ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಹಿರಿಯ ಪುತ್ರನಾಗಿ ಶಿವ ರಾಜ್ಕುಮಾರ್ ಅವರು 1962ರಲ್ಲಿ ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಜನಿಸುತ್ತಾರೆ. ಡಾಕ್ಟರ್ ರಾಜ್ಕುಮಾರ್ ಮತ್ತು ಪಾರ್ವತಮ್ಮ ಅವರು ಮದುವೆಯಾದ ಒಂಬತ್ತು ವರ್ಷದ ನಂತರ ಶಿವರಾಜ್ ಕುಮಾರ್ ಅವರು ಜನನವಾಗುತ್ತಾರೆ. ಆದ್ದರಿಂದ ಶಿವ ರಾಜ್ಕುಮಾರ್ ಅವರನ್ನು ಕಂಡರೆ ಡಾಕ್ಟರ್ ರಾಜ್ಕುಮಾರ್ ಅವರಿಗೆ ತುಂಬಾನೇ ಇಷ್ಟ. ಬಾಲ ನಟನಾಗಿ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಡಾಕ್ಟರ್ ರಾಜ್ಕುಮಾರ್ ಅವರ ಜೊತೆಯಲ್ಲಿ ತೆರೆಯನ್ನು ಹಂಚಿಕೊಳ್ಳುತ್ತಾರೆ.
ಶಿವರಾಜ್ ಕುಮಾರ್ ಅವರಿಗೆ ಬಾಲ್ಯದಿಂದಲೂ ಸಹ ನಟ ಕಮಲ್ ಹಾಸನ್ ಎಂದರೆ ಪಂಚಪ್ರಾಣ ಇವರ ಸಿನಿಮಾಗಳನ್ನು ತಪ್ಪದೆ ನೋಡುತ್ತಿದ್ದರು. ಶಿವರಾಜ್ ಕುಮಾರ್ ಅವರು ಓದುತ್ತಿರುವಂತಹ ಸಂದರ್ಭದಲ್ಲಿ ಇವರಿಗೆ ಮಲಯಾಳಂ ಸಿನಿಮಾದ ಅವಕಾಶ ಒದಗಿ ಬರುತ್ತದೆ ಆಗ ಡಾಕ್ಟರ್ ರಾಜ್ಕುಮಾರ್ ಅವರು ಆಕ್ಟಿಂಗ್ ತರಬೇತಿಯನ್ನು ಪಡೆದುಕೊಂಡು ಸಿನಿಮಾ ಮಾಡು ಎಂದು ಶಿವರಾಜ್ ಕುಮಾರ್ ಗೆ ಬೆನ್ನು ತಟ್ಟುತ್ತಾರೆ ನಂತರ ಒಂದು ವರ್ಷ ಆಕ್ಟಿಂಗ್ ತರಬೇತಿಯನ್ನು ಪಡೆದುಕೊಂಡಂತಹ ಶಿವರಾಜ್ ಕುಮಾರ್ ಅವರು ಆನಂದ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪಾದಾರ್ಪಣೆಯನ್ನು ಮಾಡುತ್ತಾರೆ.
ಆನಂದ್ ಸಿನಿಮಾ ಊಹಿಸದಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಲ್ಲರೂ ಸಹ ಈ ಒಂದು ಸಿನಿಮಾದಲ್ಲಿ ಶಿವ ರಾಜ್ಕುಮಾರ್ ಅವರನ್ನು ಒಪ್ಪಿಕೊಂಡು ಅಭಿಮಾನಿಗಳ ದಂಡೆ ಹುಟ್ಟಿಕೊಳ್ಳುತ್ತದೆ. ನಂತರ ‘ರಥಸಪ್ತಮಿ’, ‘ಮನ ಮುಚ್ಚಿದ ಹುಡುಗಿ’ ಸಿನಿಮಾಗಳು ನೂರು ದಿನಗಳ ಯಶಸ್ಸನ್ನು ಪಡೆದುಕೊಳ್ಳುತ್ತದೆ ಆದ್ದರಿಂದ ಶಿವರಾಜ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎನ್ನುವಂತಹ ಬಿರುದು ಹುಟ್ಟುಕೊಳ್ಳುತ್ತದೆ. ಹೀಗೆ ಇವರ ಸಿನಿ ಜರ್ನಿ ಮುಂದುವರಿದುಕೊಂಡು ಹೋಗುತ್ತಾ ಇರುತ್ತದೆ ಇನ್ನು ಶಿವರಾಜ್ ಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಗಳ ಆಗಿದ್ದ ಎಸ್ ಬಂಗಾರಪ್ಪ ಅವರ ಮಗಳು ಗೀತಾ ಅವರನ್ನ 1986 ಮದುವೆ ಆಗುತ್ತಾರೆ ಈ ದಂಪತಿಗಳಿಗೆ ನಿವೇದಿತ ಮತ್ತು ನಿರೂಪಮಾ ಎಂಬ ಎರಡು ಹೆಣ್ಣು ಮಕ್ಕಳು ಸಹ ಇದ್ದಾರೆ.
