ಭಾರತ ಸಂವಿಧಾನದ Act 1995 ರ ಪ್ರಕಾರ ಎರಡನೇ ಮದುವೆ ಆಗುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧ. ವಿವಾಹ ಕಾಯ್ದೆ ಸೆಕ್ಷನ್ 17 ಕೂಡ ದ್ವಿಪತ್ನಿತ್ವವನ್ನು ನಿಷೇಧಿಸುತ್ತದೆ. ಆದರೂ ಕೂಡ ನಮ್ಮ ದೇಶದಲ್ಲಿ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆ ಆಗುತ್ತಿರುವಂತಹ ಪ್ರಕರಣಗಳು ಬಹಳಷ್ಟು ಇವೆ.
ಮೊದಲನೇ ಪತ್ನಿ ಜೀವಂತವಾಗಿದ್ದಾಗ ಇಬ್ಬರಿಗೂ ವಿ’ಚ್ಛೇ’ದ’ನ’ವಾಗದೆ ಅದಕ್ಕೂ ಮೊದಲೇ ಎರಡನೇ ಮದುವೆಯನ್ನು ಆದರೆ ಆ ಮದುವೆಗಳು ಅಸಿಂಧು ಆಗುತ್ತದೆ. ಕಾನೂನಿನ ಪ್ರಕಾರ ಆ ಮದುವೆಗೆ ಯಾವುದೇ ಮಾನ್ಯತೆ ಇರುವುದಿಲ್ಲ. ಆದರೆ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಮಹಿಳೆ ಒಬ್ಬರಿಂದ ಅಪೀಲ್ ಹೋಗಿದೆ. ಎರಡನೇ ಮದುವೆ ಆಗಿರುವ ಆಕೆ ಗಂಡನ ಪಿಂಚಣಿ ಹಣ ನೀಡುವಂತೆ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ, ಈ ಪ್ರಕರಣದಲ್ಲಿ ಕೋರ್ಟ್ ಕೊಟ್ಟ ಮಹತ್ವದ ತೀರ್ಪು ಏನು ಗೊತ್ತಾ?…
ಪ್ರಕರಣದ ವಿವರ ಹೀಗಿದೆ. ಒಬ್ಬ ವ್ಯಕ್ತಿಯು ಸರ್ಕಾರಿ ಉದ್ಯೋಗಿ ಆಗಿದ್ದಾನೆ ಆತ ವಿವಾಹವಾಗಿ ಮಕ್ಕಳ ಕೂಡ ಇದ್ದಾರೆ ಆದರೆ ಆ ವ್ಯಕ್ತಿಯು ಮೊದಲ ಪತ್ನಿಯ ಅನುಮತಿಯನ್ನು ಪಡೆಯದೆ, ಮೊದಲನೇ ಪತ್ನಿಯಿಂದ ವಿ’ಚ್ಛೇ’ದ’ನವನ್ನು ಪಡೆದುಕೊಳ್ಳದೆ ಇದ್ದಕ್ಕಿದ್ದಂತೆ ಎರಡನೇ ಮದುವೆಯಾಗಿ ವಾಸಿಸಲು ಶುರು ಮಾಡಿದ್ದಾನೆ. ಕಾಲ ನಂತರ ಆತನ ಮರಣವೂ ಆಗಿದೆ.
ಕುಟುಂಬ ಪಿಂಚಣಿಯು ಕಾನೂನಿನ ಪ್ರಕಾರವಾಗಿ ಮೊದಲ ಹೆಂಡತಿಗೆ ಹೋಗುತ್ತಿತ್ತು ಹಲವು ದಿನಗಳ ವರೆಗೆ ಇದನ್ನು ಗಮನಿಸಿದ ಎರಡನೇ ಪತ್ನಿಯು ತನಗೂ ಕೂಡ ಗಂಡನ ಪಿಂಚಣಿ ಹಣ ಬರಬೇಕು ತಾನು ಕೂಡ ಆತನ ಪತ್ನಿಯೇ ಎಂದು ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದರು. ಈ ಪ್ರಕರಣದಲ್ಲಿ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿ ಎಲ್ಲರ ಗಮನ ಸೆಳೆದಿದೆ.
