ಪ್ರತಿ ಗ್ರಾಮಗಳನ್ನು ಕೂಡ ದಾರಿಗೆ ಸಂಬಂಧಪಟ್ಟ ವಿವಾದಗಳು ಇದ್ದೇ ಇರುತ್ತವೆ. ಪ್ರತಿಯೊಬ್ಬ ರೈತನಿಗೂ ಕೂಡ ತನ್ನ ಜಮೀನಿಗೆ ಹೋಗಲು ದಾರಿ ಬೇಕೇ ಬೇಕು ಆದರೆ ಭೂ ಹಿಡುವಳಿಗಳು ಚಿಕ್ಕದಾಗುತ್ತಿದ್ದಂತೆ ಹಿಸ್ಸಾ ಸಂಖ್ಯೆಗಳು ಹೆಚ್ಚಾಗಿರುವುದರಿಂದ ಈ ದಾರಿಗಳು ಮುಚ್ಚಿ ಹೋಗಿರುತ್ತವೆ
ಅಂತಹ ಸಂದರ್ಭದಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಗ್ರಾಮನಕ್ಷೆಯಲ್ಲಿ ಮಾರ್ಗ ಕಾಣುತ್ತಿಲ್ಲ ಎಂದಾಗ ಯಾವ ರೀತಿ ಸರ್ಕಾರದ ಸಹಾಯ ಪಡೆಯಬಹುದು ಮತ್ತು ಅವರು ಯಾವ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರಿಗೆ ಪರಿಹಾರ ಸಿಗುತ್ತದೆ ಎನ್ನುವ ಉಪಯುಕ್ತ ಮಾಹಿತಿಯನ್ನು ಎಲ್ಲ ರೈತರಿಗಾಗಿ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ರೀತಿ ಜಮೀನಿಗೆ ಹೋಗಲು ದಾರಿ ಬಗ್ಗೆ ತಕರಾರು ಎದುರಿಸುತ್ತಿರುವ ರೈತರಿಗೆ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಏನೆಂದರೆ, ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಹೊಸದೊಂದು ಮಾರ್ಗಸೂಚಿಯನ್ನು ಜಾರಿಗೆ ತಂದಿದೆ. ಈ ಕೈಪಿಡಿಯಲ್ಲಿ ಇರುವಂತೆ ನಿಯಮಗಳು ಕಡ್ಡಾಯವಾಗಿ ಜಾರಿಯಾದರೆ ಇನ್ನು ಮುಂದೆ ರೈತರಿಗೆ ಜಮೀನಿಗೆ ಹೋಗುವ ದಾರಿಗೆ ಸಮಸ್ಯೆ ಇರುವುದಿಲ್ಲ.
ಕರ್ನಾಟಕ ರೆವೆನ್ಯೂ ಆಕ್ಟ್ 1964ರಲ್ಲಿ ಈ ರೀತಿ ಜಮೀನಿಗೆ ಹೋಗುವ ದಾರಿಯ ಬಗ್ಗೆ ಪೂರ್ತಿ ಮಾಹಿತಿ ತಿಳಿಸಲಾಗಿದೆ. ಆದರೆ ಅದರಲ್ಲಿ ಕೆಲ ಇತಿಮಿತಿ ಇದೆ, ಮುಖ್ಯವಾಗಿ ಬ್ರಿಟಿಷರ ಕಾಲದಲ್ಲಿ ಸರ್ವೆ ನಡೆದಿದ್ದಾಗ ಆ ಮೂಲ ಸರ್ವೆಯನ್ನೇ ಆಧರಿಸಿ ಬಂಡಿ ಹಾಗೂ ಕಾಲುದಾರಿ ವಿಸ್ತೀರ್ಣವನ್ನು ಪ್ರತ್ಯೇಕವಾಗಿ ಗುರುತಿಸಿ ಅದನ್ನು ಸಂಪೂರ್ಣವಾಗಿ ರೈತರ ಹಿಡಿತದಿಂದ ಬೇರೆ ಮಾಡಿ ಎಲ್ಲ ರೈತರಿಗೂ ಅನುಕೂಲವಾಗುವಂತೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಆದರೆ ಈಗ ಭೂಮಿಯ ಸಣ್ಣ ಸಣ್ಣ ತುಕಡಿಗಳಾಗುತ್ತಿದೆ ಹೀಗಾಗಿ ಜಮೀನಿನಲ್ಲಿ ಸರ್ವೆ ನಂಬರ್ ಕೂಡ ಹೆಚ್ಚಾಗುತ್ತಿರುವುದರಿಂದ ಈ ರೀತಿಯಾಗಿ ದಾರಿ ಸಮಸ್ಯೆ ಎದುರಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಹಳ ದೊಡ್ಡದಾಗಿ ಪರಿಣಮಿಸಿದೆ ಈ ಕಾಲುದಾರಿ ಹಾಗೂ ಬಂಡೀದಾರಿ ಸಮಸ್ಯೆ. ಯಾಕೆಂದರೆ, ಗ್ರಾಮ ನಕ್ಷೆಯಲ್ಲಿ ಈ ದಾರಿಯನ್ನು ತೋರಿಸಿದರು ಕೆಲವು ರೈತರು ಹಿಂದಿನವರಿಗೆ ರಸ್ತೆ ಬಿಡದೇ ಅಡ್ಡ ಪಡಿಸುತ್ತಿದ್ದಾರೆ ಮುಂದೆ ಇದು ವಿಪರೀತಕ್ಕೆ ತಿರುಗಿ ಈ ಕ್ಷುಲ್ಲಕ ಕಾರಣಕ್ಕೆ ರೈತರು ಕೋರ್ಟ್ ಕಚೇರಿ ಮೆಟ್ಟಲು ಹತ್ತುವಂತೆ ಆಗುತ್ತಿದೆ.
