ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು (Karnataka government Guarantee Scheme) ಒಂದಾದ ಮೇಲೆ ಒಂದರಂತೆ ಬಹುತೇಕ ಜಾರಿಯಾಗಿವೆ. ಈಗ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರು ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಸದ್ಯದಲ್ಲೇ ದಿನಾಂಕ ಕೂಡ ನಿಗದಿ ಆಗುತ್ತಿದೆ.
ಕೊಟ್ಟ ಮಾತಿನಂತೆಯೇ ಆಗಸ್ಟ್ ತಿಂಗಳಿನಲ್ಲಿಯೇ (August month) ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಪ್ರಯತ್ನ ಮಾಡುತ್ತಿದೆ. ಈಗಿನ್ನು ಅರ್ಜಿ ಸ್ವೀಕಾರ ಪ್ರಕ್ರಿಯೆ ಹಂತದಲ್ಲಿರುವ ಈ ಯೋಜನೆ ಕುರಿತು ಜನಸಾಮಾನ್ಯರಿಗೆ ಇದ್ದ ಪ್ರಶ್ನೆಗಳಿಗೆ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಸುದ್ದಿಗೋಷ್ಠಿಯೊಂದರಲ್ಲಿ ಉತ್ತರಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಕುರಿತು ಅವರಿಗೆ ಎದುರಾದ ಪ್ರಶ್ನೆಗಳಿಗೆ ಅವರು ಕೊಟ್ಟಿರುವ ಉತ್ತರ ಈ ರೀತಿ ಇದೆ. ಗೃಹಲಕ್ಷ್ಮಿ ಯೋಜನೆಗೆ ಚುನಾವಣೆ ಪೂರ್ವವಾಗಿ ಭರವಸೆ ನೀಡಿದಾಗ ಕರ್ನಾಟಕದಾದ್ಯಂತ ಎಲ್ಲಾ ಕುಟುಂಬದ ಯಜಮಾನಿ ಮಹಿಳೆಯರಿಗೂ ಕೂಡ ಪ್ರತಿ ತಿಂಗಳು 2000 ಸಹಾಯಧನ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಪಂಜಾಬ್ ರಾಜ್ಯದಲ್ಲಿ (Panjab state) APL, BPL ಕಾರ್ಡ್, GST ಪೇಯರ್ಸ್ ಈ ರೀತಿ ಯಾವುದೇ ಬೇಧ ಮಾಡದೆ ಕೊಟ್ಟ ಮಾತಿನಂತೆ ಆ ರಾಜ್ಯದಲ್ಲಿರುವ ಎಲ್ಲಾ ಮಹಿಳೆಯರ ಖಾತೆಗೂ ಕೂಡ 1000 ರೂ. ಸಹಾಯಧನವನ್ನು ನೀಡುತ್ತಿದ್ದಾರೆ.
ಆದರೆ ನಮ್ಮ ರಾಜ್ಯದಲ್ಲಿ ಆದೇಶ ಪತ್ರ ಹೊರಬೀಳುವ ವೇಳೆಗೆ ಸಾಕಷ್ಟು ಮಾರ್ಪಾಡು ಮಾಡಲಾಗಿದೆ. ರೇಷನ್ ಕಾರ್ಡ್ ಇರುವ (Ration card compulsory) ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟು ಅದರಲ್ಲೂ ಆದಾಯ ತೆರಿಗೆ ಕಟ್ಟುವವರು, GST ಪೇಯರ್ಸ್ ಮತ್ತು ಸರ್ಕಾರಿ ಹುದ್ದೆಯಲ್ಲಿ ಇರುವ ಕುಟುಂಬಗಳನ್ನು ಈ ವ್ಯಾಪ್ತಿಯಿಂದ ಹೊರಗಡಲಾಗಿದೆ.
ಯಾಕೆ ಈ ರೀತಿ ಬದಲಾವಣೆ ಮಾಡಲಾಗಿದೆ ಎಂದು ಪ್ರಶ್ನೆ ಕೇಳಲಾಗಿತ್ತು ಇದಕ್ಕೆ ಉತ್ತರಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಮ್ಮ ಸರ್ಕಾರ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತದೆ. ಯೋಜನೆ ಬಗ್ಗೆ ಪ್ಲಾನ್ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಗೂ ಕೂಡ 2000ರೂ. ಸಹಾಯಧನವನ್ನು ನೀಡಬೇಕು ಎಂದು ಅಂದುಕೊಂಡಿದ್ದರು.
ಆದರೆ ರಾಜ್ಯದ ಆದಾಯಕ್ಕೆ ಬಾರಿ ಹೊಡೆತ ಬೀಳಲಿದೆ ಎನ್ನುವುದನ್ನು ನಿರೀಕ್ಷೆ ಮಾಡಿ ಈಗ ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬ ಮತ್ತು ಆದಾಯ ತೆರಿಗೆ, GST ಕಟ್ಟುವ ಕುಟುಂಬಗಳನ್ನು ಪರಿಗಣಿಸಿಲ್ಲ. ಸದ್ಯಕ್ಕಿನ್ನು ಯೋಜನೆ ಅರ್ಜಿ ಸ್ವೀಕಾರ ಮಾಡುವ ಹಂತದಲ್ಲಿ ಇದೆ, ಜಾರಿಯಾಗಿ ಹಣ ವರ್ಗಾವಣೆ ಆದಮೇಲೆ ಅದರ ವಿವರ ನೋಡಿಕೊಂಡು ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಇದನ್ನು ಇನ್ನಷ್ಟು ಜನರಿಗೆ ವಿಸ್ತರಿಸುವ ಪ್ರಯತ್ನವನ್ನು ಖಂಡಿತ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸದ್ಯಕ್ಕಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿರುವ 1.53 ಕೋಟಿ ಕುಟುಂಬಗಳಿದ್ದು ಇದರಲ್ಲಿ 1.23 ಕೋಟಿ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಡೆಯ ದಿನಾಂಕ ಇಲ್ಲ ದಾಖಲೆಗಳ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವವರು ಮುಂದಿನ ದಿನಗಳಲ್ಲಿ ಅದನ್ನು ತಿದ್ದುಪಡಿ ಮಾಡಿಸಿಕೊಂಡು ನಂತರ ಕೂಡ ಅರ್ಜಿ ಸಲ್ಲಿಸಿ, ಈ ಯೋಜನೆಯ ಫಲಾನುಭವಿಗಳಾಗಬಹುದು ಎನ್ನುವ ಮಾಹಿತಿಯನ್ನು ಸಚಿವೆ ತಿಳಿಸಿದ್ದಾರೆ.