ಕರ್ನಾಟಕ ರಾಜ್ಯದ (Karnataka government) ಎಲ್ಲಾ ವಿದ್ಯಾರ್ಥಿಗಳಿಗೂ (for Students) ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ. ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದು ಸದಾ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಣದ ಹಾದಿಯನ್ನು ಭದ್ರಗೊಳಿಸುತ್ತಿದೆ.
ಜೊತೆಗೆ ಆರ್ಥಿಕ ಕಾರಣದಿಂದ ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಗಳು, ವಿದ್ಯಾರ್ಥಿವೇತನ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮುಂತಾದ ಪರಿಕರಗಳನ್ನು ಕೂಡ ನೀಡಿ ಸಹಿಯ ಮಾಡುತ್ತಿದೆ. ಶಾಲಾ ಮಟ್ಟದಲ್ಲಿ ಮಾತ್ರವಲ್ಲದೆ ಕಾಲೇಜು ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಸರ್ಕಾರದಿಂದ ಸಾಕಷ್ಟು ಅನುಕೂಲತೆ ಸಿಗುತ್ತಿದೆ.
ಇವುಗಳ ಜೊತೆಗೆ ಇತ್ತೀಚಿಗೆ ಉಚಿತ ಲ್ಯಾಪ್ಟಾಪ್ (free lap-top) ವಿತರಣೆ ಕೂಡ ಇದಕ್ಕೆ ಸೇರ್ಪಡೆ ಆಗುತ್ತಿದೆ ಈ ಕುರಿತು ರಾಜ್ಯ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಹೊಸ ಅಪ್ಡೇಟ್ ಸಿಕ್ಕಿದೆ. ಈಗಿನ ಕಾಲದಲ್ಲಿ ಶಿಕ್ಷಣ ಕ್ಷೇತ್ರ ಕೂಡ ಡಿಜಿಟಲಿಕರಣಗೊಂಡಿದೆ. ಮಕ್ಕಳು ಪೆನ್ನು ಪುಸ್ತಕ ಹಿಡಿದು ಬರೆಯುವುದನ್ನು ಬಿಟ್ಟು ಈಗ ಎಲ್ಲವನ್ನು ಆನ್ಲೈನಲ್ಲಿ ಕಲಿಯುವ ಸಮಯವಾಗಿದೆ.
ಈ ರೀತಿ ಆನ್ಲೈನ್ ಶಿಕ್ಷಣಕ್ಕೆ ಸೇತುವೆ ಆಗಿರುವುದು ಲ್ಯಾಪ್ಟಾಪ್ ಹಾಗೂ ಟ್ಯಾಬ್. ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ಪ್ರತ್ಯೇಕ ಲ್ಯಾಪ್ಟಾಪ್ ಅವಶ್ಯಕತೆ ಇದೆ. ಪ್ರತಿಯೊಬ್ಬರು ಪ್ರತ್ಯೇಕವಾದ ಲ್ಯಾಪ್ಟಾಪ್ ಹೊಂದಿದ್ದರೆ ಅವರಿಗೆ ಇದರಿಂದ ಅನೇಕ ಅನುಕೂಲತೆ ಸಿಗಲಿದೆ. ಆದರೆ ಎಲ್ಲರಿಗೂ ಕೂಡ ಲ್ಯಾಪ್ಟಾಪ್ ಕೊಂಡುಕೊಳ್ಳುವ ಶಕ್ತಿ ಇರುವುದಿಲ್ಲ ಇದನ್ನು ಮನಗಂಡಿರುವ ಸರ್ಕಾರವು ಈ ನೆರವನ್ನು ಒದಗಿಸಲು ಮುಂದಾಗಿದೆ.
ಇದುವರೆಗೆ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಕಟ್ಟಡ ಕಾರ್ಮಿಕರು ಮಕ್ಕಳು ಮುಂತಾದ ಕೆಲವು ಆಯ್ದ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರ ಉಚಿತವಾಗಿ ಫ್ರೀ ಲ್ಯಾಪ್ಟಾಪ್ ಕೊಡುತ್ತಿತ್ತು. ಈಗ ಒಟ್ಟಾರೆಯಾಗಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ.
ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ಘೋಷಣೆ ಮಾಡಿದ್ದಾರೆ. SCSC / TSP ಯೋಜನೆ ಅಡಿ 230 ಕೋಟಿ ರೂ. ಅನುದಾನ ಒದಗಿಸಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ( University’s SC/ST Students) ಲ್ಯಾಪ್ಟಾಪ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು CM ಹಂಚಿಕೊಂಡಿದ್ದಾರೆ.
ಹಾಗಾಗಿ ಈ ಬಾರಿ ಪದವಿ ಹಾಗೂ ಸ್ತಾತಕೋತರ ಪದವಿ ಅಥವಾ ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿರುವ ವಿಶ್ವವಿದ್ಯಾಲಯಗಳ ಯಾವುದೇ ವರ್ಷದ ವಿದ್ಯಾರ್ಥಿಗಳಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿ ಫ್ರೀಯಾಗಿ ಲ್ಯಾಪ್ಟಾಪ್ ಸಿಗುವುದು ಕನ್ಫರ್ಮ್ ಆಗಿದೆ.
ಕೆಲವೇ ದಿನಗಳಲ್ಲಿ ಅರ್ಜಿ ಸ್ಪೀಕಾರ ಪ್ರಕ್ರಿಯೆ ಕೂಡ ನಡೆಯಲಿದ್ದು ಸರ್ಕಾರ ಅದಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಇದಕ್ಕಾಗಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಬಹುದು ಮತ್ತು ದಾಖಲೆಗಳಾಗಿ ಕಾಲೇಜಿಗೆ ದಾಖಲಾಗಿರುವ ದಾಖಲೆಗಳು ಮತ್ತು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಮತ್ತು ವಿದ್ಯಾರ್ಥಿಯ ಗುರುತಿನ ಚೀಟಿಯನ್ನು ಕೇಳಬಹುದು.
ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಯೋಜನೆಯಡಿ 230 ಕೋಟಿ ರೂ. ಗಳನ್ನು ಒದಗಿಸಿ, ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
– ಮುಖ್ಯಮಂತ್ರಿ @siddaramaiah #SocialJustice pic.twitter.com/Fycjo8YpVH— CM of Karnataka (@CMofKarnataka) August 21, 2023
ಹಾಗಾಗಿ ಈ ಯೋಜನೆಯ ಅನುದಾನ ಪಡೆಯಲು ಅರ್ಹರಿರುವ ಎಲ್ಲಾ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳು ಸಿದ್ಧಪಡಿಸಿಕೊಂಡರೆ ಸರ್ಕಾರವು ಸೂಚಿಸಿದ ತಕ್ಷಣವೇ ಅರ್ಜಿ ಸಲ್ಲಿಸಿ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗಾಗಿ ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ತಪ್ಪದೆ ಹಂಚಿಕೊಳ್ಳಿ.