ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಪ್ರಧಾನಮಂತ್ರಿಗಳಾದ ಮೇಲೆ ದೇಶದ ಎಲ್ಲಾ ವರ್ಗದ ಜನರಿಗಾಗಿ ವಿಶೇಷವಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ರೈತರಿಗಾಗಿ (for Farmers) ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PMKSY), ಪ್ರಧಾನ ಮಂತ್ರಿ ಫಸಲ್ ಭೀಮಾ(PMFBY) ಯೋಜನೆ ಇನ್ನಿತರ ಯೋಜನೆಗಳಿಂದ ದೇಶದ ರೈತರಿಗೆ ಅಪಾರ ಅನುಕೂಲವಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ಹೇಳುವುದಾದರೆ 2019ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು, ಈ ಯೋಜನೆ ಮೂಲಕ ದೇಶದ ಎಲ್ಲಾ ಸಣ್ಣ ಹಾಗೂ ಅತಿ ಸಣ್ಣ ರೈತರು ವಾರ್ಷಿಕವಾಗಿ 6,000ಗಳನ್ನು ಮೂರು ಕಂತುಗಳಲ್ಲಿ ತಲಾ ರೂ.2000 ಯಾಗಿ DBT ತಮ್ಮ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ.
ಯಾವುದೇ ಮಧ್ಯವರ್ತಿಯ ಕಾಟವಿಲ್ಲದೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅಂದರೆ ಏಪ್ರಿಲ್ ಇಂದ ಜುಲೈ ಅವಧಿಯಲ್ಲಿ ಮೊದಲನೇ ಕಂತು, ಆಗಸ್ಟ್ ನಿಂದ ನವೆಂಬರ್ ಅವಧಿಯಲ್ಲಿ ಎರಡನೇ ಕಂತು ಮತ್ತು ಡಿಸೆಂಬರ್ ಯಿಂದ ಮಾರ್ಚ್ ಅಂತ್ಯದ ಒಳಗೆ ಮೂರನೇ ಕಂತಿನ ಹಣ ನೇರವಾಗಿ ರೈತರ ಖಾತೆ ಸೇರುತ್ತಿದೆ.
ಇದೇ ತಿಂಗಳ ನವೆಂಬರ್ 15ರಂದು ಪ್ರಧಾನ ಮಂತ್ರಿಗಳು ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣವನ್ನು ದೇಶದ ಅರ್ಹ 8.5 ಕೋಟಿ ರೈತರಿಗೆ ಬಿಡುಗಡೆ ಮಾಡಿದ್ದರು ಇದಾದ ಬಳಿಕ ಮತ್ತೊಮ್ಮೆ ಯೋಜನೆ ಕುರಿತು ಸಿಹಿ ಸುದ್ದಿ ನೀಡಿದ್ದಾರೆ.
ಇನ್ನು ಮುಂದೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ರೈತರಿಗೆ ರೂ. 12,000 ಹಣ ಸಿಗಲಿದೆ ಎಂದು ಯೋಜನೆಯ ಸಹಾಯಧನದ ಮೊತ್ತ ಹೆಚ್ಚಿಸಿರುವುದರ ಬಗ್ಗೆ ಸ್ವತಃ ಪ್ರಧಾನ ಮಂತ್ರಿಗಳೇ ರಾಜಸ್ಥಾನದ ಹನುಮಾನ್ ಗಡದಲ್ಲಿ ನಡೆದ ಬಿಜೆಪಿ ರ್ಯಾಲಿ (Rajasthan BJP Rally) ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಈ ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಯಿದ್ದು ಮುಂಬರುವ ಲೋಕಸಭಾ ಚುನಾವಣೆಯನ್ನು ಕೂಡ ಮನದಲ್ಲಿಟ್ಟುಕೊಂಡು ಈ ಘೋಷಣೆ ಮಾಡಿದ್ದಾರೆ ಎನ್ನಬಹುದು. ರಾಜಸ್ಥಾನದ ರೈತರಿಗೆ BJP ಸರ್ಕಾರವು ಅಧಿಕಾರಕ್ಕೆ ಬಂದರೆ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಸಿಗುವ ರೂ. 6000 ಸಹಾಯಧನದ ಜೊತೆಗೆ ರಾಜ್ಯ ಸರ್ಕಾರದಿಂದಲೂ ಕೂಡ ರೂ. 6000 ಸಹಾಯಧನ ಸಿಗಲಿದೆ.
ಮತ್ತು ಇಂಧನಗಳ ಬೆಳೆಗಳನ್ನು ಪರೀಷ್ಕಸಲಾಗುವುದು, ಹಾಗೆ ರೈತರು ಬೆಳೆದ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (MSP) ನೀಡಿ ಖರೀದಿಸಲಾಗುವುದು, ರೈತರ ಮೋಸ ಮಾಡಿದವರಿಗೆ ಸರಿಯಾದ ಶಿ’ಕ್ಷೆ ನೀಡಲಾಗುವುದು ಹೀಗೆ ರೈತ ವರ್ಗಕ್ಕೆ ಹೆಚ್ಚಿನ ಕಾಳಜಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ನಮ್ಮ ರಾಜ್ಯದಲ್ಲೂ ಕೂಡ BJP ಸರ್ಕಾರ ಅಧಿಕಾರದಲ್ಲಿದ್ದಾಗ ಸಿಎಂ ಕಿಸಾನ್ ಸಮ್ಮಾನ್ ನಿಧಿ (CMKSY) ಯೋಜನೆಯಡಿ ರೂ. 4,000 ಸಹಾಯಧನವು ರೈತರಿಗೆ ವರ್ಷದಲ್ಲಿ ಎರಡು ಕಂತುಗಳಲ್ಲಿ ಸಿಗುತ್ತಿದ್ದದ್ದನ್ನು ಈ ಸಮಯದಲ್ಲಿ ಸ್ಮರಿಸಬಹುದು, ಇದನ್ನೇ ಮಾದರಿಯಾಗಿಟ್ಟುಕೊಂಡು ಪ್ರಧಾನಿಗಳು ರಾಜಸ್ಥಾನದಲ್ಲಿ ಈ ಘೋಷಣೆ ಮಾಡಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 15ನೇ ಕಂತಿನ ಹಣ ಬಂದಿದೆಯೋ ಇಲ್ಲವ ಎನ್ನುವುದನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.
* ಮೊದಲು PM ಕಿಸಾನ್ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ
* ಬಲ ಭಾಗದಲ್ಲಿ Know Your Status ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
* ನಿಮ್ಮ Registration Number and Captcha code ಅನ್ನು ನಮೂದಿಸಿ, Get Data ಎಂಬುವುದನ್ನು ಆಯ್ಕೆ ಮಾಡಿ * * ಸ್ಕ್ರೀನ್ ಮೇಲೆ ನಿಮ್ಮ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.