ಹಿಂದೂಗಳು ವಾಸ್ತು ಶಾಸ್ತ್ರವನ್ನು ಬಹಳಷ್ಟು ನಂಬುತ್ತಾರೆ ಹಾಗೂ ಆ ಪ್ರಕಾರವಾಗಿ ನಡೆದುಕೊಂಡಾಗ ಜೀವನದಲ್ಲಿ ಏಳಿಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎನ್ನುವುದು ಬಹಳಷ್ಟು ಮಂದಿಯ ನಂಬಿಕೆ. ವಾಸ್ತು ಎನ್ನುವುದಕ್ಕೆ ವಿಶೇಷವಾಗಿ ಏನನ್ನು ಮಾಡುವ ಅವಶ್ಯಕತೆ ಇಲ್ಲ ಇದು ಬಹಳ ಸರಳ. ಮನೆ ಹೀಗಿರಬೇಕು ಹಾಗೂ ಮನೆಯಲ್ಲಿರುವ ವಸ್ತುಗಳು ಎಲ್ಲೆಲ್ಲಿ ಇರುವುದರಿಂದ ಏನು ಫಲ ಎನ್ನುವ ನಿಯಮ ಅಷ್ಟೇ ಎಂದು ಸರಳವಾಗಿ ಹೇಳಬಹುದು.
ಮನೆ ಹಾಗೂ ಕಚೇರಿಗಳಿಗೆ ವಾಸ್ತು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಈ ರೀತಿ ವಾಸ್ತುಗಳು ಸರಿಯಾಗಿದ್ದಾಗ ಮಾತ್ರ ಆ ಮನೆಯಲ್ಲಿ ಇರುವ ಜನರು ಮಾಡುವ ಪ್ರಯತ್ನಗಳು ಕೈಗೂಡಿ ಶೀಘ್ರವಾಗಿ ಅವರ ಕೆಲಸ ಕಾರ್ಯಗಳಿಗೆ ಫಲ ಸಿಗುತ್ತದೆ ಮತ್ತು ಮನೆಯ ವಾತಾವರಣವು ಶಾಂತವಾಗಿರುತ್ತದೆ.
ಒಂದು ವೇಳೆ ಮನೆಯಲ್ಲಿ ವಾಸ್ತುದೋಷಗಳಿದ್ದರೆ ಎಷ್ಟೇ ಹಣ ತಂದರು ಉಳಿಯುವುದಿಲ್ಲ, ಗಂಡ ಹೆಂಡತಿ ಚಿಕ್ಕ ಚಿಕ್ಕ ವಿಚಾರಕ್ಕೂ ಜ’ಗ’ಳ ಆಡುತ್ತಿರುತ್ತಾರೆ. ಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ, ಯಾವುದೇ ಕೆಲಸ ಮಾಡಲು ಹೊರಟರು ತೊಂದರೆಗಳೇ ಆಗುತ್ತದೆ.
ಮನೆ ಒಳಗೆ ಇರಬೇಕು ಎನ್ನುವ ಸಕಾರಾತ್ಮಕ ಭಾವನೆಗೆ ಬರುವುದಿಲ್ಲ ಎಲ್ಲಿಯಾದರೂ ಹೋಗಿ ಬಿಡೋಣ ಮನೆಯವರಿಗೆ ಅನಿಸುತ್ತದೆ. ಅವರು ವಾಸ್ತು ದೋಷಗಳನ್ನು ಸರಿಪಡಿಸಿಕೊಂಡಾಗ ಸಮಸ್ಯೆಗಳು ಪರಿಹಾರ ಆಗಿರುವ ಉದಾಹರಣೆಗಳು ಅನೇಕ. ಅದೇ ರೀತಿ ಮನೆಯಲ್ಲಿರುವ ವಸ್ತುಗಳ ಮೂಲಕ ಬದಲಾಗುತ್ತದೆ ಎಂದು ನಂಬಲಾಗುತ್ತದೆ.
ಮನೆಯಲ್ಲಿರುವ ವಸ್ತುಗಳು ವಾಸ್ತು ಪ್ರಕಾರವಾಗಿ ಇರಬೇಕಾದ ದಿಕ್ಕಿನಲ್ಲಿ ಇರದೆ, ತಪ್ಪಾದ ರೀತಿಯಲ್ಲಿ ತಪ್ಪಾದ ಸ್ಥಳದಲ್ಲಿ ಇದ್ದರೆ, ಅದರಿಂದಲೂ ವಾಸ್ತು ದೋಷಗಳು ಉಂಟಾಗಿ ಈ ಮೇಲೆ ತಿಳಿಸಿದ ಸಮಸ್ಯೆಗಳು ಬರುತ್ತವೆ. ಕನ್ನಡಿ, ಗಡಿಯಾರ, ಬೀರು, ಫಿಶ್ ಟ್ಯಾಂಕ್, ದೇವರ ಫೋಟೋ ಇವೆಲ್ಲದಕ್ಕೂ ಕೂಡ ಇಲ್ಲಿಲ್ಲೇ ಇರಬೇಕು ಎನ್ನುವ ನಿಯಮಗಳಿವೆ.
