ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಂದು ಸ್ವಂತ ಮನೆಯನ್ನು ಹಾಗೂ ಭೂಮಿಯನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ. ಆದರೆ ಅವರು ಮಾಡುವಂತಹ ಕೆಲಸ ಕಾರ್ಯದ ಮೇಲೆ ಅವರು ಕೆಲವೊಮ್ಮೆ ಹೆಚ್ಚು ಹಣಕಾಸು ಸಂಪಾದನೆ ಮಾಡಲು ಸಾಧ್ಯ ವಾಗದೆ ಇದ್ದರೂ ಕೂಡ ಕೆಲವೊಂದು ಸಮಯದಲ್ಲಿ ಕೆಲವೊಂದು ಮುಖಾಂತರ ನೀವು ನಿಮ್ಮ ಸ್ವಂತ ಮನೆ ಭೂಮಿಯನ್ನು ಪಡೆದು ಕೊಳ್ಳುವ ಸಾಧ್ಯತೆ ಇರುತ್ತದೆ.
ಹೌದು ಆದರೆ ಕೆಲವೊಂದಷ್ಟು ಜನ ಎಷ್ಟೇ ಹಣಕಾಸು ಇಟ್ಟುಕೊಂಡಿದ್ದರು ಸಹ ಅವರು ತಮ್ಮ ಸ್ವಂತ ಮನೆ, ಸೈಟು, ಭೂಮಿಯನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಹೌದು ಅವರಿಗೆ ಆ ಒಂದು ಅದೃಷ್ಟ ಇರುವುದಿಲ್ಲ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ.
ಭೂ ವರಾಹ ಸ್ವಾಮಿ ದೇವಿಯ ಯಾವ ಒಂದು ಮಂತ್ರವನ್ನು ಹೇಳುವುದರ ಮೂಲಕ ಹಾಗೂ ನಾವು ಯಾವ ರೀತಿಯ ಪೂಜೆಯನ್ನು ಮಾಡುವುದರ ಮೂಲಕ ನಾವು ಕೂಡ ನಮ್ಮ ಸ್ವಂತ ಮನೆ ಅಥವಾ ಭೂಮಿಯನ್ನು ಖರೀದಿಸಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಿಂದೂ ಗ್ರಂಥದಲ್ಲಿ ಉಲ್ಲೇಖವಾದಂತೆ ಪ್ರಳಯ ಕಾಲದಲ್ಲಿ ಹಿರಣ್ಯ ಶುಕ್ಲ ಎಂಬ ರಾಕ್ಷಸ ಭೂಮಿಯನ್ನು ಚಾಪೆಯ ರೂಪದಲ್ಲಿ ಸುತ್ತಿ ಸಮುದ್ರದ ಹತ್ತಿರ ತೆಗೆದು ಕೊಂಡು ಹೋಗಬೇಕಾದರೆ ಮಹಾವಿಷ್ಣು ವರಾಹ ರೂಪವನ್ನು ತಾಳಿ ಭೂಮಿಯನ್ನು ತನ್ನ ಕೋರೆಗಳಿಂದ ಮೇಲಕ್ಕೆ ಎತ್ತಿ ಹಿಡಿಯುತ್ತಾನೆ.
ವರಾಹ ರೂಪದಲ್ಲಿ ಇರುವ ವಿಷ್ಣು ಭೂಮಿಯನ್ನು ಉದ್ದರಿಸುತ್ತಾನೆ. ಭೂ ವರಾಹ ಸ್ವಾಮಿ ಮಂತ್ರ ಹಾಗೂ ಶಕ್ತಿ ಏನೆಂದರೆ. ಈ ಮಂತ್ರದಲ್ಲಿ ಸ್ವಯಂ ಶ್ರೀ ಮಹಾವಿಷ್ಣು ತನ್ನ ಶಕ್ತಿಯನ್ನು ವರಾಹ ರೂಪದಲ್ಲಿ ಕೇಂದ್ರೀಕರಿಸುತ್ತಾನೆ. ಹಾಗಾಗಿ ಈ ಮಂತ್ರ ಬಹಳ ಶಕ್ತಿಯುತವಾಗಿದೆ. ಹಾಗಾದರೆ ಆ ಮಂತ್ರ ಯಾವುದು ಎಂದು ಈ ಕೆಳಗೆ ತಿಳಿಯೋಣ.
