ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಬಹಳ ಆಡಂಬರದಿಂದ ಕೂಡಿದೆ. ಆದರೆ ಬಡ ಮತ್ತು ಸಾಮಾನ್ಯ ವರ್ಗದವರಿಗೆ ಈ ರೀತಿ ಮದುವೆ ಆಗಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಅವರು ಕರ್ನಾಟಕ ಸರ್ಕಾರದ ಕರ್ನಾಟಕ ಸಪ್ತಪದಿ ವಿವಾಹ ಯೋಜನೆ ಅಡಿ ನೋಂದಾಯಿಸಲಾದ ದೇವಾಲಯದಲ್ಲಿ ಕಾನೂನಿನ ಪ್ರಕಾರ ಮದುವೆಯಾಗಲು ಇಚ್ಚಿಸಿದರೆ ಅಂತವರಿಗೆ ರಾಜ್ಯ ಸರ್ಕಾರವು ಸಹಾಯಧನ ಮತ್ತು ಉಡುಗೊರೆ ನೀಡುವ ಮೂಲಕ ನೆರವಾಗಲಿದೆ.
ಮದುವೆಯ ಹೊರೆಯಿಂದ ಕುಟುಂಬಗಳನ್ನು ರಕ್ಷಿಸಲು ಮತ್ತು ಅದ್ದೂರಿ ಮದುವೆಗಳ ಮೊರೆ ಹೋಗಿ ಆರ್ಥಿಕ ಸಂಕಷ್ಟಗಳಿಗೆ ಸಿಲುಕುವ ಬದಲು ಸರಳ ವಿವಾಹಗಳನ್ನು ಪ್ರೋತ್ಸಾಹಿಸಲು ಸರ್ಕಾರ ಇಂತಹದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವತಿಯಿಂದ ಈ ಸಾಮೂಹಿಕ ವಿವಾಹ ನಡೆಯಲಿದ್ದು ಅದಕ್ಕಾಗಿ ನಿಯಮಗಳು ಕೂಡ ಇದೆ. ಸರ್ಕಾರ ಸೂಚಿಸಿದ ದೇವಾಲಯಗಳಲ್ಲಿ ಮಾತ್ರ ಈ ರೀತಿ ಮದುವೆಯಾಗಲು ಅವಕಾಶವಿದ್ದು, ಯೋಜನೆ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಯೋಜನೆಗೆ ಅರ್ಜಿ ಸಲ್ಲಿಸುವ ಜೋಡಿಗಳಿಗೆ ವಿಧಿಸಲಾಗಿರುವ ಮಾನದಂಡಗಳು:-
● ವಿವಾಹವಾಗುವ ವಧು ಮತ್ತು ವರ ಇಬ್ಬರು ಕೂಡ ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು.
● ಮದುವೆಗೆ ವಧು ಮತ್ತು ವರ ಇಬ್ಬರ ಕುಟುಂಬದವರು ಕೂಡ ಹಾಜರಿರಬೇಕು, ಪ್ರೇಮ ವಿವಾಹಗಳಿಗೆ ಅನುಮತಿ ಇರುವುದಿಲ್
● ವಧುವಿಗೆ 18 ವರ್ಷ ತುಂಬಿರುವುದು ಕಡ್ಡಾಯ ಹಾಗೂ ವರನಿಗೂ 21 ವರ್ಷ ತುಂಬಿರುವುದು ಕಡ್ಡಾಯ.
● ಹಿಂದೂ ಧರ್ಮದ ಮದುವೆಗಳಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಾಗಲು ಅವಕಾಶ.
ಕರ್ನಾಟಕದ ಸಪ್ತಪದಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳುವ ಬಗೆ:-
● ಈ ಯೋಚನೆಯ ಮೂಲಕ ವಿವಾಹವಾಗಿ ಸಿಗುವ ಸಹಾಯಧನದ ಫಲಾನುಭವಿಗಳಾಗಲು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
● ಮುಜರಾಯಿ ಇಲಾಖೆಯ ಯಾವ ದೇವಾಲಯಗಳಲ್ಲಿ ವಿವಾಹವಾದರೆ, ಈ ಸಹಾಯಧನದ ಪ್ರಯೋಜನ ಸಿಗುತ್ತದೆ ಅಂತಹ ದೇವಾಲಯಗಳ ಪಟ್ಟಿಗಳನ್ನು ಪರಿಶೀಲಿಸಿ ನಿಮ್ಮ ಹತ್ತಿರದ ದೇವಾಲಯ ಯಾವುದು ಎಂದು ನೋಡಿ ದೇವಸ್ಥಾನಕ್ಕೆ ಭೇಟಿ ಕೊಡಬೇಕು.
