ಸಾಕು ಮಗನಿಗೆ ಆಸ್ತಿಯಲ್ಲಿ ಎಷ್ಟು ಭಾಗ ಸಿಗುತ್ತದೆ ಗೊತ್ತಾ.?
ಸಾಮಾನ್ಯವಾಗಿ ದಂಪತಿಗಳು ಮಕ್ಕಳಿಲ್ಲದೆ ಇದ್ದಾಗ ಅಥವಾ ಮದುವೆ ಆಗದೆ ಇದ್ದವರು ಅಥವಾ ಅಕ್ಕ ತಂಗಿಯರ ಮಕ್ಕಳಲ್ಲಿ ಅತಿ ಹೆಚ್ಚಿನ ಪ್ರೀತಿ ಇದ್ದಾಗ ಇನ್ನಿತರ ಕಾರಣಗಳಿಂದಾಗಿ ಆ ಮಕ್ಕಳನ್ನು ಬೆಳೆಸುತ್ತಾರೆ. ಅವರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆದರೆ ನಂತರ ಅವರಿಗೆ ಮಗುವಾದಾಗ ಇವರನ್ನು ಸಾಕು ಮಗ ಎಂದುಕೊಂಡು ಸಾಕಿರುತ್ತಾರೆ.
ಒಂದು ವೇಳೆ ಆ ವ್ಯಕ್ತಿಯು ಸಾಕು ಮಗನಿಗೆ ತನ್ನ ಪಾಲಿನ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಆಸ್ತಿಯನ್ನು ಕೊಡುವ ಇಚ್ಛೆ ಹೊಂದಿದ್ದು ಆದರೆ ಆ ಕಾರ್ಯ ನಡೆಯುವ ಮುನ್ನವೇ ಮೃ’ತಪಟ್ಟಿದ್ದಾಗ ಆ ವ್ಯಕ್ತಿಗಳ ನಿಜವಾದ ಮಕ್ಕಳು ದತ್ತು ಮಕ್ಕಳಿಗೆ ಆಸ್ತಿ ಕೊಡದೆ ಇದ್ದರೆ ಅವರು ನ್ಯಾಯಾಲಯದಲ್ಲಿ ದಾವೇ ಹೂಡಿದಾಗ ಫಲಿತಾಂಶ ಏನಾಗಬಹುದು ಎನ್ನುವುದು ಅನೇಕರ ಪ್ರಶ್ನೆ ಈ ಬಗ್ಗೆ ಕಾನೂನಿನಲ್ಲಿ ಏನಿದೆ ಎನ್ನುವ ಅಂಶದ ಬಗ್ಗೆ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ಸಾಮಾನ್ಯವಾಗಿ ಈ ಬಗ್ಗೆ ಕೇಳಿದಾಗ ಈ ಉದಾಹರಣೆಗಳನ್ನು ನೋಡಿದಾಗ ಎಲ್ಲರಿಗೂ ಇದು ಅ’ನ್ಯಾ’ಯ ಎಂದೇ ಅನಿಸುತ್ತದೆ. ಆದರೆ ನ್ಯಾಯಾಲಯಗಳು ಯಾವಾಗಲೂ ನ್ಯಾಯ ಹಾಗೂ ಅನ್ಯಾಯವನ್ನು ಕಾನೂನಿನ ದೃಷ್ಟಿಕೋನದಲ್ಲಿ ನೋಡುತ್ತವೆ. ಕಾನೂನಿನ ಚೌಕಟ್ಟಿನೊಳಗೆ ಇದಕ್ಕೆ ಪರಿಹಾರ ಕಂಡುಕೊಳ್ಳ ಬೇಕಾಗಿರುತ್ತದೆ. ಹಾಗಾಗಿ ಈ ಬಗ್ಗೆ ಕಾನೂನಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಈ ರೀತಿ ಸಾಕು ಮಗ ಎಂದು ಅಂದುಕೊಂಡವರನ್ನು ದತ್ತು ಸ್ವೀಕಾರ ಮಾಡಿ ಅವರಿಗೆ ಎಲ್ಲ ದಾಖಲೆಗಳಲ್ಲೂ ಕೂಡ ತಂದೆ-ತಾಯಿ ಹೆಸರಿನಲ್ಲಿ ಸಾಕಿದವರ ಹೆಸರನ್ನೇ ಹಾಕಿದ್ದರೆ ಆಗ ಆ ದತ್ತುಪುತ್ರರು ಕೂಡ ಸ್ವಂತ ಮಕ್ಕಳಷ್ಟೇ ಆಸ್ತಿಯ ಮೇಲೆ ಹಕ್ಕನ್ನು ಹೊಂದಿರುತ್ತಾರೆ.