ಇದರಲ್ಲಿ ಮುಖ್ಯವಾಗಿ ಗಡಿಯಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ. ಗಡಿಯಾರ ಸಮಯವನ್ನು ಸೂಚಿಸುತ್ತದೆ. ಸಮಯ ಎನ್ನುವುದನ್ನು ಯಾರು ತಡೆಯಲು ಆಗುವುದಿಲ್ಲ, ಸಮಯಕ್ಕೆ ಕಾಯುವುದು ತಪ್ಪು ಹಾಗೂ ಸಮಯ ಯಾರಿಗೂ ಕಾಯುವುದಿಲ್ಲ. ಜೀವನದಲ್ಲಿ ಬಹಳ ಅತ್ಯಮೂಲ್ಯವಾದ ಸಂಪತ್ತು ಯಾವುದೆಂದರೆ ಅದು ನಮ್ಮ ಸಮಯ ಎಂದು ಹೇಳಬಹುದು.
ಜೊತೆಗೆ ಕೆಟ್ಟ ಸಮಯ ಒಳ್ಳೆ ಸಮಯ ಎನ್ನುವುದು ಕೂಡ ಅಷ್ಟೇ ಮುಖ್ಯವಾದ ವಿಷಯ. ಕೆಲವೊಮ್ಮೆ ನಾವು ಮಾಡುವ ಸಣ್ಣಪುಟ್ಟ ತಪ್ಪಿನಿಂದ ನಮ್ಮ ಒಳ್ಳೆ ಸಮಯ ಕೂಡ ಕೆ’ಟ್ಟ ಸಮಯವಾಗಿ ಬದಲಾಗಿಬಿಡುತ್ತದೆ. ಅದರಲ್ಲಿ ಗಡಿಯಾರವನ್ನು ಮನೆಯಲ್ಲಿ ಕಚೇರಿಗೆ ತಪ್ಪಾಗಿ ತಪ್ಪಾದ ದಿಕ್ಕಿನಲ್ಲಿ ಹಾಕುವುದು ಕೂಡ ಒಂದು. ಹಾಗಾಗಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಯಾವ ರೀತಿ ಹಾಕಬೇಕು ಎನ್ನುವ ಕೆಲವು ಸಲಹೆಗಳನ್ನು ಹೀಗಿದೆ ನೋಡಿ.
* ಉತ್ತರ ಅಥವಾ ಪೂರ್ವ ದಿಕ್ಕಿನ ಗೋಡೆಯಲ್ಲಿ ಗಡಿಯಾರವನ್ನು ಹಾಕಿದರೆ ಒಳ್ಳೆಯದು. ಈ ದಿಕ್ಕಿನಲ್ಲಿ ಹಾಕಿದರೆ ಧನ ಸಂಪತ್ತನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಈ ಎರಡು ದಿಕ್ಕಿನಲ್ಲಿ ಹಾಕಲು ಸಾಧ್ಯವಾಗದೆ ಇದ್ದರೆ ಪಶ್ಚಿಮ ದಿಕ್ಕಿನಲ್ಲಿ ಹಾಕಿ, ಆದರೆ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಗಡಿಯಾರ ಹಾಕಬೇಡಿ.
* ಕೆಟ್ಟು ಹೋಗಿರುವ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು, ಗಡಿಯಾರವನ್ನು ಸರಿ ಮಾಡಿ ಬಳಸಬೇಕು. ಒಂದು ವೇಳೆ ಗಾಜಿನ ಗಡಿಯಾರ ಮನೆಯಲ್ಲಿ ಇದ್ದಾರೆ ಗಾಜು ಒಡೆಯದಂತೆ ನೋಡಿಕೊಳ್ಳಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಿದ್ದಾರೆ. ಅದನ್ನು ಹೊರತುಪಡಿಸಿ ಯಾವುದೇ ರೀತಿಯ ಗಡಿಯಾರ ಇದ್ದರೂ ಕೂಡ ಒಡೆದಿರಬಾರದು, ಬಿರುಕಾಗಿರಬಾರದು. ಆಗಾಗ ಗಡಿಯಾರನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು.
* ಮನೆಯಲ್ಲಿ ಲೋಲಕವಿದ್ದು ಸದ್ದು ಮಾಡುವ ಗಡಿಯಾರ ಇಟ್ಟರೆ ಒಳ್ಳೆಯದು ಎಂದು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಗಡಿಯಾರ ಅಥವಾ ಕೈಗಳಲ್ಲಿರುವ ವಾಚ್ ಶೆಲ್ ಖಾಲಿಯಾಗಿ ಸಮಯ ನಿಂತಿರಬಾರದು ಈ ರೀತಿ ಎಚ್ಚರ ವಹಿಸಿ ನೋಡಿಕೊಳ್ಳಬೇಕು.