ನಮ್ಮ ಹಿಂದುಗಳ ಪಾಲಿಗೆ ಅರಳಿಮರ ಬಹಳ ಪವಿತ್ರವಾದ ವೃಕ್ಷವಾಗಿದೆ ಇದನ್ನು ದೈವ ಸಮಾನ ಎಂದು ಪರಿಗಣಿಸಿ ಪೂಜಿಸಲಾಗುತ್ತದೆ. ಅರಳಿಮರದಲ್ಲಿ ಮುಖ್ಯವಾಗಿ ಬ್ರಹ್ಮದೇವರು, ಲಕ್ಷ್ಮಿ ಹಾಗೂ ಮಹಾವಿಷ್ಣು ಮತ್ತು ಇನ್ನು ಮುಂತಾದ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗಿದೆ.
ಅರಳಿಮರಕ್ಕೆ ಬಹಳ ವಿಶೇಷವಾದ ಶಕ್ತಿ ಇದೆ ಹಾಗಾಗಿ ಇದು ಕೂಡ ಒಬ್ಬ ದೇವತೆಯಂತೆ ಪೂಜಿಸಲ್ಪಡುತ್ತಿದೆ. ಅರಳಿ ಮರಕ್ಕೆ ಪ್ರದಕ್ಷಣೆ ಹಾಕುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಅನೇಕ ದೋಷಗಳು ಪರಿಹಾರ ಆಗುತ್ತವೆ. ಮುಖ್ಯವಾಗಿ ಅರಳಿಮರವನ್ನು ಪೂಜೆ ಮಾಡಿ ಪ್ರದಕ್ಷಿಣೆ ಹಾಕುವುದರಿಂದ ರಾಹು ಕೇತು ದೋಷ, ಶನಿ ದೋಷ, ಗೃಹ ದೋಷಗಳು ನಿವಾರಣೆ ಆಗುತ್ತವೆ.
ಯಾವುದೇ ಕಾರಣಕ್ಕೂ ಭಾನುವಾರದಂದು ಅರಳಿ ಮರಕ್ಕೆ ಪೂಜೆ ಮಾಡುವುದಾಗಲಿ ಅಥವಾ ಪ್ರದಕ್ಷಿಣೆ ಹಾಕದಾಗಲೇ ಮಾಡಬಾರದು ಎಂದು ಸಹ ಹೇಳಲಾಗುತ್ತದೆ. ಅನಾದಿಕಾಲದಿಂದಲೂ ಅರಳಿಮರ ಬಗ್ಗೆ ಉಲ್ಲೇಖ ಇದ್ದೇ ಇದೆ.
ಅರಳಿ ಮರದ ಕೆಳಗೆ ಗೌತಮನಿಗೆ ಜ್ಞಾನೋದಯವಾಗಿ ಭಗವಾನ್ ಬುದ್ಧ ಆದರು ಮತ್ತು ನಮ್ಮ ಭರತ ಭೂಮಿಯಲ್ಲಿ ಅನೇಕ ಋಷಿಮುನಿಗಳು ಜನ್ಮ ತಾಳಿ ಆಧ್ಯಾತ್ಮದಲ್ಲಿ ಸಾಧನೆ ಮಾಡಿದ್ದಾರೆ ಇವರೆಲ್ಲರೂ ಕೂಡ ಅರಳಿ ಮರದ ಕೆಳಗಡೆ ನೆಲೆ ನಿಂತಿದ್ದದ್ದನ್ನು ನಾವು ಕೇಳಿದ್ದೇವೆ ಹೀಗಾಗಿ ಅರಳಿ ಮರಕ್ಕೆ ಕೇಳಿದ್ದನ್ನು ಕೊಡುವ ಇಚ್ಛೆಗಳನ್ನು ಪೂರೈಸುವ ಶಕ್ತಿ ಇದೆ ಎಂದು ಹೇಳಬಹುದು.
ಈಗಲೂ ಸಹ ವಿವಾಹ ವಿಳಂಬ, ಸಂತಾನ ವಿಳಂಬ ಮುಂತದ ಸಮಸ್ಯೆಗಳಿಗೆ ಮೊದಲು ಸೂಚಿಸುವುದೇ ಅರಳಿಮರದ ಪ್ರದಕ್ಷಿಣೆಯನ್ನು ಮಾಡಲು. ಈ ಸಮಸ್ಯೆಗಳು ಮಾತ್ರ ಅಲ್ಲದೆ ಹಣಕಾಸಿನ ಸಮಸ್ಯೆಗಳು, ವ್ಯಾಪಾರ ವ್ಯವಹಾರ ಅಭಿವೃದ್ಧಿ ಅನಾರೋಗ್ಯಗಳಿಗೂ ಮತ್ತು ಏಕಾಗತ್ತೆ ಮತ್ತು ಮನಃಶಾಂತಿ ಬೇಕಾಗಿದ್ದಲ್ಲಿ ಹಾಗೂ ಮನಸ್ಸಿಗೆ ಸಕಾರಾತ್ಮಕ ವಾತಾವರಣ ಬೇಕಾಗಿದ್ದಲ್ಲಿ ಅರಳಿ ಮರದ ಪ್ರದಕ್ಷಿಣೆ ಹಾಕುತ್ತ ಸಮಯ ಕಳೆಯಬಹುದು.
ಇವುಗಳ ಜೊತೆ ಶನಿವಾರದಂದು ಅರಳಿ ಮರದ ಬಳಿ ಈ ಒಂದು ಕಾರ್ಯ ಮಾಡಿದರೆ ನಿಮ್ಮ ಯಾವುದೇ ರೀತಿಯ ಸಮಸ್ಯೆ ಇದ್ದರೂ ಪರಿಹಾರವಾಗಿ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಆದರೆ ಇದನ್ನು ಮಾಡುವ ಮುನ್ನ ಬಹಳ ಭಕ್ತಿ ಹಾಗೂ ನಂಬಿಕೆಯಿಂದ ಮಾಡಬೇಕು. ಪೂರ್ತಿ ಮನಸ್ಸು ಶನಿ ದೇವರನ್ನು ಹಾಗೂ ಆಂಜನೇಯನನ್ನು ನೆನೆದು ಸಂಕಲ್ಪದಿಂದ ಶನಿವಾರದಂದು ಇದನ್ನು ಮಾಡಿದರೆ ಫಲ ಸಿಕ್ಕೆ ಸಿಗುತ್ತದೆ.
ಪ್ರತಿಯೊಬ್ಬರೂ ಕೂಡ ಮಾಡಬಹುದಾದ ಸರಳ ಆಚರಣೆ ಇದಾಗಿದೆ ವಿದ್ಯಾರ್ಥಿಗಳಿಂದ ಹಿಡಿದು ವ್ಯಾಪಾರ ವ್ಯವಹಾರ ಮಾಡುವವರು ಗೃಹಿಣಿಯರು ಉದ್ಯೋಗಸ್ಥರು ಹಿರಿಯರು ಹೀಗೆ ಯಾರು ಬೇಕಾದರೂ ಇದನ್ನು ಮಾಡಬಹುದು. ಈ ಆಚರಣೆ ಅಷ್ಟು ಸರಳವಾಗಿದೆ. ಸಾಧ್ಯವಾದರೆ ಬ್ರಾಹ್ಮಿ ಮುಹೂರ್ತದಲ್ಲಿ ಇದನ್ನು ಮಾಡುವುದು ಒಳ್ಳೆಯದು.
ಮಾಡಬೇಕಾಗಿರುವುದು ಇಷ್ಟೇ, ಶನಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿಯುಟ್ಟು ಅರಳಿ ಮರದ ಬಳಿ ಬಂದು 9 ಅಥವಾ 21 ಪ್ರದಕ್ಷಣೆ ಹಾಕಿ ಅರಳಿ ಮರದ ಕೆಳಗೆ ಕುಳಿತುಕೊಂಡು ಹನುಮಾನ್ ಚಾಲೀಸವನ್ನು ಪಠಿಸಬೇಕು ಈ ರೀತಿ ನಿಮ್ಮ ಕೈಲಿ ಎಷ್ಟು ವಾರಗಳು ಸಾಧ್ಯ ಅಷ್ಟು ವಾರಗಳು ಮಾಡಿದರೆ.
ಶನಿದೇವರ ಆಶೀರ್ವಾದದಿಂದ ಆಂಜನೇಯನ ಆಶೀರ್ವಾದದಿಂದ ಮತ್ತು ನವಗ್ರಹಗಳ ದೋಷ ಪರಿಹಾರದಿಂದಾಗಿ ನಿಮ್ಮ ಯಾವುದೇ ರೀತಿಯ ಸಮಸ್ಯೆಗಳು ಕೂಡ ಪರಿಹಾರವಾಗಿ ಒಳ್ಳೆಯ ಬದಲಾವಣೆಗಳು ಜೀವನದಲ್ಲಿ ನಡೆಯುತ್ತವೆ. ಬಹಳ ಸರಳವಾದ ಮತ್ತು ಅದ್ಭುತವಾದ ಪರಿಹಾರವಾಗಿದ್ದು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ತಪ್ಪದೆ ಈ ಮಾಹಿತಿ ಹಂಚಿಕೊಳ್ಳಿ.