ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಗೆ ಬಂದು ಆರು ತಿಂಗಳು ಕಳೆದರೂ ಮಹಿಳೆಯರಿಗೆ ಇಲ್ಲಿವರೆಗೂ ಕೂಡ ಯೋಜನೆ ಸಾಕಷ್ಟು ಗೊಂದಲಗಳಿವೆ. ಅಂಕಿ ಅಂಶಗಳ ಪ್ರಕಾರ ರಾಜ್ಯದ 1.20ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಆದರೂ ಕೆಲ ಮಹಿಳೆಯರಿಗೆ ಒಂದು ಕಂತಿನ ಹಣ ಕೊಡ ಬಂದಿಲ್ಲ.
ಇನ್ನು ಕೆಲವರಿಗೆ ಒಂದೆರಡು ಕಂತುಗಳ ಹಣ ಬಂದು ನಿಂತು ಹೋಗಿದೆ ಮತ್ತು 7ನೇ ಕಂತಿನ ಹಣ ಯಾವಾಗ ಸಿಗುತ್ತದೆ ಈಗ ಅರ್ಜಿ ಸಲ್ಲಿಸಿದವರಿಗೆ ಅಥವಾ ತಿದ್ದುಪಡಿ ಮಾಡಿಸಿಕೊಂಡವರಿಗೆ ಎಲ್ಲಾ ಕಂತುಗಳ ಹಣವು ಸಿಗಲಿದೆಯೇ? ಇನ್ನು ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದೇ ಇದ್ದರೆ ಈಗ ಸಲ್ಲಿಸಲು ಅವಕಾಶ ಇದೆಯೇ? ಇಂತಹ ಸಾಕಷ್ಟು ಗೊಂದಲಗಳಿಗೆ ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು (Lakshmi Hebbalkar) ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ್ದಾರೆ ಇದರ ವಿವರವನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಇನ್ವೆಸ್ಟ್ಮೆಂಟ್ ಇಲ್ಲ, ಡೆಪಾಸಿಟ್ ಇಲ್ಲ ತಿಂಗಳಿಗೆ 2.9 ಲಕ್ಷ ಗಳಿಕೆ, ಟ್ರೈನಿಂಗ್ ನಿಂದ ಹಿಡಿದು ಎಲ್ಲಾ ಸಪೋರ್ಟ್ ಕಂಪನಿಯೇ ಮಾಡುತ್ತದೆ. ಆಸಕ್ತರು ಇಂದೇ ಸಂಪರ್ಕಿಸಿ.!
ಯೋಜನೆ ಹೆಸರ:- ಗೃಹಲಕ್ಷ್ಮಿ ಯೋಜನೆ
ಯೋಜನೆಯ ಉದ್ದೇಶ:-
ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ (HOF) ಸ್ಥಾನದಲ್ಲಿರುವ ಮಹಿಳೆಗೆ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ಸಹಾಯವನ್ನು ನೀಡುವ ಯೋಜನೆಯಾಗಿದೆ.
ಹಣ ಪಡೆಯಲು ಆಗದೇ ಇರುವುದಕ್ಕೆ ಕಾರಣಗಳು:-
* ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಇಲ್ಲದೆ ಇರುವುದು (Account Inactive) ಮತ್ತು ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar Seeding NPCI Mapping) ಆಗದೆ ಇರುವುದು
* ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಪಾಸ್ ಬುಕ್ ಈ ಮೂರರಲ್ಲೂ ಮಹಿಳೆಯ ಹೆಸರು ಮತ್ತು ದಾಖಲೆ ಒಂದೇ ರೀತಿ ಇಲ್ಲದೆ ಇರುವುದು (Name mistakes in Documents)
* ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವುದು ಯಶಸ್ವಿ ಆಗದೆ ಇರುವುದು (Application failed)
* BPL ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ ರೇಷನ್ ಕಾರ್ಡ್ ಹೊಂದಿದ್ದರೆ ಆಹಾರ ಇಲಾಖೆ ಅಧಿಕಾರಿಗಳು ಇಂತಹ ರೇಷನ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಆ ಫಲಾನುಭವಿಗಳಿಗೆ ಗೃಹಲಕ್ಷ್ಮಿಯು ಸೇರಿದಂತೆ ರೇಷನ್ ಕಾರ್ಡ್ ಆಧಾರಿತ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ
* ರೇಷನ್ ಕಾರ್ಡ್ ಇ-ಕೆವೈಸಿ (e-KYC) ಅಪ್ಡೇಟ್ ಆಗದೆ ಇರುವುದು ಕೂಡ ಒಂದು ಕಾರಣವಾಗಿದೆ.
ಈ ಸುದ್ದಿ ಓದಿ:- ನವೋದಯ ವಿದ್ಯಾಲಯ ಸಮಿತಿ ನೇಮಕಾತಿ, 1377 ಬೋಧಕೇತರ ಹುದ್ದೆಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ತಿ ಮಾಹಿತಿ.
