ಗೌರಿ ಸುಬ್ರಮಣ್ಯ ಶಾಸ್ತ್ರಿ ಬಹುತೇಕ ಎಲ್ಲಾ ಕನ್ನಡಿಗರಿಗೂ ಕೂಡ ಪರಿಚಯ ಇದ್ದಾರೆ. ಅದರಲ್ಲೂ ಪ್ರತಿದಿನವ ಟಿವಿ ನೋಡುವ ಮಹಿಳೆಯರಿಗೆ ಇವರು ಚಿರಪರಿಚಿತರು. ಗೌರಿ ಅಮ್ಮ ಎನ್ನುವ ಹೆಸರಿನಿಂದ ಖ್ಯಾತಿಯಾಗಿರುವ ಇವರನ್ನು ಜನರು ಆಧುನಿಕ ಅಶ್ವಿನಿ ದೇವತೆ ಎಂದು ಕೂಡ ಕರೆಯುತ್ತಾರೆ.
ಆಯುರ್ವೇದ ಪದ್ಧತಿಯಿಂದಲೇ ಎಲ್ಲಾ ಖಾಯಿಲೆಗೂ ಕೂಡ ಚಿಕಿತ್ಸೆ ಕೊಡುವ ಇವರ ಕೈಗುಣ ಪರಿಚಯ ಕರ್ನಾಟಕದ ಎಲ್ಲ ಜಿಲ್ಲೆ ಹಾಗೂ ಹೊರಗಿನ ಭಾಗದವರಿಗೆ ತಿಳಿದಿದೆ. ಹಾಗಾಗಿ ಪ್ರತಿದಿನವೂ ಕೂಡ ಇವರನ್ನು ಭೇಟಿ ಮಾಡಲು ಬರುವ ಜನರ ದೊಡ್ಡಪಟ್ಟಿಯೇ ಇದೆ.
ಮೊದಲನಿಂದಲೂ ಕೂಡ ಅಡುಗೆ ಮನೆಯೇ ಒಂದು ಔಷಧಾಲಯ ಎಂದು ಹೇಳಿಕೊಂಡು ಬಂದಿರುವ ಇವರು ಈವರೆಗೆ ಸಾವಿರಾರು ಖಾಯಿಲೆಗಳಿಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಿಂದಲೇ ಮನೆಮುದ್ದು ತಿಳಿಸಿಕೊಟ್ಟು ಗುಣವಾಗುವಂತೆ ಮಾಡಿದ್ದಾರೆ.
ತಮ್ಮ ಔಷಧಕ್ಕೆ ಬೇಕಾಗುವ ಎಲ್ಲಾ ಗಿಡಮೂಲಿಕೆಗಳನ್ನು ಕೂಡ ತಮ್ಮ ತೋಟದಲ್ಲೇ ಬೆಳೆಯುವ ಇವರು ಅದಕ್ಕೆ ಯಾವುದೇ ರಾಸಾಯನಿಕವನ್ನು ಬಳಸುವುದಿಲ್ಲ. ಹಸಿಯಾಗಿ ಇರುವುದಕ್ಕೆ ಶಕ್ತಿ ಹೆಚ್ಚು ಎಂದು ಹೇಳುವ ಇವರು, ಇವರು ಮಾಡಿಕೊಡುವ ಮೆಡಿಸನ್ ಅನ್ನು ಫ್ರಿಜ್ ನಲ್ಲಿಟ್ಟು ಸ್ಟೋರ್ ಮಾಡಲು ಕೊಡುವುದಿಲ್ಲ.
ಬದಲಾಗಿ ಸೇವಿಸಬೇಕಾದ ಔಷಧಿಗಳನ್ನು ಫ್ರೆಶ್ ಆಗಿ ರೆಡಿ ಮಾಡಿ ಕೊಟ್ಟು, ಅಥವಾ ಔಷಧಿಗಳನ್ನು ರೆಡಿ ಮಾಡಿಕೊಳ್ಳಲು ತಿಳಿಸಿಕೊಟ್ಟು ಕಟ್ಟುನಿಟ್ಟಾಗಿ ನಂಬಿಕೆಯಿಂದ ಪಥ್ಯ ಪಾಲಿಸುವಂತೆ ಹೇಳಿ ಅನೇಕ ರೀತಿಯ ಖಾಯಿಲೆಗಳನ್ನು ಗುಣಪಡಿಸಿದ್ದಾರೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಮೈಗ್ರೇನ್ ಸಂಬಂಧಿಸಿದ ಕಾಯಿಲೆಗಳು ಇನ್ನು ಮುಂತಾದ ಅನೇಕ ಗಂಭೀರ ಸಮಸ್ಯೆಗಳನ್ನು ಕೂಡ ತಮ್ಮ ಗಿಡಮೂಲಿಕೆಗಳಿಂದಲೇ ಗುಣಪಡಿಸಿರುವ ಖ್ಯಾತಿ ಹೊಂದಿರುವ ಇವರು ಇದಕ್ಕಾಗಿ ಅನೇಕ ಸರ್ಟಿಫಿಕೇಟ್ ಗಳನ್ನು ಕೂಡ ಪಡೆದಿದ್ದಾರೆ.
