ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗಾಗಿ ಇಂದೇ ಅರ್ಜಿ ಸಲ್ಲಿಸಿ.

  ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದ್ದು, ಒಟ್ಟು ಖಾಲಿ ಇರುವ 208 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಾವೇರಿ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಈ ಅಧಿಸೂಚನೆಯಲ್ಲಿ ಹೊರಡಿಸಿರುವ ವಿಷಯಗಳನ್ನು ಅರ್ಥೈಸಿಕೊಂಡು ಕೇಳಲಾದ ಅರ್ಹತೆ ಇದ್ದಲ್ಲಿ ಮಾತ್ರ ಅಧಿಸೂಚನೆಯ ನಿಯಮಾವಳಿಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. … Read more

ಸರ್ಕಾರದ ಹೊಸ ಯೋಜನೆ ಇನ್ನು ಮುಂದೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಿಗಲಿದೆ ಸ್ಕೂಟಿ.

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಯೋಚನೆಗಳನ್ನು ಜಾರಿಗೆ ತಂದಿವೆ. ರೈತರು, ಕಟ್ಟಡ ಕಾರ್ಮಿಕರು, ವಿದ್ಯಾರ್ಥಿಗಳು ಹೀಗೆ ಎಲ್ಲರ ಏಳಿಗೆಗಳನ್ನು ಬಯಸುತ್ತಿರುವ ಸರ್ಕಾರವು ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು ಪ್ರೋತ್ಸಾಹಿಸುವ ಸಲುವಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಸ್ಕಾಲರ್ಶಿಪ್, ಸೈಕಲ್ ವಿತರಣೆ, ವಿದ್ಯಾರ್ಥಿ ಕಿಟ್, ಬಿಸಿಯೂಟ ಕಾರ್ಯಕ್ರಮ, ಉಚಿತ ಸಮವಸ್ತ್ರ ಇವುಗಳ ಪ್ರಯೋಜನ ಸಿಗುತ್ತಿತ್ತು. ಇನ್ನು ಮುಂದೆ ಸ್ಕೂಟಿ ಕೂಡ ಸಿಗಲಿದೆ. ಸರ್ಕಾರಿ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೂ ಕೂಡ ಈ … Read more

ಆಧಾರ್ ಕಾರ್ಡ್ ಇದ್ದವರು ತಪ್ಪದೆ ನೋಡಲೇಬೇಕಾದ ಸುದ್ದಿ. ಸರ್ಕಾರದಿಂದ ಮಹತ್ವದ ಘೋಷಣೆ.

  ಆಧಾರ್ ಕಾರ್ಡ್ ಸದ್ಯಕ್ಕೆ ಭಾರತದ ದೇಶದ ನಾಗರಿಕರಿಗೆ ಒಂದು ಪ್ರಮುಖ ದಾಖಲೆಯಾಗಿದೆ. ಎಲ್ಲಾ ಗುರುತಿನ ಚೀಟಿ ಹಾಗೂ ದಾಖಲೆಗಳ ನಡುವೆ ಆಧಾರ್ ಕಾರ್ಡ್ ಅಗ್ರಸ್ಥಾನ ಗಿಟ್ಟಿಸಿಕೊಳ್ಳುತ್ತಿದೆ. ಇತ್ತೀಚೆಗೆ ಆಧಾರ್ ಕಾರ್ಡ್ ಅಲ್ಲಿ ಲೋಪವಿದ್ದರೆ ಅಥವಾ ಆಧಾರ್ ಕಾರ್ಡ್ ಇಲ್ಲ ಎಂದರೆ ಖಾಸಗಿ ಹಾಗೂ ಸರ್ಕಾರಿ ವಲಯದ ಅನೇಕ ಕೆಲಸಗಳು ಆಗುವುದೇ ಇಲ್ಲ. ಇಷ್ಟರಮಟ್ಟಿಗೆ ಆಧಾರ್ ಕಾರ್ಡ್ ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ. UIDAI ನೀಡುವ ಈ ಪ್ರಮುಖ ಪುರಾವೆಯ ಪ್ರಾಮುಖ್ಯತೆ ಬಗ್ಗೆ ಎಲ್ಲರಿಗೂ ಅರಿವಿದೆ. ಈಗ … Read more

ATM ನಲ್ಲಿ ಹಣ ಡ್ರಾ ಮಾಡುವ ಮುನ್ನ ಎಚ್ಚರ ಈ ತಪ್ಪು ಮಾಡಿದ್ರೆ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಜೀರೋ ಆಗುತ್ತೆ.

  ಹಣ ಬೇಕು ಎಂದಾಗ ಬ್ಯಾಂಕಿಗೆ ಹೋಗಿ ಚೆಕ್ ಬರೆದು ಕೊಟ್ಟು ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಕಾಲ ದಶಕಗಳ ಹಿಂದೆ ಹೋಯಿತು. ಈಗ ಆನ್ಲೈನಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆ ವ್ಯವಹಾರವು ಮುಗಿಯುವುದರಿಂದ ಜನ ನಗದು ಹಣದ ಬಳಕೆ ಕಡಿಮೆ ಮಾಡಿದ್ದಾರೆ. ಒಂದು ವೇಳೆ ಹಣ ಬೇಕಾದಾಗ ಈಗ ಎಲ್ಲರೂ ಕೂಡ ತಮ್ಮ ಖಾತೆ ಸಂಖ್ಯೆಗಳಿಗೆ ಎಟಿಎಂ ಕಾರ್ಡ್ ಗಳನ್ನು ಹೊಂದಿರುವುದರಿಂದ ಎಟಿಎಂ ಮಿಷನ್ ಗಳ ಬಳಿ ಹೋಗಿ ಹಣ ಡ್ರಾ ಮಾಡಿಕೊಂಡು ಖರ್ಚು ಮಾಡುತ್ತಾರೆ. ಆದರೆ … Read more