* ಆಧಾರ್ ಕಾರ್ಡ್ ಪಡೆದು ಹತ್ತು ವರ್ಷಗಳಾಗಿದ್ದು ಒಮ್ಮೆ ಕೂಡ ಆಧಾರ್ ಅಪ್ಡೇಟ್ ಮಾಡಿಸದಿದ್ದರೆ ಈಗ ರಿನಿವಲ್ ಮಾಡಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ಕೊಟ್ಟಿದೆ ಆ ಪ್ರಕಾರವಾಗಿ ಆಧಾರ್ ರಿನಿವಲ್ (Aadhar renewal) ಆಗದೆ ಇದ್ದರೂ ಕೂಡ ನಿಮಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ
ಪರಿಹಾರ:-
* ಈ ಮೇಲೆ ತಿಳಿಸಿದಂತೆ ಯಾವುದೇ ದಾಖಲೆಗಳಲ್ಲಿ ವ್ಯತ್ಯಾಸ ಆಗಿದ್ದರೆ ಅವುಗಳನ್ನು ತಿದ್ದುಪಡಿ (Document correction) ಮಾಡಿಸಿಕೊಳ್ಳಬೇಕು
* ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರಲ್ಲಿ ವ್ಯತ್ಯಾಸ ಆಗಿದ್ದರೆ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಮತ್ತು ಈವರೆಗೆ ಅರ್ಜಿ ಸಲ್ಲಿಸದೆ ಇದ್ದವರಿಗೆ ಕೂಡ ಈಗ ಅರ್ಜಿ ಸಲ್ಲಿಸಲು ಅವಕಾಶ (re-apply) ಮಾಡಿಕೊಡಲಾಗಿದೆ ಮತ್ತು ಇಂತಹ ಫಲಾನುಭವಿಗಳಿಗೆ ಒಟ್ಟಾಗಿ ಎಲ್ಲಾ ಕಂತುಗಳ ಹಣ ಕೂಡ ಸಿಗಲಿದೆ
* ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆ ಇದ್ದರೆ ಅಥವಾ ಈಗಾಗಲೇ ಬ್ಯಾಂಕ್ ಖಾತೆ ಹೊಂದಿದ್ದು ಅದಕ್ಕೆ ಹಣ ಹೋಗುತ್ತಿದೆ ಆದರೆ ಆ ಖಾತೆಯಿಂದ ಹಣ ತೆಗೆಯಲು ಯಾವುದೇ ದಾಖಲೆಗಳು ಇಲ್ಲ ಎನ್ನುವುದಾದರೆ ತಕ್ಷಣವೇ ಅಂಚೆ ಕಚೇರಿಯಲ್ಲಿ ಒಂದು ಉಳಿತಾಯ ಖಾತೆ (Post office Saving Account) ತೆರೆಯಿರಿ ಮುಂದಿನ ತಿಂಗಳಿಂದ ಅಂಚೆ ಕಚೇರಿ ಖಾತೆಗೆ ಹಣ ಬರುತ್ತದೆ.
ಈ ಸುದ್ದಿ ಓದಿ:- 4 ಹಸುವಿನಿಂದ ಆರಂಭಿಸಿ 100 ಹಸು ಸಾಕಾಣಿಕೆ, ಪ್ರತಿ ದಿನಕ್ಕೆ 450 ಲೀಟರ್ ಹಾಲು ಮಾರಾಟ.! ವರ್ಷಕ್ಕೆ 25 ಲಕ್ಷ ಲಾಭ
* ಯಾವ ಸಮಸ್ಯೆಯಿಂದ ಹೀಗಾಗುತ್ತದೆ ಎನ್ನುವುದು ತಿಳಿಯದೆ ಇದ್ದರೆ ಹತ್ತಿರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಹೋಗಿ CDPO ಅಧಿಕಾರಿಗಳನ್ನು ಈ ಕೆಳಗೆ ತಿಳಿಸಿದ ದಾಖಲೆಗಳೊಂದಿಗೆ ಭೇಟಿಯಾಗಿ ಅವರು ನಿಮ್ಮ ಸಮಸ್ಯೆ ಇತ್ಯರ್ಥ ಪಡಿಸುತ್ತಾರೆ
1. ರೇಷನ್ ಕಾರ್ಡ್
2. ಆಧಾರ್ ಕಾರ್ಡ್
3. ಬ್ಯಾಂಕ್ ಪಾಸ್ ಬುಕ್
* ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ
ಈ ಸುದ್ದಿ ಓದಿ:- ರಾಗಿ ಬೆಳೆದ ರೈತರಿಗೆ ಗುಡ್ ನ್ಯೂಸ್ ರಾಗಿ ಕ್ವಿಂಟಾಲ್ ಗೆ 3486.ರೂ ಬೆಂಬಲ ಬೆಲೆ ನಿಗದಿ.!
ಇದೆಲ್ಲದರ ಜೊತೆಗೆ ಒಂದು ಸಿಹಿ ಸುದ್ದಿ ಏನೆಂದರೆ, ಪ್ರತಿ ತಿಂಗಳ 20ನೇ ತಾರೀಕಿನೊಳಗೆ ಗೃಹಲಕ್ಷ್ಮಿ ಹಣ ತಲುಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. 7ನೇ ಕಂತಿನ ಹಣವು ಮಾರ್ಚ್ 25ರ ಒಳಗೆ ಎಲ್ಲಾ ಫಲಾನುಭವಿಗಳನ್ನು ತಲುಪಲಿದೆ ಎನ್ನುವ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದಾರೆ.