ದಯವಿಟ್ಟು ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಮಾಡಬೇಡಿ ಎಂದು ಹೇಳಿದ ಸೋನು ಶ್ರೀನಿವಾಸ್ ಗೌಡ.

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಎಂದು ಗುರುತಿಸಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಓಟಿಟಿಯಲ್ಲಿ ಭಾಗವಹಿಸಿದ್ದರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವಂತಹ ಸೋನು ಅವರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಇದ್ದಂತಹ ಸೋನು ಅವರಿಗೂ ಬಿಗ್ ಬಾಸ್ ಮನೆಯಿಂದ ಬಂದ ನಂತರ ಇರುವಂತಹ ಸೋನು ಅವರಿಗೂ ಬಹಳ ವಿಭಿನ್ನವಾದಂತಹ ಬದಲಾವಣೆ ಕಂಡು ಬಂದಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸೋನು ಅವರು ಮೂಲತಃ ಹಳ್ಳಿಯ ಹುಡುಗಿ, ಹಳ್ಳಿಯಲ್ಲಿ ಹುಟ್ಟಿದ್ದು ಆದರು ಬೆಳೆದಿದ್ದು ಸಿಟಿಯಲ್ಲಿ. ಹಳ್ಳಿ ಹುಡುಗಿಯರಲ್ಲಿ ಇದ್ದಂತಹ ಮುಗ್ಧತೆ ಇವರಲ್ಲಿಯೂ ಇದೆ ಇವರು ಎಲ್ಲರನ್ನು ತುಂಬಾ ಈಜಿ ಆಗಿ ನಂಬುತ್ತಾರೆ ಹಾಗೆಯೇ ನೇರನುಡಿ ಉಳ್ಳಂತಹವರು ಆಗಿದ್ದಾರೆ.

WhatsApp Group Join Now
Telegram Group Join Now

ಕೆಲವೊಮ್ಮೆ ಇವರು ಮಾತನಾಡುವಾಗ ತಮ್ಮ ಮಾತಿನ ಮೇಲೆ ಹಿಡಿತ ಇರುವುದಿಲ್ಲ ಅಂದರೆ ಬಾಯಿಗೆ ಬಂದ ಹಾಗೆ ಕೆಲವೊಮ್ಮೆ ಮಾತನಾಡುತ್ತಾರೆ. ಈ ಒಂದು ವಿಚಾರ ಬಿಗ್ ಬಾಸ್ ಮನೆಗೆ ಹೋದ ನಂತರ ಸಾಕಷ್ಟು ಜನರಿಗೆ ತಿಳಿಯಿತು. ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಗೆ ಹೋಗುತ್ತಿದ್ದಾರೆ ಎನ್ನುವಂತಹ ವಿಚಾರ ತಿಳಿದ ಮೇಲೆ ಸಾಕಷ್ಟು ಜನರು ಅವರ ವಿರೋಧವಾಗಿ ಮಾತನಾಡಿದರು ಅಂದರೆ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಬಾರದು ಎನ್ನುವಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಬಿಗ್ ಬಾಸ್ ಮನೆಗೆ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟ ಮೇಲೆ ಕೆಲವೊಬ್ಬರ ಅಭಿಪ್ರಾಯಗಳು ಬದಲಾದರೂ ಸಹ ಇನ್ನೂ ಬಹಳಷ್ಟು ಜನ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸೋನು ಅವರ ನಡವಳಿಕೆಯ ಬಗ್ಗೆ ಖುದ್ದು ಕಿಚ್ಚ ಸುದೀಪ್ ಅವರೇ ಸಾಕಷ್ಟು ಬಾರಿ ತಿಳುವಳಿಕೆಯನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಹೊರಗೆ ಬಂದ ನಂತರ ಮಾತನಾಡಿರುವಂತಹ ಸೋನು ಗೌಡ ಅವರು ನನ್ನಲ್ಲಿ ಮುಗ್ಧತೆ ಇನ್ನೂ ಹಾಗೆ ಇದೆ ನಾನು ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ನನ್ನಲ್ಲಿ ಸಾಕಷ್ಟು ರೀತಿಯಾದಂತಹ ಬದಲಾವಣೆಗಳು ಉಂಟಾಗಿದೆ. ಬಿಗ್ ಬಾಸ್ ನನಗೆ ಒಂದು ಒಳ್ಳೆಯ ಫ್ಲ್ಯಾಟ್ ಫಾರ್ಮ್ ಎಂದು ಹೇಳಿದ್ದಾರೆ. ಹುಡುಗಿಯರಿಗೆ ಒಂದು ಮನವಿಯನ್ನು ಸಹ ಇವರು ಮಾಡಿದ್ದಾರೆ ಯಾವುದೇ ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಮಾಡಬೇಡಿ ಇದರಿಂದ ನಿಮ್ಮ ಜೀವನವು ಹಾಳಾಗುತ್ತದೆ ಈ ಲವ್ ಎನ್ನುವಂತಹದ್ದು ಬರೀ ಮೋಸ ಇದರಲ್ಲಿ ಯಾವುದೇ ರೀತಿಯ ಸತ್ಯತೆ ಇರುವುದಿಲ್ಲ, ಇದರಿಂದ ಕೇವಲ ನೋವು ಉಂಟಾಗುತ್ತದೆ ಅಷ್ಟೇ.

ನೀವು ಪ್ರೀತಿಯಲ್ಲಿ ಮೋಸ ಹೋದ ನಂತರ ನಿಮ್ಮ ಮನಸ್ಥಿತಿ ಹಾಳಾಗುತ್ತದೆ ಹಾಗೆಯೇ ನಿಮ್ಮ ಕುಟುಂಬದವರು ಸಹ ಇದರಿಂದ ತುಂಬಾ ನೋವನ್ನು ಅನುಭವಿಸುತ್ತಾರೆ. ನೀವು ಜೀವನದಲ್ಲಿ ಯಾವುದಾದರೂ ಒಂದು ಗಟ್ಟಿ ನಿರ್ಧಾರವನ್ನು ಮಾಡಿ ನೀವು ನಿಮ್ಮ ಸ್ವಂತ ದುಡಿಮೆಯಿಂದ ಮುಂದೆ ಬಂದಮೇಲೆ ನಂತರದಲ್ಲಿ ಮದುವೆ ವಿಚಾರಕ್ಕೆ ಕೈ ಹಾಕಬೇಕು ಯಾಕೆಂದರೆ ಮುಂದೆ ನೀವು ಒಂಟಿಯಾದರೂ ಸಹ ನಿಮ್ಮ ಜೀವನವನ್ನು ನಡೆಸುವಷ್ಟು ಸಾಮರ್ಥ್ಯ ನಿಮ್ಮಲ್ಲಿ ಇರಬೇಕು ಎಂದು ಸೋನು ಗೌಡ ಅವರು ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now