ಇದರಿಂದ ಗ್ರಾಮಗಳಲ್ಲಿ ಸೌಹಾರ್ದತೆ ಹಾಗೂ ಸ್ವಾಸ್ಥ್ಯ ಹಾಳಾಗುವುದಲ್ಲದೆ ಅನೇಕ ಕುಟುಂಬಗಳಿಗೆ ಕೆಡಕಾಗುತ್ತಿದೆ. ಈ ಸಮಸ್ಯೆಯೊಂದಿಗೆ ಕೆಲವು ಕಡೆ ಗ್ರಾಮ ನಕ್ಷೆಯಲ್ಲಿ ತೋರಿಸುವ ಮಾರ್ಗಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ, ಇನ್ನು ಕೆಲವರಿಗೆ ಈ ರೀತಿ ಮಾರ್ಗಗಳು ಇವೆ ಎನ್ನುವುದೇ ಗೊತ್ತಿಲ್ಲ ಹಾಗಾಗಿ ಅವರು ನೂರಾರು ವರ್ಷಗಳಿಂದ ಬಳಸುತ್ತಿರುವ ರೂಢಿ ದಾರಿಯನ್ನೇ ಬಳಸಿ ಸಂಚರಿಸುತ್ತಿದ್ದಾರೆ.
ಇವರಿಗೆಲ್ಲ ಈಗ ಸರ್ಕಾರದಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ ಈ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತನ ಜಮೀನಿಗೆ ಹೋಗಲು ದಾರಿ ಪಡೆಯುವ ಹಕ್ಕು ಇರುವುದರಿಂದ ಅದನ್ನು ಪಡೆದುಕೊಳ್ಳಲು ಈ ಕೆಳಗಿನ ಮಾರ್ಗಗಳನ್ನು ಅನುಸರಿಸಬಹುದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆ ಪ್ರಕಾರ ಇರುವ ಮಾರ್ಗಗಳ ಮಾಹಿತಿ ಹೀಗಿದೆ.
1. The Indian Easement act 1882 ಈ ಕಾಯ್ದೆಯಲ್ಲೂ ಕೂಡ ಮಾರ್ಗಗಳ ಬಗ್ಗೆ ಸ್ಪಷ್ಟತೆ ನೀಡಲಾಗಿದೆ ಇದರ ಪ್ರಕಾರ ನಡೆದುಕೊಂಡು ತನ್ನ ಜಮೀನಿಗೆ ಹೋಗುವ ರಸ್ತೆ ಪಡೆದುಕೊಳ್ಳಬಹುದು.
2. ಈ ರೀತಿ ಜಮೀನಿಗೆ ಹೋಗಲು ರಸ್ತೆಯಿಲ್ಲದ ಸಮಸ್ಯೆ ಪಡುತ್ತಿರುವ ರೈತರು ಈ ಸಮಸ್ಯೆ ಬಗೆಹರಿಸುವಂತೆ ತಾಲೂಕು ಮಟ್ಟದಲ್ಲಿರುವ ತಹಶೀಲ್ದಾರ್ ಕಚೇರಿಗೆ ಹೋಗಿ ದೂರು ಸಲ್ಲಿಸಬೇಕು, ಇದುವರೆಗೆ ಜಿಲ್ಲಾ ಕಚೇರಿಯಲ್ಲಿ ದೂರ ಸಲ್ಲಿಸುತ್ತಿದ್ದರು ಇದಕ್ಕಿಂತ ತಾಲೂಕಿನ ಪ್ರಥಮ ದಂಡಾಧಿಕಾರಿಗಳಾದ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸುವುದರಿಂದ ಶೀಘ್ರವಾಗಿ ಕಾರ್ಯ ಪೂರ್ತಿಗೊಳ್ಳುತ್ತದೆ.
3. ದಾರಿ ಇಲ್ಲದೆ ಇದ್ದವರು ಅಥವಾ ರೂಢಿ ದಾರಿ ಬಳಸುತ್ತಿರುವವರು ಅಥವಾ ದಾರಿ ಬಗ್ಗೆ ಮಾಹಿತಿ ಗೊತ್ತಿಲ್ಲದೇ ಇದ್ದವರು ಕೂಡ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸರ್ಕಾರದ ಮುಖೇನ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.