ಒಂದು ವೇಳೆ ಬದುಕಿರುವಾಗಲೇ ಅವರು ಆಸ್ತಿ ಬಗ್ಗೆ ವಿಲ್ ಮಾಡಿ ಇಟ್ಟಿದ್ದರೆ ಅಥವಾ ದಾನ ಪತ್ರ ಮಾಡಿಕೊಟ್ಟಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಮೃ’ತಪಟ್ಟ ತಂದೆ ತಾಯಿಗೆ ಈ ಬಗ್ಗೆ ಆಸಕ್ತಿ ಇದ್ದು ಯಾವುದೋ ಕಾರಣದಿಂದಾಗಿ ಆ ಕಾರ್ಯ ನೆರವೇರಿಸಲಾಗದೆ ಅ’ಗ’ಲಿ’ದಾಗ ಅವರ ಸ್ವಂತ ಮಕ್ಕಳು ತಂದೆ ತಾಯಿಯ ಇಚ್ಛೆಯನ್ನು ಅರಿತು ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳುವುದು ಒಳ್ಳೆಯದು.
ಒಂದು ವೇಳೆ ಅವರು ಆ ರೀತಿ ನಡೆದುಕೊಂಡಿಲ್ಲ ಎಂದರೆ ರಾಜಿ ಪಂಚಾಯಿತಿ ಮೂಲಕ ಕುಟುಂಬದ ಸಮ್ಮುಖದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಪಡುವುದು ಉತ್ತಮ. ಇಲ್ಲವಾದಲ್ಲಿ ಇಂತಹ ಪ್ರಕರಣಗಳು ನ್ಯಾಯಾಲಯಕ್ಕೆ ಬಂದಾಗ ಈ ಮೇಲೆ ತಿಳಿಸಿದಂತೆ ಅವರು ದತ್ತು ತೆಗೆದುಕೊಂಡಿರುವುದಕ್ಕೆ ಅಥವಾ ದಾಖಲೆಗಳಲ್ಲಿ ತಂದೆ ತಾಯಿ ಅವರೇ ಎಂದು ಹೆಸರ ಕಾಣಿಸದ ಪಕ್ಷದಲ್ಲಿ ನ್ಯಾಯಾಲಯಗಳಲ್ಲಿ ಸಾಕು ಮಗನು ಆಸ್ತಿ ಬೇಕು ಎಂದು ಕೇಸ್ ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ, ಆ ದಾವೆಗಳು ಊರ್ಜಿತವಾಗುವುದಿಲ್ಲ.
ಆದರೆ ನ್ಯಾಯ, ಕಾನೂನು ಎಲ್ಲವನ್ನು ಮೀರಿದ್ದು. ಇಂತಹ ಧರ್ಮವನ್ನು ಕಾಯ್ದುಕೊಂಡು ಬದುಕಿದರೆ ಇನ್ನಿತರರಿಗೆ ನಾವು ಆದರ್ಶವಾಗುತ್ತೇವೆ, ಆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೂಡ ಕಾಪಾಡಬಹುದು ಮತ್ತು ನಮ್ಮ ಹಿಂದೂ ಧರ್ಮ ನಂಬಿರುವ ಪ್ರಕಾರ ಇಹದಲ್ಲಿ ಮಾತ್ರವಲ್ಲದೇ ಪರದಲ್ಲೂ ಕೂಡ ಇಂತಹ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಾಗಾಗಿ ಎಲ್ಲದಕ್ಕೂ ಕೂಡ ಕೋರ್ಟು ಕಛೇರಿ ಮೆಟ್ಟಿಲೇರಿ ಕುಟುಂಬದಲ್ಲಿ ಸಂಬಂಧದ ನಡುವೆ ಮನಸ್ತಾಪ ಮಾಡಿಸಿಕೊಂಡ ಕೆಟ್ಟವರಾಗುವುದಕ್ಕಿಂತ ಕೆಲ ಸಂದರ್ಭಗಳಲ್ಲಿ ಸೋತು ಗೆಲ್ಲುವುದೇ ಶ್ರೇಷ್ಠ ಅಲ್ಲವೇ.?