Footpath
ಈಗಾಗಲೇ ರೈತರಿಗೆ ಸಾಕಷ್ಟು ಸಮಸ್ಯೆಗಳಿವೆ. ಅಕಾಲಿಕ ಮಳೆ, ಬೆಳದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಇರುವುದು, ಲೋಡ್ ಶೆಡ್ಡಿಂಗ್, ಅಂತರ್ಜಲದ ಕೊರತೆ, ಕೃಷಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಕೊರತೆ ಸೇರಿದಂತೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇದರೊಂದಿಗೆ ರೈತರಿಗೆ ಬಹಳ ಕಾಡುವ ಹಾಗೂ ನೋ’ವುಂಟು ಮಾಡುವ ಸಮಸ್ಯೆ ಏನೆಂದರೆ ಅವರ ಜಮೀನಿಗೆ ಹೋಗಲು ದಾರಿ ಇಲ್ಲದೆ ಇದುವರೆಗೂ ಇದ್ದ ರೂಢಿ ದಾರಿಯನ್ನೇ ಬಳಸುತ್ತಿರುವುದರಿಂದ ಕೆಲವೊಮ್ಮೆ ಅಕ್ಕಪಕ್ಕದವರು ಇದನ್ನು ಅಡ್ಡಿಪಡಿಸುವುದು. ಇದೇ ಕಾರಣಕ್ಕಾಗಿ ಅಕ್ಕ ಪಕ್ಕದ ಜಮೀನುಗಳ ಮಾಲೀಕರ ಜೊತೆ ವಿನಾಕಾರಣ ಜಗಳವಾಡಿ ವಿನಾಕಾರಣ ಕೋರ್ಟು ಕಚೇರಿ ಅಲೆಯುವಂತೆ ಆಗಿದೆ.
ಈಗ ಇಂತಹ ಪ್ರಕರಣಕ್ಕೆಲ್ಲ ಇತ್ಯರ್ಥವಾಗುವಂತೆ ಒಂದು ಸಮಾಧಾನಕರ ತೀರ್ಪನ್ನು ಘನ ನ್ಯಾಯಾಲಯ ನೀಡಿದೆ, ಆ ಪ್ರಕಾರ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿಗೆ ಅನುವು ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ರಾಜ್ಯದಲ್ಲಿ ಯಾವುದೇ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ತಮ್ಮ ಜಮೀನಿಗೆ ಸಾಗಿಸಲು ಬೇರೆ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿ ಸಮಸ್ಯೆ ಇದೆ,
ಈ ದಾರಿ ಸಮಸ್ಯೆ ಬಹುಕಾಲದಿಂದಲೂ ಇದ್ದು, ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿರುತ್ತವೆ.
ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ದರೂ ಕೆಲವು ಭೂಮಾಲೀಕರು ವೈಯಕ್ತಿಕ ದ್ವೇ’ಷ ಅ’ಸೂ’ಯೆ ಮತ್ತು ಹೊಂದಾಣಿಕೆ ಕೊರತೆ ಕಾರಣದಿಂದಾಗಿ ಬಳಕೆದಾರ ರೈತರುಗಳಿಗೆ ತಿರುಗಾಡಲು ಅಡ್ಡಿಪಡಿಸುತ್ತಿರುವುದು ಅಥವಾ ಆ ಜಾಗಗಳನ್ನು ಮುಚ್ಚಿರುವುದು ಎಲ್ಲೆಡೆ ಸರ್ವೆ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಸಮಸ್ಯೆಯಾಗಿದೆ.
ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರಲ್ಲಿ ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು, ಸಂಬಂಧಪಟ್ಟ, ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ ಹಕ್ಕುಗಳ ದಾಖಲೆ ರಿಜಿಸ್ಟರ್ನಲ್ಲಿ ನಮೂದು ಮಾಡಲು ಅವಕಾಶವಿದೆ.
The Indian Easement Act, 1882 ರಂತ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ (Easement) ಹಕ್ಕನ್ನು ಹೊಂದಿದ್ದು, ಇದಕ್ಕೆ ಬಾಜುದಾರರಿಂದ ಯಾವುದೇ ಹಸ್ತಕ್ಷೇಪಕ್ಕೆ ಅಥವಾ ಈ ಬಗ್ಗೆ ಸದರಿ ಹಕ್ಕನ್ನು ಕ್ಷೀಣಿಸುವುದಕ್ಕೆ ಸಾಧ್ಯವಿರುವುದಿಲ್ಲ ಎಂಬುದಾಗಿ ತಿಳಿಸಲಾಗಿದೆ.
ಈ ಬಗ್ಗೆ ಕ್ರಮ ವಹಿಸಲು ಅವಕಾಶ ಇದೆ ಎಂದು ತಿಳಿಸಿದೆ ಎಂದು ಕಂದಾಯ ಇಲಾಖೆಯಿಂದ ಸರ್ಕಾರ ಸುತ್ತೋಲೆ ಹೊರಡಿಸಿ ತಿಳಿಸಿದೆ. ಇದೇ ರೀತಿ ಮಾನ್ಯ ಹೈ ಕೋರ್ಟ್ ತುಮಕೂರು ಮೂಲದ ಪ್ರಕರಣ ಒಂದರಲ್ಲಿ ಕೆಲವು ಜಮೀನನ್ನು ಖರೀದಿಸಿ ಅಲ್ಲಿ ಬಡಾವಣೆ, ಕಟ್ಟಡಗಳು ಮತ್ತು APMC ನಿರ್ಮಿಸಿ ಸಾರ್ವಜನಿಕರಿಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಹೈಕೋರ್ಟ್ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಾಲಂ 67 ರ ಪ್ರಕಾರ ಎಲ್ಲ ಸಾರ್ವಜನಿಕರ ರಸ್ತೆಗಳು, ಬೀದಿಗಳು, ಓಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ.
ಕಾಲುದಾರಿ, ಬಂಡಿಜಾಡು ಅಥವಾ ಗಾಡಿ ಜಾಡು ಈ ಹಿಂದೆ ಕರೆಯಲಾಗುತ್ತಿದ್ದ ರಸ್ತೆಗಳಾಗಿವೆ. ಈ ಕಾಲು ದಾರಿ ಹಾಗೂ ಗಾಡಿ ಜಾಡುಗಳನ್ನು ಗ್ರಾಮದ ನಕ್ಷೆಗಳಲ್ಲಿ ಹಾಗೂ ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಬಿ ಖರಬ್ ಎಂದು ವರ್ಗೀಕರಿಸಲಾಗಿದೆ, ಇದು ಸರ್ಕಾರಕ್ಕೆ ಸೇರುತ್ತದೆ ಆದರೆ ಸಾರ್ವಜನಿಕರಿಗೂ ಇದರ ಮೇಲೆ ಹಾಕಿರುತ್ತದೆ ಎಂದು ಹೇಳಿದೆ.