ಇಷ್ಟು ವರ್ಷಗಳ ಕಾಲ ಇವರು ಮಾಡಿರುವ ಅನುಭವದಲ್ಲಿ ಅನೇಕ ಕ್ಯಾನ್ಸರ್ ಪೇಶೆಂಟ್ ಗಳಲ್ಲಿ ಕೂಡ ಗುಣಪಡಿಸಿರುವ ಉದಾಹರಣೆ ಹೇಳುವ ಇವರು ನಾಲ್ಕೈದು ವರ್ಷಗಳ ಹಿಂದೆ ಥ್ರೋಟ್ ಕ್ಯಾನ್ಸರ್ ನಿಂದ ಬಳಲುತ್ತಿದ ಹುಡುಗನೊಬ್ಬ ಕೀಮೋಥೆರಪಿ ಮಾಡಿಸಿಕೊಳ್ಳಲು ಒಪ್ಪದೇ ಆಯುರ್ವೇದ ಚಿಕಿತ್ಸೆಯಲ್ಲೇ ವಾಸಿ ಮಾಡಿಕೊಳ್ಳುತ್ತೇನೆ ಎಂದು ಅದರಲ್ಲೂ ಇವರಿಂದಲೇ ಚಿಕಿತ್ಸೆ ತೆಗೆದುಕೊಳ್ಳುತ್ತೇನೆ ಎಂದು ನಂಬಿಕೆ ಇಟ್ಟು ಪೋಷಕರ ಜೊತೆ ಬಂದಿದ್ದರಂತೆ.
ವೈದ್ಯರು 15 ದಿನಗಳು ಅಷ್ಟೇ ಮಾತನಾಡಲು ಆಗುತ್ತದೆ ನಂತರ ಆಗುವುದಿಲ್ಲ ಎಂದು ಹೇಳಿದರಂತೆ ಆದರೂ ಕೂಡ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಇವುಗಳು ಬೇಡ ಎಂದು ಆಯುರ್ವೇದ ಪದ್ಧತಿಯಲ್ಲಿಯೇ ಚಿಕಿತ್ಸೆ ತೆಗೆದುಕೊಂಡು ಮೂರೇ ತಿಂಗಳಲ್ಲಿ ಗುಣವಾದ ಉದಾಹರಣೆ ಇದೇ ಎಂದು ಘಂಟಾಘೋಷವಾಗಿ ಅವರು ಧೈರ್ಯದಿಂದ ಹೇಳಿಕೊಳ್ಳುತ್ತಾರೆ.
ಮತ್ತು ಕ್ಯಾನ್ಸರ್ ಅನ್ನು ಕೂಡ ಆರಂಭಿಕ ಹಂತಗಳಲ್ಲಿಯೇ ಕಂಡು ಹಿಡಿದರೆ ಆಯುರ್ವೇದ ಪದ್ಧತಿಯಲ್ಲೇ ಗುಣಪಡಿಸಬಹುದು ಎಂದು ಹೇಳುತ್ತಾರೆ. ಪ್ರಕೃತಿಯೇ ಒಂದು ಚಿಕಿತ್ಸೆ, ಆಯುರ್ವೇದದಲ್ಲಿ ಎಲ್ಲವೂ ಇದೇ ಪಾಶ್ಚಿಮಾತ್ಯರು ಇದನ್ನು ಇಲ್ಲಿಂದ ಕಲಿತುಕೊಂಡು ಹೋಗಿ ಮೆಡಿಸನ್ ಮಾಡಿ ಅಲ್ಲಿಂದ ಕಳುಹಿಸುತ್ತಾರೆ. ಅದರ ಬದಲು ಫ್ರೆಶ್ ಆಗಿಯೇ ಅವುಗಳನ್ನು ಸೇವಿಸುವುದರಿಂದ ಅವುಗಳ ಗುಣ ದುಪ್ಪಟ್ಟು ಆಗುತ್ತದೆ.
ಹಾಗಾಗಿ ನಮ್ಮಲ್ಲಿಯೇ ಇರುವ ನಮ್ಮ ಹಿತ್ತಲಲ್ಲಿಯೇ ಬೆಳೆಯುವ ಔಷಧಿ ಗುಣಗಳಿರುವ ಪದಾರ್ಥಗಳನ್ನು ಗುರುತಿಸಿ ಅವುಗಳ ಬಗ್ಗೆ ತಿಳಿದುಕೊಂಡ ಅವುಗಳನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಖಂಡಿತವಾಗಿಯೂ ಕಾಯಿಲೆ ವಾಸಿಯಾಗುತ್ತದೆ ಎನ್ನುತ್ತಾರೆ ಇವರು. ಅಭಿಮಾನಿಗಳು ಇವರ ಕೈಗುಣದಿಂದ ಅನೇಕರು ತಮ್ಮ ಕಾಯಿಲೆಗಳನ್ನು ಗುಣಪಡಿಸಿಕೊಂಡಿದ್ದಾರೆ ಎನ್ನುತ್ತಾರೆ.
ವಾರಕ್ಕೆ ಎರಡು ದಿನ ಮಾತ್ರ ಬೆಂಗಳೂರಿನ ರಾಮೋಹಳ್ಳಿಯಲ್ಲಿರುವ ಮುಕ್ತಿನಾಗ ದೇವಾಲಯದಲ್ಲಿ ತಮ್ಮನ್ನು ಅರಸಿ ಬರುವ ರೋಗಿಗಳನ್ನು ಆರೈಕೆ ಮಾಡುತ್ತಾರೆ. ಅವರನ್ನು ಭೇಟಿಯಾಗಲು ಬಯಸುವವರು ಈ ಕೆಳಗಿನ ಸಂಖ್ಯೆಗೆ ಪ್ರಯತ್ನಿಸಬಹುದು 9535383921 / 9902399932.