ಇದರ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಲೇ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ದ್ವಿ ಸದಸ್ಯ ಪೀಠವು ಪ್ರಕರಣವನ್ನು ಅವಲೋಕಿಸಿ ಈ ರೀತಿ ತೀರ್ಪನ್ನು ನೀಡಿದ್ದಾರೆ. ಮೊದಲನೇ ಪತ್ನಿ ಬದುಕಿರುವಾಗಲೇ ಎರಡನೇ ಮದುವೆ ಆಗುವುದು ದೊಡ್ಡ ಅಪರಾಧ.
ಹಾಗೆಯೇ ಅವರ ಪಿಂಚಣಿಯು ಸಹ ಎರಡನೇ ಪತ್ನಿಗೆ ಯಾವುದೇ ಕಾರಣಕ್ಕೂ ಸಲ್ಲುವುದಿಲ್ಲ. ಮೊದಲನೇ ಪತ್ನಿ ಇದ್ದಾಗ ಎರಡನೇ ಮದುವೆ ಆದರೆ ಅದು ಮದುವೆನೇ ಅಲ್ಲ ಕಾನೂನಿನ ಪ್ರಕಾರ ಅದೊಂದು ದೊಡ್ಡ ಮಹಾಪರಾಧವೇ ಸರಿ.ಆದ್ದರಿಂದ ಯಾವುದೇ ಕಾರಣಕ್ಕೂ ಸಹ ಎರಡನೇ ಹೆಂಡತಿಗೆ ಪಿಂಚಣಿಯನ್ನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಖಡಾ ಕಂಡಿತವಾಗಿ ಹೇಳಿದೆ.
ವಿವಾಹ ಕಾಯ್ದೆ ಸೆಕ್ಷನ್ 17 ಪ್ರಕಾರ ದ್ವಿಪತ್ನಿತ್ವ ಎನ್ನುವುದು ಅ’ಪ’ರಾ’ಧ. ನಮ್ಮ ಹಿಂದೂ ಧರ್ಮದಲ್ಲಿ ಒಬ್ಬರಿಗೆ ಒಂದೇ ಪತ್ನಿ ಇರಬೇಕು ನಾವು ಸಂಪ್ರದಾಯಸ್ಥರು ಏಕಪತ್ನಿತ್ವವನ್ನು ಪಾಲಿಸುತ್ತಿವೆ. ಆದರೆ ಇತ್ತೀಚಿಗೆ ಹೆಂಡತಿ ಇರುವಾಗಲೇ ಮತ್ತೊಂದು ಮದುವೆ ಆಗಿ ಎರಡನೇ ಹೆಂಡತಿಯನ್ನು ಕರೆದುಕೊಂಡು ಬರುವ ಪ್ರಕರಣಗಳು ಹೆಚ್ಚಾಗುತ್ತಿದೆ.
ಇದರಿಂದ ಮೊದಲನೇ ಹೆಂಡತಿಗೆ ಅ’ನ್ಯಾ’ಯ’ವಾಗುತ್ತಿದೆ ಇದನ್ನು ತಪ್ಪಿಸಲು ಹೈಕೋರ್ಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮೊದಲನೇ ಹೆಂಡತಿಗೆ ಯಾವುದೇ ಕಾರಣಕ್ಕೂ ಕೂಡ ಮೋ’ಸವಾಗಬಾರದು ಎಂಬುದು ಹೈಕೋರ್ಟು ವಾದ ಎಂದು ಘೋಷಿಸಿ ಅರ್ಜಿದಾರರಿಗೆ ಯಾವುದೇ ರೀತಿಯ ಕಾನೂನು ಬೆಂಬಲ ಸಿಗುವುದಿಲ್ಲ, ಈ ಮದುವೆಗೆ ಸಿಂಧುತ್ವವಿಲ್ಲ ಎಂಬ ಮಾತನ್ನು ಹೈಕೋರ್ಟ್ ಹೇಳಿ ತೀರ್ಪು ಕೊಟ್ಟಿದೆ.