ಕಾಡು ಬಸಳೆ ಸೊಪ್ಪಿನಿಂದ ಕಿಡ್ನಿಯಲ್ಲಿನ ಕಲ್ಲು ಮಾಯಾ ಮತ್ತು ರಕ್ತ ಶುದ್ಧವಾಗುತ್ತದೆ ಆರೋಗ್ಯಕ್ಕೆ ಬೇಕು ಬಸಳೆ ಸೊಪ್ಪು ಪಟಪಟೆ ಎಲೆ ಅಥವಾ ಕಾಡು ಬಸಳೆಯನ್ನು ಸಾಮಾನ್ಯವಾಗಿ ಆಫೀಸ್ ಅಥವಾ ಮನೆಗಳಲ್ಲಿ ಅಲಂಕಾರಿಕ ಗಿಡವಾಗಿ ನೆಡುತ್ತಾರೆ. ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಡು ಬಸಳೆ ಸಸ್ಯವು 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ.
ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಹಿಸ್ಟಮಿನ್ ವಿರೋಧಿ ಮತ್ತು ಅನಾಫಿಲ್ಯಾಕ್ಟಿಕ್ ಗುಣಗಳನ್ನು ಹೊಂದಿದೆ. ಈ ಸಸ್ಯದ ಎಲೆಗಳು ಸ್ವಲ್ಪ ದಪ್ಪವಾಗಿದ್ದು ಹುಳಿ ಮತ್ತು ಒಗರು ರುಚಿಯಾಗಿ ಇರುತ್ತವೆ. ಕಾಡು ಬಸಳೆ ಸೊಪ್ಪು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಇದು ಶೀತ ದ್ರವ್ಯ ಎಂತಲೂ ಹೇಳಬಹುದು.
ಕಾಡು ಬಸಳೆ ಸೊಪ್ಪನ್ನು ಸೇವಿಅಉವುದರಿಂದ ಆಗುವ ಪ್ರಯೋಜನಗಳು ಈ ಬಸಳೆ ಸೊಪ್ಪಿನ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಅದರ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ರಿಂದ 4 ಚಮಚದಷ್ಟು ಸೇವಿಸಬೇಕು. ಹೀಗೆ ಸೇವಿಸಿದರೆ ಮೂತ್ರಪಿಂಡದಲ್ಲಿ ಎಂದಿಗೂ ಕಲ್ಲುಗಳು ಉತ್ಪತ್ತಿ ಆಗುವುದಿಲ್ಲ. ಒಂದು ವೇಳೆ ಹೀಗಾಗಲೆ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿ ಆಗಿದ್ದರೆ ಇಂಗಳ ಕಾಯಿ ತಿರುಳನ್ನು ತೆಗೆದುಕೊಂಡು ಕಡಲೆ ಗಾತ್ರದಲ್ಲಿ ಉಂಡೆಗಳನ್ನು ಮಾಡಿ ಈ ಬಸಳೆ ಸೊಪ್ಪಿನ ಜೊತೆಗೆ ದಿನದಲ್ಲಿ ಮೂರು ಹೊತ್ತು ನಾಲ್ಕು ಉಂಡೆಗಳನ್ನು ನಾಲ್ಕು ದಿನಗಳವರೆಗೆ ಸೇವಿಸಬೇಕು.