ಶಿವರಾಜ್ ಕುಮಾರ್ ಅವರು ಎಲ್ಲೇ ಹೋದರು ಸಹ ಅವರ ಜೊತೆಯಲ್ಲಿ ಪತ್ನಿ ಗೀತಾ ಅವರು ಇದ್ದೇ ಇರುತ್ತಾರೆ. ಶಿವರಾಜ್ ಕುಮಾರ್ ಅವರನ್ನು ಗೀತಾ ಅವರು ತುಂಬಾ ಇಷ್ಟಪಡುತ್ತಾರೆ ಹಾಗೆ ಶಿವರಾಜ್ ಕುಮಾರ್ ಅವರು ಸಹ ತಮ್ಮ ಪತ್ನಿಯನ್ನು ತುಂಬಾ ಪ್ರೀತಿ ಮಾಡುತ್ತಾರೆ. ಇದೀಗ ಗೀತಾ ಅವರ ಮೇಲಿರುವ ಪ್ರೀತಿಯನ್ನು ಹೇಳಿಕೊಳ್ಳಲು ಸದಾ ಅವಕಾಶ ಸಿಕ್ಕಿತು ಹೌದು ಶಿವರಾಜ್ ಕುಮಾರ್ ಅವರು ಇದೀಗ ಜೀ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ತಮ್ಮ ಪತ್ನಿಯ ಮೇಲೆ ಇರುವಂತಹ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಜೀ ಕುಟುಂಬ ಅವಾರ್ಡ್ಸ್ ವೇದಿಕೆಯ ಮೇಲೆ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರನ್ನು ಕೂರಿಸಿ ರವಿಚಂದ್ರನ್ ಅವರು ಕೆಲವೊಂದು ಪ್ರಶ್ನೆಗಳನ್ನು ಶಿವರಾಜ್ ಕುಮಾರ್ ಅವರಿಗೆ ಕೇಳಲು ಮುಂದಾಗುತ್ತಾರೆ ಅದಕ್ಕೆ ಶಿವರಾಜ್ ಕುಮಾರ್ ಅವರು ಉತ್ತರಿಸಲು ತೊಡಗುತ್ತಾರೆ.
ಹೀಗಿರುವಂತಹ ಸಂದರ್ಭದಲ್ಲಿ ಗೀತಾ ಅವರ ಬಗ್ಗೆ ಒಂದು ಪ್ರಶ್ನೆಯನ್ನು ರವಿಚಂದ್ರನ್ ಕೇಳಿದಾಗ ಗೀತಾ ಅವರು ನನ್ನನ್ನು ತುಂಬಾ ಇಷ್ಟಪಡುತ್ತಾರೆ. ನನಗೆ ಬ್ರೈನ್ ಸಮಸ್ಯೆ ಉಂಟಾಗಿ ಆಪರೇಷನ್ ಆಗುವಮತಹ ಸಂಧರ್ಭದಲ್ಲಿ ನನ್ನ ಆರೋಗ್ಯ ಸುಧಾರಿಸಿದರೆ ತಮ್ಮ ತಲೆ ಕೂದಲನ್ನು ಕೊಡುವುದಾಗಿ ದೇವರಲ್ಲಿ ಹರಕೆ ಮಾಡಿಕೊಂಡಿದ್ದರು ಅದರಂತೆ ಅವರ ತಲೆ ಕೂದಲನ್ನು ಕೊಟ್ಟರು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಇದನ್ನು ನೋಡಿದರೆ ಗೀತಾ ಅವರು ಶಿವರಾಜ್ ಕುಮಾರ್ ಅವರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂದು ನಮಗೆ ತಿಳಿಯುತ್ತದೆ. ಸಾಮಾನ್ಯ ಹೆಣ್ಣು ಮಕ್ಕಳು ಹೆಚ್ಚು ಕೂದಲಿನ ಕಾಳಜಿಯನ್ನು ವಹಿಸುತ್ತಾರೆ ಹೆಣ್ಣಿಗೆ ಕೂದಲೆ ಅಂದ ಎನ್ನುವಂತಹ ಮಾತು ಇದೆ ಆದರೂ ಸಹ ಗೀತಾ ಅವರು ಇದಕ್ಕೆ ತಲೆ ಕೆಡಿಸಿಕೊಳ್ಳದೆ ನಮ್ಮ ಪ್ರೀತಿಯ ಗಂಡನಿಗಾಗಿ ತಮ್ಮ ಕೂದಲನ್ನು ಕೊಡಲು ಮುಂದಾಗುತ್ತಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.