” ಓಂ ನಮೋ ಭಗವತಯೇ ವಾರಾಹ ರೂಪಾಯೇ ಭೂರ್ಭುವಂ ಸ್ವಃ ಭೂಪತಯೇ ಭೂ ಪತಿತ್ವಂ ಮೇ ದೇಹಿ ದಾಪಯ ಸ್ವಾಹಃ”
ಈ ಮಂತ್ರವನ್ನು ಪ್ರತಿನಿತ್ಯ ಪೂಜೆ ಮಾಡುವಂತಹ ಸಮಯದಲ್ಲಿ ಬೆಳಿಗ್ಗೆ ಅಥವಾ ಸಾಯಂಕಾಲ 21 ಬಾರಿ ಅಥವಾ ಸಾಧ್ಯವಾದರೆ 108 ಬಾರಿ ಪಠಿಸಬೇಕು. ಯಾರು ಈ ಮಂತ್ರವನ್ನು ಬಹಳ ಭಕ್ತಿಯಿಂದ ಹಾಗೂ ಎಷ್ಟು ನಂಬಿಕೆಯಿಂದ ಪಠಿಸುತ್ತಾರೋ ಅಷ್ಟು ಒಳ್ಳೆಯ ಉತ್ತಮವಾದ ಫಲಿತಾಂಶವನ್ನು ಕಾಣಬಹುದು ಎನ್ನುವಂತಹ ನಂಬಿಕೆ ಇದೆ. ಸುಮಾರು 2500 ವರ್ಷಗಳ ಇತಿಹಾಸ ಇರುವ
ಶ್ರೀ ಕಲ್ಲಹಳ್ಳಿಯ ಶ್ರೀ ಭೂ ವರಾಹ ಸ್ವಾಮಿ ದೇವಸ್ಥಾನದ ಇತಿಹಾಸ ಇದಾಗಿದ್ದು. ಪ್ರತಿಯೊಬ್ಬರೂ ಕೂಡ ಈ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದು ಅಲ್ಲಿ ಸಂಕಲ್ಪವನ್ನು ಮಾಡಿ ಪ್ರತಿನಿತ್ಯ ಮೇಲೆ ಹೇಳಿದ ಮಂತ್ರವನ್ನು ಬೆಳಿಗ್ಗೆ ಅಥವಾ ಸಂಜೆ ಪಠಿಸುತ್ತಾ ಬರುವುದ ರಿಂದ ನೀವು ಕೂಡ ನಿಮ್ಮ ಆಸೆಯಂತೆ ಸ್ವಂತ ಮನೆಯನ್ನು, ಸೈಟು, ಭೂಮಿ ಖರೀದಿಯನ್ನು ಮಾಡಬಹುದು ಎಂದೇ ಹೇಳಬಹುದು.
ಅದರಲ್ಲೂ ಯಾರು ಎಷ್ಟು ಭಕ್ತಿಯಿಂದ ಭೂ ಪಠಿಸುತ್ತಾ ಸ್ವಾಮಿಯನ್ನು ಬೇಡಿ ಕೊಳ್ಳುತ್ತಾರೋ ಅಷ್ಟು ಒಳ್ಳೆಯ ಫಲಿತಾಂಶವನ್ನು ನೀವು ಅತಿ ಬೇಗನೆ ಪಡೆಯುತ್ತೀರಿ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಪ್ರತಿನಿತ್ಯ ಪಠಿಸುತ್ತಾ ಬರುವುದು ನಿಮಗೆ ತುಂಬಾ ಒಳ್ಳೆಯದು ಹಾಗೂ ನೀವು ಅಂದುಕೊಂಡ ಎಲ್ಲಾ ಆಸೆಗಳನ್ನು ಸಹ ಈಡೇರಿಸಿಕೊಳ್ಳುತ್ತೀರಿ ಎಂದೇ ಹೇಳಬಹುದು.