ಸರ್ಕಾರಕ್ಕೆ ವಂಚಿಸಿ ತಾವು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದರೂ ಕೂಡ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಸುಳ್ಳು ದಾಖಲೆ ಸೃಷ್ಟಿಸಿ BPL ರೇಷನ್ ಕಾರ್ಡ್ ಪಡೆದಿರುವುದು ಅಥವಾ ನಕಲಿ ಪಡಿತರ ಚೀಟಿ ಪಡೆದಿರುವುದು ಅಥವಾ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಯಲ್ಲಿ ಸ್ಥಾನ ಪಡೆದಿರುವುದು ಇತ್ಯಾದಿಗಳನ್ನು ತಿಳಿದು ಬಂದಿದೆ.
ಇದರಿಂದ ಸರ್ಕಾರಕ್ಕೆ ಸಾಕಷ್ಟು ನ’ಷ್ಟ ಉಂಟಾಗುತ್ತಿದೆ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ನೋಡುವುದಾದರೆ ಗ್ಯಾರೆಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಂತಹ ಯೋಜನೆಗಳ ಪ್ರಯೋಜನವನ್ನು ಪಡೆಯಲು BPL ರೇಷನ್ ಕಾರ್ಡ್ ಬೇಕೇ ಬೇಕು ಹಾಗಾಗಿ ಸರ್ಕಾರಕ್ಕೆ ವಂಚನೆ ಆಗುತ್ತಿರುವುದನ್ನು ತಲುಪಿಸಲು.
ಶೀಘ್ರದಲ್ಲೇ ಇವುಗಳ ಮರು ಒಳ್ಳೆ ಮಾಪನ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರವು BPL ರೇಷನ್ ಕಾರ್ಡ್ ಹೊಂದಿರುವವರಿಗೆ LPG ಸಿಲಿಂಡರ್ ಮೇಲೆ ಸಬ್ಸಿಡಿ ನೀಡುತ್ತಿದೆ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಉಚಿತ ಪಡಿತರವನ್ನು ನೀಡುತ್ತಿದೆ.
ಈ ಎಲ್ಲವೂ ಕೂಡ ಉಳ್ಳವರ ಪಾಲಾಗುತ್ತಿದೆ ಎನ್ನುವುದನ್ನು ಗಮನಿಸಿ ರೇಷನ್ ಕಾರ್ಡ್ ಮರುಮೌಲ್ಯಮಾಪನ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ವೇಳೆ ಸಿಕ್ಕಿ ಬೀಳುವ ನಕಲಿ ಕಾರ್ಡುಗಳನ್ನು ರದ್ದು ಮಾಡಲಾಗುತ್ತದೆ ಒಂದು ವೇಳೆ ಅರ್ಹತಾ ಮಾನದಂಡ ಮೀರಿ BPL ರೇಷನ್ ಕಾರ್ಡ್ ಪಡೆದಿದ್ದಾರೆ ಆ ರೇಷನ್ ಕಾರ್ಡ್ ಗಳನ್ನು ವಶಪಡಿಸಿಕೊಂಡು ಅವರಿಗೆ APL ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ.