ಸ್ವಂತ ಮನೆಯ ಕನಸು ಶೀಘ್ರವೇ ನೆರವೇರಬೇಕು ಎಂದರೆ ಭೂ ವರಹ ಸ್ವಾಮಿಯ ಈ ಪವರ್ ಫುಲ್ ಮಂತ್ರವನ್ನು ಪ್ರತಿದಿನ 21 ಬಾರಿ ಜಪಿಸಿ ಸಾಕು.!

 

WhatsApp Group Join Now
Telegram Group Join Now

ಮಹಾವಿಷ್ಣು ಹಿರಣ್ಯಾಕ್ಷನೆಂಬ ರಾಕ್ಷಸನಿಂದ ಭೂಮಿಯನ್ನು ಕಾಪಾಡಲು ವರಹಾ ಅವತಾರ ತಾಳಿದ ಬಗ್ಗೆ ಬಹುತೇಕ ನಮಗೆಲ್ಲರಿಗೂ ತಿಳಿದಿದೆ. ವರಹ ಸ್ವಾಮಿಯು ಭೂ ವರಹಸ್ವಾಮಿ ಮತ್ತು ಲಕ್ಷ್ಮಿ ಸಮೇತ ಭೂವರಹನಾಥ ಸ್ವಾಮಿ ಎಂದು ಕೂಡ ಕರೆಸಿಕೊಳ್ಳುತ್ತಾರೆ. ಹಲವು ಕಡೆಗಳಲ್ಲಿ ಭೂವರಹ ಸ್ವಾಮಿ ದೇವಸ್ಥಾನಗಳು ಇದ್ದು ನಮ್ಮ ಕರ್ನಾಟಕದಲ್ಲಿ ಮೈಸೂರಿನ ಬಳಿ ಇರುವ ಭೂವರಹ ಸ್ವಾಮಿ ದೇವಸ್ಥಾನವು ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದೆ.

ಈ ಸ್ಥಳದ ಮಹಾತ್ಮೆಯೇನೆಂದರೆ ಸ್ವಂತ ಜಮೀನು ಆಸ್ತಿ ಖರೀದಿಸುವ ಆಸೆ ಇರುವವರು ಅಥವಾ ಆಸ್ತಿ ಇದ್ದು ಮನೆ ಕಟ್ಟಿಸುವ ಕನಸು ಕಂಡವರು ಅಥವಾ ಆಸ್ತಿಗೆ ಸಂಬಂಧಿತವಾಗಿ ಯಾವುದೇ ವ್ಯಾಜ್ಯ ಇದ್ದರೂ ಅದು ಬೇಗ ಪರಿಹಾರ ಆಗಲಿ ಎಂದು ಕೋರಿಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದು ಹರಕೆ ಹೊರುತ್ತಾರೆ ಮತ್ತು ಅದಕ್ಕೆ ತಕ್ಕ ಫಲವನ್ನು ಕೂಡ ಅನೇಕರು ಪಡೆದಿದ್ದಾರೆ.

ಭೂವರಹ ಸ್ವಾಮಿ ಈ ರೀತಿ ಭೂಮಿಯ ಬಗೆಗಿನ ಸಮಸ್ಯೆಗಳನ್ನು ಪರಿಹರಿಸಿಕೊಡುವ ಭಗವಂತ ಎಂದೇ ಭಕ್ತಾದಿಗಳು ನಂಬಿದ್ದಾರೆ ಮತ್ತು ತನ್ನ ಭಕ್ತಾದಿಗಳಿಗೆ ತಕ್ಕ ಹಾಗೆ ಭೂವರಹ ಸ್ವಾಮಿ ಕೂಡ ತಮ್ಮನ್ನು ಭಕ್ತಿಯಿಂದ ನೆನೆಯುವವರಿಗೆ ಆಶೀರ್ವದಿಸಿ ಕಾಪಾಡುತ್ತಿದ್ದಾರೆ. ನೀವು ಕೂಡ ಈ ರೀತಿ ಆಸ್ತಿ ಖರೀದಿ ಮಾಡುವ ಅದರಲ್ಲೂ ಸ್ವಂತ ಮನೆ ಕಟ್ಟಿಸುವ ಮಹತ್ವಕಾಂಕ್ಷೆ ಹೊಂದಿದ್ದರೆ ಭೂವರಹ ಸ್ವಾಮಿಗೆ ಹರಕೆ ಕಟ್ಟಿಕೊಳ್ಳಿ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಹಣ 2000, ಅಕ್ಕಿ ಹಣ 1020, ಯುವ ನಿಧಿ 3,000 ಸರ್ಕಾರದಿಂದ ಬರಬೇಕಾದ ಎಲ್ಲಾ ಪೆಂಡಿಂಗ್ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮೆ ಆಗಲು ಹೀಗೆ ಮಾಡಿ.!

ಸಾಧ್ಯವಾದರೆ ಭೂ ವರಹ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಹರಕೆ ಕಟ್ಟಿಕೊಂಡು ಬನ್ನಿ ಮತ್ತು ಇದರೊಂದಿಗೆ ಈಗ ನಾವು ಹೇಳುವ ಈ ಸಣ್ಣ ಕೆಲಸ ಮಾಡಿದರೆ ಖಂಡಿತವಾಗಿ ಶೀಘ್ರವೇ ನಿಮ್ಮ ಆಸೆ ಈಡೇರುತ್ತದೆ ಪ್ರತಿನಿತ್ಯವೂ ಕೂಡ ನೀವು ನಿಮ್ಮ ಮನೆಗಳಲ್ಲಿ ದೇವರ ಪೂಜೆ ಮಾಡುವ ಸಮಯದಲ್ಲಿ ಈ ಸರಳ ಆಚರಣೆ ಮಾಡಿ.

ಅದೇನೆಂದರೆ, ದೇವರ ಕೋಣೆಯಲ್ಲಿ ಒಂದು ಪುಸ್ತಕ ಹಾಗೂ ಪೆನ್ನು ಇಡಿ. ಆ ಪುಸ್ತಕದಲ್ಲಿ ನಾವು ಹೇಳುವ ವರಹ ಸ್ವಾಮಿಯ ಈ ಶಕ್ತಿಶಾಲಿ ಮಂತ್ರವನ್ನು ಬರೆದು ಇಟ್ಟುಕೊಳ್ಳಿ ನಂತರ ಪ್ರತಿದಿನವೂ ಕೂಡ ಕನಿಷ್ಠ 21 ಬಾರಿ ಒಂದು ವೇಳೆ ನಿಮಗೆ ಹೆಚ್ಚು ಸಮಯ ಇದ್ದರೆ 108 ಬಾರಿ ಈ ಮಂತ್ರವನ್ನು ಭಕ್ತಿಯಿಂದ ಏಕಾಗ್ರತೆಯಿಂದ ಶ್ರದ್ಧೆಯಿಂದ ಪಠಣೆ ಮಾಡುತ್ತಾ ಬನ್ನಿ.

ಮಂತ್ರ ಶಾಸ್ತ್ರದಲ್ಲಿ ಭೂವರಹ ಸ್ವಾಮಿಯ ಮಹಾತ್ಮೆ ಹಾಗೂ ಶಕ್ತಿಯು ಈ ಮಂತ್ರದಲ್ಲಿ ಇದೆ ಮತ್ತು ಈ ಮಂತ್ರ ಪಟನೆಯಿಂದ ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳು ಬಗೆಹರಿದು ತೊಂದರೆಗಳು ನಿವಾರಣೆಯಾಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿ:- ಇವರ ಸಂಪಾದನೆ ಕೇಳಿ ಸರ್ಕಾರಿ ಉದ್ಯೋಗದವರೇ ಶಾಕ್ ಆದ್ರು. ಬಿಸಿನೆಸ್ ಶುರು ಮಾಡಿದ ಮೊದಲ ತಿಂಗಳೇ ರೂ..2,35,000 ದುಡಿಮೆ, ದಿನಕ್ಕೆ ರೂ.7,500 ಗ್ಯಾರೆಂಟಿ.!

ಹಾಗಾಗಿ ಪ್ರತಿದಿನವೂ ಕೂಡ ನೀವು ಈ ರೀತಿ ಮಂತ್ರ ಪಠಣೆ ಮಾಡಿ. ಒಂದು ವೇಳೆ ನಿಮಗೆ ಬರೆಯಲು ಇಚ್ಛೆ ಇದ್ದರೆ 108 ಬಾರಿ ಈ ಮಂತ್ರವನ್ನು ಬರೆಯಬಹುದು, ಇನ್ನು ಹೆಚ್ಚಿನ ಫಲ ಸಿಗುತ್ತದೆ. ಮಹಿಳೆಯರು ಪುರುಷರು ಯಾರು ಬೇಕಾದರೂ ಈ ಸರಳ ಆಚರಣೆ ಮಾಡಬಹುದು.

ಮನಸ್ಸಿನಲ್ಲಿ ಭಕ್ತಿಯಿಂದ ಒಮ್ಮೆ ಭೂ ವರಹ ಸ್ವಾಮಿ ಹಾಗೂ ತಾಯಿ ಲಕ್ಷ್ಮಿ ದೇವಿಯನ್ನು ನೆನೆದು ಅವರ ಕೃಪ ಕಟಾಕ್ಷಕ್ಕಾಗಿ ಕೋರಿಕೆ ಇಟ್ಟು ಈ ರೀತಿ ಪ್ರತಿನಿತ್ಯವೂ ನಡೆದುಕೊಂಡು ಬಂದರೆ ತಾಯಿ ಮಹಾಲಕ್ಷ್ಮಿ ಆಶೀರ್ವಾದದೊಂದಿಗೆ ಮಹಾ ವಿಷ್ಣುವಿನ ಆಶೀರ್ವಾದ ಕೂಡ ದೊರೆತು ನಿಮ್ಮ ಸ್ವಂತ ಮನೆಯ ಕನಸು ನೆರವೇರುತ್ತದೆ. ಈ ವಿಶೇಷವಾದ ಮಂತ್ರ ಹೀಗಿದೆ ನೋಡಿ.

ಮಂತ್ರ :- 
ಓಂ ನಮೋ ಭಗವತಯೇ ವರಾಹ ರೂಪಾಯೇ
ಭೂರ್ಭುವಂ ಸ್ವಃ ಭೂ ಪತಯೇ ಭೂ ಪತಿತ್ವಂ
ಮೇ ದೇಹಿ ದಾಪಯ ಸ್ವಾಹಃ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment

WhatsApp Group Join Now
Telegram Group Join Now