ಗೃಹಲಕ್ಷ್ಮಿ ಯೋಜನೆ ಹಣ ಜಮಾ ದಿನಾಂಕ ಮತ್ತಷ್ಟು ಮುಂದೂಡಿಕೆ. ಈ ದಿನ ಕುಟುಂಬದ ಯಜಮಾನಿ ಖಾತೆಗೆ ಹಣ ವರ್ಗಾವಣೆಯಾಗುವುದು ಪಕ್ಕಾ.!

ಸರ್ಕಾರದ ಗ್ಯಾರೆಂಟಿ ಕಾರ್ಡ್ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಆರಂಭದಿಂದಲೂ ಸಾಕಷ್ಟು ವಿಜ್ಞಗಳು ಎದುರಾಗುತ್ತಿವೆ ಅಂತಲೇ ಹೇಳಬಹುದು. ಅರ್ಜಿ ಸ್ವೀಕಾರ ಮಾಡುವ ದಿನಾಂಕವನ್ನು ಕೂಡ ಅನೇಕ ಸಮಸ್ಯೆಗಳ ಕಾರಣದಿಂದ ಪದೇಪದೇ ಮುಂದೂಡಲಾಗುತ್ತಿತ್ತು.

WhatsApp Group Join Now
Telegram Group Join Now

ಕೊನೆಗೆ ಅಂತಿಮವಾಗಿ ಜುಲೈ 19 ರಿಂದ ಅರ್ಜಿ ಸ್ವೀಕಾರ ಮಾಡಲು ಅನುಮತಿ ನಿಡಲಾಯಿತಾದರೂ ಅದಕ್ಕೆ ರೂಪಿಸಿರುವ ಮನದಂಡಗಳಲ್ಲಿ ಪದೇಪದೇ ಬದಲಾವಣೆ ಆಯ್ತು. ಅಂತಿಮವಾಗಿ ಈಗ ಯೋಚನೆ ಲಾಂಚ್ ದಿನಾಂಕ (launch date postponed) ಯಾವುದು ಎನ್ನುವುದು ಕುರಿತು ಗೊಂದಲ ಎದುರಾಗಿದೆ.

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ.! ಇನ್ಮುಂದೆ RC ಮತ್ತು DL ಗಾಗಿ ಅಲೆದಾಡಬೇಕಿಲ್ಲ. ಮನೆ ಬಾಗಿಲಿದೆ ಪೋಸ್ಟಲ್ ಮೂಲಕ ಬರಲಿದೆ.!

ಯಾಕೆಂದರೆ ಯೋಜನೆಗೆ ಆದೇಶ ಪತ್ರದಲ್ಲಿ ತಿಳಿಸಿದ್ದ ಪ್ರಕಾರ ಆಗಸ್ಟ್ 15ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಯೋಜನೆಯನ್ನು ಲಾಂಚ್ ಮಾಡಿ 16ನೇ ತಾರೀಕಿನಂದು ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿ ಖಾತೆಗೂ ಕೂಡ DBT ಮೂಲಕ 2000ರೂ. ಹಣ ವರ್ಗಾವಣೆ ಮಾಡಬೇಕಿತ್ತು.

ಆದರೆ ಈ ಯೋಜನೆಯನ್ನು ಆಗಸ್ಟ್ 20 ಕ್ಕೆ ಮುಂದೂಡಲಾಯಿತು, 21 ರಂದು ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ದಿನಾಂಕ ಕೂಡ ಬದಲಾಯಿತು ಕಾರ್ಯಕ್ರಮವನ್ನು ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡುವ ಉದ್ದೇಶದಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ತಮ್ಮ ತವರು ಜಿಲ್ಲೆಯಾದ ಬೆಳಗಾವಿಯಲ್ಲಿ (Belagavi) ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿ.

ಇನ್ಮುಂದೆ ಕೈ ಬರಹದ ಅರ್ಜಿ ಬಂದ್, ಇ-ಸ್ವತ್ತು, ಖಾತೆ ಬದಲಾವಣೆಗೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ.! ಈ ಸೇವೆ ಆರಂಭ ಯಾವಾಗ ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈ ಕಾರ್ಯಕ್ರಮಕ್ಕೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರ ಅವರನ್ನು ಕರೆಸಿ ಈ ಮೂಲಕ ದೇಶಕ್ಕೆ ಸಂದೇಶ ಕೊಡಬೇಕು ಎಂದು ಆಸೆ ಪಟ್ಟಿದ್ದರು. ಮತ್ತು ಈ ವಿಷಯವನ್ನು ಸುದ್ದಿಗೋಷ್ಠಿ (press meet) ನಡೆಸಿ ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laksmi Hebbalkar) ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (D.K Shivakumar) ಅವರು ಮಾಧ್ಯಮಗಳಿಗೆ ತಿಳಿಸಿದ್ದರು.