ಹೀಗೆ ಸೇವಿಸಿದರೆ ಆಪರೇಷನ್ಮಾಡಿಸದೆಯೆ ಕಿಡ್ನಿಯಲ್ಲಿನ ಕಲ್ಲು ಕರಗಿಸಿ ಕೊಳ್ಳಬಹುದು. ಈ ಬಸಳೆ ಸೊಪ್ಪಿನ ಪಲ್ಯ ಮಾಡಿ ಸೇವನೆ ಮಾಡುವುದರಿಂದ ರಕ್ತ ಶುದ್ಧೀಕರಣ ಆಗುತ್ತದೆ ಹಾಗೂ ಪಿತ್ತವು ನೈಸರ್ಗಿಕವಾಗಿ ಉಪಶಮನ ಆಗುತ್ತದೆ. ಬಸಳೆ ಸೊಪ್ಪನ್ನು ಎಳೆ ನೀರಿನೊಂದಿಗೆ ಸೇವಿಸಿದರೆ ಕಣ್ಣು ಉರಿ, ಪಾದ ಉರಿ, ಮೂತ್ರ ಉರಿ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಬಾಯಿ ಹುಣ್ಣು ಆಗಿದ್ದರೆ ಎಳೆನೀರಿನಲ್ಲಿ ಈ ಬಸಳೆ ಸೊಪ್ಪಿನ ರಸವನ್ನು ಒಂದೆರಡು ಹನಿ ಹಾಕಿ ಸ್ವಲ್ಪ ಸಕ್ಕರೆಯ ಜೊತೆಗೆ ಸೇವಿಸಬೇಕು.
ತಕ್ಷಣವೇ ಬಾಯಿ ಹುಣ್ಣು ಸಮಸ್ಯೆ ದೂರವಾಗುತ್ತದೆ. ಇಂಗಳ ಕಾಯಿ ಜೊತೆಗೆ ಬಸಳೆ ಸೊಪ್ಪು ಬೆರೆಸಿ ಸೇವನೆ ಮಾಡುವುದರಿಂದ ಕಾಮಾಲೆ ರೋಗ ಅಥವಾ ಜಾಂಡೀಸ್ ರೋಗ ದೂರವಾಗುತ್ತದೆ. ಅಲ್ಲದೆ ಈ ಬಸಳೆ ಸೊಪ್ಪನ್ನು ಚೆನ್ನಾಗಿ ಜಜ್ಜಿ ಇದರ ಲೇಪನವನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಆಗಿರುವ ಕಪ್ಪು ಕಲೆಗಳು ಮೊಡವೆಗಳು ಮಾಯವಾಗುತ್ತವೆ.
ಬಸಳೆ ಸೊಪ್ಪನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ದೇಹಕ್ಕೆಲ್ಲಾ ಹಚ್ಚಿ ಚೆನ್ನಾಗಿ ಉಜ್ಜಿ ಮಸಾಜ್ ಮಾಡಿಕೊಂಡು ಸ್ವಲ್ಪ ಸಮಯ ಸೂರ್ಯನ ಬಿಸಿಲಿಗೆ ಮೈ ಒಡ್ಡಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಿಂದ ಮೈ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ದೇಹದ ದುರ್ಗಂಧ ಅಥವಾ ಬೆವರಿನ ವಾಸನೆ ಕಡಿಮೆ ಆಗುತ್ತದೆ. ಕಾಡು ಬಸಳೆ ತಿನ್ನುವುದರಿಂದ ಗ್ಯಾಸ್ಟ್ರಿಕ್ ಅಲ್ಸರ್ ಕಡಿಮೆಯಾಗುತ್ತದೆ ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ಇದು ತಡೆಯುತ್ತದೆ.
ಶೀತ, ಕೆಮ್ಮು ಮತ್ತು ಅತಿಸಾರದಿಂದ ಬಳಲುತ್ತಿರುವವರಿಗೆ ಕಾಡು ಬಸಳೆ ಎಲೆ ಉತ್ತಮ ಔಷಧಿ. ಬಸಳೆ ಗಿಡದ ರಸವನ್ನು ಐದರಿಂದ ಹತ್ತು ಹನಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಿಸಬಹುದು. ಈ ಎಲೆಗಳನ್ನು ತಿನ್ನುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹೀಗೆ ಬಸಳೆ ಸೊಪ್ಪನ್ನು ಉಪಯೋಗಿಸುವುದರಿಂದ ಖಂಡಿತವಾಗಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು.