ಕರ್ನಾಟಕ ಸರ್ಕಾರವು (Karnataka Government) ರಾಜ್ಯದ ಜನತೆಗಾಗಿ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯು (Gruhalakshmi and Annabhagya) ರೇಷನ್ ಕಾರ್ಡ್ ಆಧಾರಿತ ಯೋಜನೆಗಳು (Rationcard Based Schemes) ಎಂದೇ ಹೇಳಬಹುದು.
ಅನ್ನಭಾಗ್ಯ ಯೋಜನೆಯಡಿ ಸರ್ಕಾರ 10Kg ಪಡಿತರ ನೀಡುವುದಾಗಿ ಘೋಷಿಸಿತ್ತು, ಆದರೆ ದಾಸ್ತಾನು ಕೊರತೆಗೆ ಕಾರಣದಿಂದಾಗಿ 10Kg ಅಕ್ಕಿ ನೀಡಲು ಸಾಧ್ಯವಾಗದೇ ಇದ್ದಿದ್ದರಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ರೇಷನ್ ಕಾರ್ಡ್ ಗಳಾದ BPL ಮತ್ತು AAY ಕಾರ್ಡ್ ನ ಸದಸ್ಯನೊಬ್ಬನಿಗೆ 5Kg ಅಕ್ಕಿ ಹಾಗೂ ಹೆಚ್ಚುವರಿ 5Kg ಪಡಿತರಕ್ಕೆ ಬದಲಾಗಿ ರೂ.170 ನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುತ್ತಿದೆ.
ಈ ಸುದ್ದಿ ಓದಿ:- ಕೇವಲ 14 ಲಕ್ಷದಲ್ಲಿ 2BHK ಸುಂದರವಾದ ಮನೆ ನಿರ್ಮಿಸಬಹುದು, ಡೀಟೇಲ್ಸ್ ಇಲ್ಲಿದೆ ನೋಡಿ.!
ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಯಾವುದೇ APL / BPL ಭೇದವಿಲ್ಲದೆ ರೇಷನ್ ಕಾರ್ಡ್ ಹೊಂದಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಯ (HOF Account) ಖಾತೆಗೆ ಪ್ರತಿ ತಿಂಗಳು DBT ಮೂಲಕ ರೂ.2000 ಹಣ ವರ್ಗಾವಣೆ ಮಾಡಲಾಗುತ್ತಿದೆ.
ಕಳೆದ ಆರು ತಿಂಗಳಿಂದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣವು ಅರ್ಹ ಫಲಾನುಭವಿಗಳ ಸಿಗುತ್ತಿದ್ದು ಯೋಜನೆಗಳು ಬಹುತೇಕ ಯಶಸ್ವಿಯಾಗಿದೆ ಎಂದೇ ಭಾವಿಸಲಾಗಿದೆ. ಇದರ ನಡುವೆ ಲಕ್ಷಾಂತರ ಫಲಾನುಭವಿಗಳು ರೇಷನ್ ಕಾರ್ಡ್ ಹೊಂದಿದ್ದರು ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಾಧ್ಯವಾಗಿಲ್ಲ.
ಈ ಸುದ್ದಿ ಓದಿ:-10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ, 1750.ರೂ ಶಿಷ್ಯ ವೇತನದೊಂದಿಗೆ ಉಚಿತ ತರಬೇತಿ ಪಡೆಯಿರಿ..
ಇಂದು ಈ ಅಂಕಣದಲ್ಲಿ ಯಾವೆಲ್ಲ ಕಾರಣದಿಂದ ಈ ರೀತಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಪಡೆಯಲು ಸಮಸ್ಯೆ ಆಗಿದೆ. ರೇಷನ್ ಕಾರ್ಡ್ ಹೊಂದಿದ್ದರು ಕೂಡ ಈ ರೀತಿ ಹಣ ಪಡೆಯಲು ಆಗದೇ ಇರೋದಕ್ಕೆ ಕಾರಣವೇನು? ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.
ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಪಡೆಯಲು ಇರುವುದಕ್ಕೆ ಕಾರಣವಾಗಿರುವ ಅಂಶಗಳು:-
* ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿ ಇಲ್ಲದೆ ಇರುವುದು
* ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರದೇ ಇರುವುದು
* ಇ-ಕೆವೈಸಿ ಅಪ್ಡೇಟ್ ಆಗದೇ ಇರುವುದು
ಇದೆಲ್ಲವೂ ಕೂಡ ಬ್ಯಾಂಕ್ ಖಾತೆಯಲ್ಲಿರುವ ಸಮಸ್ಯೆಗಳಾಗಿದೆ. ಇದೆಲ್ಲವು ಸರಿ ಇದ್ದರು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಲ್ಲಿ ಹೆಸರಿನಲ್ಲಿ ವ್ಯತ್ಯಾಸಗಳಿರುವುದು, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿ ಮಹಿಳೆಯ ಹೆಸರು ಇಲ್ಲದೆ ಇರುವುದು ಕೂಡ ಅನ್ನ ಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇರುವ ಸಮಸ್ಯೆಗಳಾಗಿವೆ ಇದೆಲ್ಲವೂ ಸರಿ ಇದ್ದರೂ 3.64 ಲಕ್ಷ ಮಹಿಳೆಯರಿಗೆ ಎರಡು ಯೋಜನೆಗಳ ಹಣವೂ ಬರುತ್ತಿಲ್ಲ.
ಈ ಸುದ್ದಿ ಓದಿ:-ರೈತರಿಗೆ ಶುಭ ಸುದ್ದಿ ರಸಗೊಬ್ಬರ ಖರೀದಿಗೆ ಕೇಂದ್ರ ಸರ್ಕಾರದಿಂದ ಬೃಹತ್ ರಿಯಾಯಿತಿ.!
ಇದಕ್ಕೆ ಕಾರಣವಾಗಿರುವ ಅಂಶವೇನೆಂದರೆ, ಎಲ್ಲಾ ಮಾಹಿತಿಗಳು ಸರಿಯಿದ್ದು ಕಳೆದ ಆರು ತಿಂಗಳಿಂದ ಯಾರು ನ್ಯಾಯಬೆಲೆ ಅಂಗಡಿಗಳಲ್ಲಿ (Fareprice shop) ಬಯೋಮೆಟ್ರಿಕ್ ಕೊಟ್ಟು ತಮ್ಮ ಪಡಿತರವನ್ನು ಪಡೆದಿಲ್ಲ ಅಂತಹ ಫಲಾನುಭವಿಗಳಿಗೂ ಕೂಡ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಬಂದಿಲ್ಲ.
ಇಂತಹ ರೇಷನ್ ಕಾರ್ಡ್ ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತವೆ (Suspend) ನೀವು ಮಾಹಿತಿ ಕಣಜ ವೆಬ್ ಸೈಟ್ ಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದೆಯೋ ಇಲ್ಲವೋ ಎನ್ನುವ ಮಾಹಿತಿಯನ್ನು ಪಡೆದುಕೊಂಡು ಕೂಡಲೇ ಆಹಾರ ಇಲಾಖೆ ಕಚೇರಿಗಳಿಗೆ ಹೋಗಿ ಸಮಸ್ಯೆ ಸರಿಪಡಿಸಿಕೊಂಡರೆ ಮುಂದಿನ ತಿಂಗಳಿನಿಂದ ನಿಮಗೆ ಹಣ ಬರುತ್ತದೆ ಅಥವಾ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸುವ ಗೃಹಲಕ್ಷ್ಮಿ ಕ್ಯಾಂಪ್ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ಏರ್ಪಡಿಸುವ ಶಿಬಿರಗಳಲ್ಲಿ ಭಾಗಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.