ಆಗಸ್ಟ್ 27ರಂದು ಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತದೆ, ಆಗಸ್ಟ್ 28 ನೇ ತಾರೀಕಿನಂದು ಈ ಯೋಜನೆಗೆ ನೋಂದಾಯಿಸಿಕೊಂಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ ರೂ. 2000 ಸಹಾಯಧನ ವರ್ಗಾವಣೆ ಆಗಲಿದೆ ಎಂದು ತಿಳಿಸಿದ್ದರು. ಆದರೆ ಬಳಿಕ ಸಿದ್ದರಾಮಯ್ಯನವರು (C.M Siddaramaih) ಬೆಳಗಾವಿಯಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳ ಪರಿಶೀಲನೆಗೆ ಹೋದಾಗ ಈ ಯೋಜನೆ ಜಾರಿ ದಿನಾಂಕ ಇನ್ನೆರಡು ದಿನ ಮುಂದೆ ಹೋಗಲಿದೆ ಎನ್ನುವ ಶಾ’ಕಿಂ’ಗ್ ಹೇಳಿಕೆಯನ್ನು ಕೊಟ್ಟಿದ್ದರು.

ನಾರ್ಮಲ್ ಡೆಲಿವರಿ ಅಪರೂಪ ಆಗಿರುವುದು ಯಾಕೆ ಗೊತ್ತಾ.? ನಿಮಗೂ ನಾರ್ಮಲ್ ಡೆಲಿವರಿ ಆಗಬೇಕಾ ವೈದ್ಯರ ಈ ಸಲಹೆ ಪಾಲಿಸಿ ಸಾಕು.!

ಇದೀಗ ಅಂತಿಮವಾಗಿ ಎಂದು ಕಾರ್ಯಕ್ರಮ ಲಾಂಚ್ ಆಗುತ್ತದೆ ಹಾಗೂ ಯಾವಾಗ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ಕುಟುಂಬದ ಯಜಮಾನಿಯರು ಕಾಯುತ್ತಿದ್ದಾರೆ. ಇತ್ತೀಚಿಗೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿ (Agricultural Minister Cheluvaraya Swamy) ಅವರು ಈ ಕುರಿತು ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ.

ಆಗಸ್ಟ್ 30ರಂದು ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ, ಅಂದು ರಾಜ್ಯದ 1.10 ಕೋಟಿ ಮಹಿಳೆಯರ ಖಾತೆಗೆ 2000ರೂ. ಸಹಾಯಧನ ವರ್ಗಾವಣೆ ಆಗಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಮಾತನಾಡಿ 1.28 ಕೋಟಿ ಫಲಾನುಭವಿಗಳನ್ನು ಈ ಯೋಜನೆಗೆ ಗುರುತಿಸಲಾಗಿತ್ತು.

ಇಂತವರಿಗೆ ಒಂದು ಲಕ್ಷದವರೆಗಿನ ಸಾಲ ಮನ್ನಾ.! ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ಜಾರಿ.! ಸಾಲ ಪಡೆದಿರುವವರು ಈ ಸುದ್ದಿ ನೋಡಿ.!

ಆದರೆ ಕುಟುಂಬದ ಯಜಮಾನಿ ಮಹಿಳೆಯ ದಾಖಲೆಗಳಲ್ಲಿ ವ್ಯತ್ಯಾಸ ಇರುವ ಕಾರಣಕ್ಕಾಗಿ ಎಲ್ಲರೂ ಯೋಜನೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ತಿದ್ದುಪಡಿ ಮಾಡಿಸಿಕೊಂಡ ನಂತರ ಸೇರ್ಪಡೆ ಆಗಬಹುದು. ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಕಡೆ ದಿನಾಂಕ ನಿಗಧಿ ಮಾಡಿಲ್ಲ (No last date to apply Gruhalakshmi Scheme).

ಈಗಾಗಲೇ ಅರ್ಜಿ ಸಲ್ಲಿಸಿರುವವರು 8147500500 ಈ ಸಹಾಯವಾಣಿ (helpline) ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಫಲಾನುಭವಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಸಂಖ್ಯೆಯಿಂದ ಕಳುಹಿಸುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವುದು ಯಶಸ್ವಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಕಂಫರ್ಮ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now