ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ( government Schemes for Farmers) ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ 6000ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆಗಳಿಗೆ ವಿಮೆ ಪರಿಹಾರ ನೀಡಲಾಗುತ್ತಿದೆ.
ಇದರ ಜೊತೆಗೆ ಬರ ಪರಿಹಾರ ಸಬ್ಸಿಡಿ ಲೋನ್ ಗಳು ಇತ್ಯಾದಿ ಇತ್ಯಾದಿ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ರಾಜ್ಯ ಸರ್ಕಾರವುಗಳು ಕೂಡ ಕೇಂದ್ರ ಸರ್ಕಾರದಂತೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟು ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ ಈ ಯೋಜನೆಗಳ ನೆರವು ನೇರವಾಗಿ ಅರ್ಹ ರೈತನಿಗೆ ಸಲ್ಲುವುದು ಗೊಂದಲಮಯವಾಗಿದೆ.
ಮಧ್ಯವರ್ತಿಗಳ ಕಾಟವನ್ನು ತಪ್ಪಿಸುವ ಕಾರಣದಿಂದಾಗಿ DBT ಮೂಲಕ ಸಹಾಯಧನಗಳ ಹಣವನ್ನು ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದ್ದರಾದರೂ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ರೂಪಿಸಿರುವ ಯೋಚನೆಗಳ ಪ್ರಯೋಜನವನ್ನು ಅಸಲಿ ಮಾಹಿತಿ ಮರೆಮಾಚಿ ಉಳ್ಳವರು ಕೂಡ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ.
ಸರ್ಕಾರವು ಈ ರೀತಿ ಅನುದಾನಗಳನ್ನು ನೀಡಲು ನಿಗದಿಪಡಿಸುವ ವಿಸ್ತೀರ್ಣವಷ್ಟೇ ತಮ್ಮದು ಎನ್ನುವ ರೀತಿ ಬಿಂಬಿಸಿ ಹಣ ಹೊಡೆಯುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಿ ಸಂಪೂರ್ಣ ಪಾರದರ್ಶಕತೆ ತರಲು ಪ್ರಯತ್ನಿಸುತ್ತಿರುವ ಸರ್ಕಾರಗಳು ಇದಕ್ಕಾಗಿ ಹೊಸ ಹೆಜ್ಜೆ ಇಟ್ಟಿದೆ. ಅದಕ್ಕಾಗಿ ಇನ್ನು ಮುಂದೆ ಯಾವುದೇ ರೀತಿಯ ಅನುದಾನ ಸರ್ಕಾರದಿಂದ ಪಡೆಯಬೇಕು ಎಂದರು FRUITS ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ರೈತರು FID ಹೊಂದಿರುವುದು ಕಡ್ಡಾಯ ಎಂದು ಕಂದಾಯ ಇಲಾಖೆ ಹೇಳಿದೆ.
ಈ ಬಾರಿ ನಮ್ಮ ರಾಜ್ಯದಲ್ಲಿ 195 ತಾಲೂಕುಗಳು ಬರಪೀಡಿದ ತಾಲೂಕುಗಳೆಂದು (drought declared thalukes) ಘೋಷಣೆಯಾಗಿವೆ. ಈ ತಾಲೂಕುಗಳಲ್ಲಿರುವ ರೈತರಿಗೆ ಬೆಳೆ ಹಾನಿಯ ಪರಿಹಾರವನ್ನು ನೀಡಲು ಸರ್ಕಾರ ಪರಿಶೀಲನೆ ಕೂಡ ನಡೆಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಂತ್ರಸ್ತ ರೈತನ ಖಾತೆಗೆ ಹಣ ಕೂಡ ತಲುಪಲಿದೆ.
ಈ ಸಮಯದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಒಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ ಎಲ್ಲ ರೈತರಿಗೂ ಆದೇಶಿಸಿದೆ. ಅದೇನೆಂದರೆ ಪ್ರತಿಯೊಬ್ಬ ರೈತನ ಕಡ್ಡಾಯವಾಗಿ FID ಮಾಡಿಸಿಕೊಳ್ಳಬೇಕು, ಈಗಾಗಲೇ FID ಮಾಡಿಸಿದ್ದರೆ ನಿಮಗೆ ಸಂಬಂಧಿಸಿದ ಎಲ್ಲಾ ಸರ್ವೇ ನಂಬರ್ ಗಳು ಜೋಡಣೆಯಾಗಿದೆ ಎಂದು ಕೂಡಲೇ ಪರೀಕ್ಷಿಸಿಕೊಳ್ಳಿ, ಜಂಟಿ ಖಾತೆದಾರರಾಗಿದ್ದರೆ ಪ್ರತಿಯೊಬ್ಬ ಖಾತೆದಾರ ಕೂಡ ಪ್ರತ್ಯೇಕವಾಗಿ FID ಮಾಡಿಸಿಕೊಳ್ಳಬೇಕು.
ನಿಮಗೆ ಸಂಬಂಧಿಸಿದ ಎಲ್ಲ ಸರ್ವೆ ನಂಬರ್ ಗಳನ್ನು FID ಮಾಡಿಸದೆ ಇದ್ದಲ್ಲಿ ಸರ್ಕಾರದ ವತಿಯಿಂದ ಬರುವ ಯಾವುದೇ ಪರಿಹಾರ ಹಣವು ನಿಮ್ಮ ಖಾತೆಗೆ ಜಮೆ ಆಗುವುದಿಲ, ಲ ಇದಕ್ಕೆ ನೀವೇ ಹೊಣೆಗಾರರಾಗಿರುತ್ತೀರಿ. ಹಾಗಾಗಿ ಎಲ್ಲ ರೈತರು ನಿಮ್ಮ ಎಲ್ಲಾ ಸರ್ವೆ ನಂಬರ್ ಗಳನ್ನು FID ಮಾಡಿಸಿಕೊಳ್ಳಿ.
ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಎಂದು ಕಂದಾಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೀತಿ ಮಾಡುವುದರಿಂದ ಒಬ್ಬ ರೈತನ ಸಂಪೂರ್ಣ ಜಮೀನಿನ ಮಾಹಿತಿ ಹಾಗೂ ಆತನ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಸಮೇತ ಮಾಹಿತಿ ಫ್ರೂಟ್ ತಂತ್ರಾಂಶದಲ್ಲಿ ಇರುತ್ತದೆ.
ಇದರಿಂದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿ ರೈತನಿಗೆ ಯೋಜನೆಗಳನ್ನು ತಲುಪಿಸಲು ಬಹಳ ಅನುಕೂಲವಾಗುತ್ತದೆ. ಹಾಗಾಗಿ ತಪ್ಪದೆ ಈ ಪ್ರಕ್ರಿಯೆಯನ್ನು ಎಲ್ಲ ರೈತರು ಪೂರ್ತಿಗೊಳಿಸಿ. ಗ್ರಾಮ ಒನ್ ಕೇಂದ್ರಗಳಲ್ಲೂ ಕೂಡ ರೈತರು FID ಮಾಡಿಸಿಕೊಳ್ಳಬಹುದು. FID ಗೆ ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನುಗಳ RTC, ರೈತನ ಆಧಾರ್ ಕಾರ್ಡ್ , ಬ್ಯಾಂಕ್ ಪಾಸ್ ಬುಕ್ ವಿವರ ಮತ್ತು ಮೊಬೈಲ್ ಸಂಖ್ಯೆ ನೀಡಬೇಕು. ತಪ್ಪದೇ ಪ್ರತಿಯೊಬ್ಬ ರೈತನಿಗೂ ಈ ಮಾಹಿತಿಯನ್ನು ಶೇರ್ ಮಾಡಿ.