● ದೇವಾಲಯದ ಪ್ರಾಧಿಕಾರದಲ್ಲಿ ವಿಚಾರಿಸಿದರೆ ಈ ಯೋಜನೆಯಲ್ಲಿ ವಿವಾಹವಾಗಲು ನೋಂದಣಿ ಮಾಡಲು ನೀಡಲಾಗುವ ಅಕಜ್ಜಿ ನಮೂನೆಯನ್ನು ಕೊಡುತ್ತಾರೆ, ಅವುಗಳಲ್ಲಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ನಿವಾಸ ದೃಢೀಕರಣ ಮತ್ತು ವಯಸ್ಸಿನ ದೃಢಿಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಇತ್ತೀಚಿನ ಭಾವಚಿತ್ರದ ಜೊತೆ ಸಹಿ ಮಾಡಿ ಫಿಲ್ ಮಾಡಬೇಕು.
● ನಂತರ ದೇವಾಲಯದ ಕಛೇರಿಯಲ್ಲಿ ಈ ಅರ್ಜಿಗಳನ್ನು ಸಲ್ಲಿಸಿದರೆ ಪ್ರಕ್ರಿಯೆಗೆ ಅನುಮತಿ ಸಿಗುವ ಜೋಡಿಗಳ ಹೆಸರನ್ನು ಆ ದೇವಾಲಯಗಳ ನಡೆಯುವ ಸಾಮೂಹಿಕ ವಿವಾಹಗಳ ದಿನಾಂಕಕ್ಕಿಂತ ಮೊದಲೇ ಅನೌನ್ಸ್ ಮಾಡಲಾಗುತ್ತದೆ.
● ಸಾಮೂಹಿಕ ವಿವಾಹ ನಡೆಸಲು ನಿಗದಿಯಾದ ದಿನದಂದು ಜೋಡಿಗಳು ಕುಟುಂಬ ಸಮೇತರಾಗಿ ಬಂದು ಮದುವೆ ಆಗಬಹುದು.
ಇದರ ಪ್ರಯೋಜನಗಳು:-
● ಸಾಮೂಹಿಕ ಮದುವೆಯಲ್ಲಿ ಕಾನೂನು ಬದ್ಧವಾಗಿ ಸರಳ ಮದುವೆ ಆಗುವ ಅವಕಾಶ.
● ಉಡುಗೊರೆಯಾಗಿ ವಧುವಿಗೆ 8ಗ್ರಾಂ ಚಿನ್ನದ ಮಂಗಳಸೂತ್ರ, ಮತ್ತು ವಧುವಿಗೆ 10,000 ಸಹಾಯಧನ, ವರನಿಗೆ 5,000 ಸಹಾಯಧನ.
ಮುಜರಾಯಿ ಇಲಾಖೆಗೆ ಸೇರಿರುವ ಬೆಂಗಳೂರಿನ ಬನಶಂಕರಿ, ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ ದೇವಾಲಯಗಳಲ್ಲಿ ಕರ್ನಾಟಕ ಸಪ್ತಪದಿ ಯೋಜನೆಯ ಮೂಲಕ ಸಾಮೂಹಿಕ ವಿವಾಹ ಆಗಬಹುದು. ಈ ಯೋಜನೆ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮುಜರಾಯಿ ಇಲಾಖೆಯ ಕಛೇರಿಗಳನ್ನು ಸಂಪರ್ಕಿಸಿ ಅಥವಾ ಸಾಮೂಹಿಕ ವಿವಾಹಕ್ಕೆ ಅವಕಾಶ ಇರುವ ಮೇಲೆ ತಿಳಿಸಿದ ದೇವಾಲಯಗಳ ಪ್ರಾಧಿಕಾರ ಕಚೇರಿಯಲ್ಲಿ ವಿಚಾರಿಸಿ.