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ತಿಂಗಳಿಗೆ 35400 ಸಂಬಳ

  ಕರ್ನಾಟಕದಾದ್ಯಂತ ಎಲ್ಲಾ ನಿರುದ್ಯೋಗಿ ಯುವ ಜನತೆಗೆ ಸಿಹಿ ಸುದ್ದಿ. ಹಾಗೆಯೇ ಸರಕಾರಿ ಹುದ್ದೆ ಆಕಾಂಕ್ಷೆಗಳಿಗೂ ಕೂಡ ಇದು ಸದವಕಾಶ. ಯಾಕೆಂದರೆ ಕರ್ನಾಟಕದ ಕೃಷಿ ಇಲಾಖೆಯು ನೇಮಕಾತಿ ನಡೆಸುತ್ತಿದ್ದು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಸಲಾಗುತ್ತಿದೆ. ಈಗಾಗಲೇ ಅದಕ್ಕೆ ಸಂಬಂಧಪಟ್ಟ ಹಾಗೆ ಇಲಾಖೆ ಅಧಿಸೂಚನೆಯನ್ನು ಕೂಡ ಹೊರಡಿಸಿದೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಅರ್ಹ ಹಾಗೂ ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲ … Read more

ಮನೆ ಇಲ್ಲದವರು ಈ ಕೂಡಲೇ “ನನ್ನ ಮನೆ ವಸತಿ” ಯೋಜನೆಗೆ ಅರ್ಜಿ ಸಲ್ಲಿಸಿ ಮನೆ ಪಡೆಯಿರಿ.

  ಗ್ರಾಮೀಣ ಹಾಗೂ ನಗರ ಪ್ರದೇಶದ ವಸತಿ ರಹಿತ ಮತ್ತು ನಿವೇಶನ ರಹಿತ ಬಡ ಜನರಿಗೆ ಕೈಗೆಟಕುವ ದರದಲ್ಲಿ ಚಿಕ್ಕದಾದ ಚೊಕ್ಕ ದಾದ ಸುಂದರವಾದ ಸುಭದ್ರ ಸೂರು ಒದಗಿಸಬೇಕು ಎನ್ನುವುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ಚಾಲಕರು, ಚಿತ್ರರಂಗದ ಕಾರ್ಮಿಕರು ಸಣ್ಣ ಗುತ್ತಿಗೆದಾರರು, ಐಟಿ ಅಥವಾ ಐಟಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ. ಬೆಂಗಳೂರು ನಗರ ಮತ್ತು ಬೆಂಗಳೂರು ಜಿಲ್ಲೆಯ ವಾರ್ಷಿಕ ಆದಾಯ … Read more

ವಿಲ್ ಪತ್ರ ಅಥವಾ ದಾನಪತ್ರ ಯಾವ ಸಂದರ್ಭದಲ್ಲಿ ಯಾವುದು ಒಳ್ಳೆಯದು ಗೊತ್ತಾ.?

  ವಿಲ್ ಪತ್ರವನ್ನು ಮೃ.ತ್ಯು ಪತ್ರ, ಮ.ರ.ಣ ಶಾಸನ ಪತ್ರ, ಉಯಿಲು ಎಂಬುದಾಗಿ ಕರೆಯುತ್ತಾರೆ. ಹಾಗೆ ದಾನ ಪತ್ರವನ್ನು ಭಕ್ಷೀಸು ಪತ್ರ, ಉಡುಗೊರೆ ಪತ್ರ, ಗಿಫ್ಟ್ ಡೀಡ್ ಎಂದು ಕರೆಯುತ್ತಾರೆ. ದಿನನಿತ್ಯ ನಾವು ಇವುಗಳನ್ನು ಸಾಮಾನ್ಯವಾಗಿ ವಿಲ್ ಪತ್ರ ಮತ್ತು ದಾನ ಪತ್ರ ಎಂಬುದಾಗಿ ಕರೆಯುತ್ತೇವೆ. ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತವಾಗಿರುವ ಆಸ್ತಿಯನ್ನು ಅಥವಾ ಆತನ ಸಂಪೂರ್ಣ ಮಾಲೀಕತ್ವದಲ್ಲಿ ಇರುವ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ಬದಲಾವಣೆ ಮಾಡುವುದಕ್ಕೆ ಬಯಸುವ ಸಂದರ್ಭದಲ್ಲಿ ವಿಲ್ ಪತ್ರದ ಮೂಲಕ ಮಾಡಬಹುದು ಅಥವಾ … Read more

ಆಯುಷ್ಮಾನ್ ಕಾರ್ಡ್ ಹೊಂದಿರುವವರ ಖಾತೆಗೆ 5 ಲಕ್ಷ ಜಮೆ ಆಗಲಿದೆ. ನಿಮ್ಮ ಅಕೌಂಟ್ ಗೆ ಹಣ ಬಂದಿದಿಯೋ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.

  ದೇಶದಲ್ಲಿ ಅನೇಕ ಮಂದಿ ಆಯುಷ್ಮಾನ್ ಕಾರ್ಡ್ ಹೊಂದಿದ್ದಾರೆ, ಹಾಗೂ ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಸಿಗುವ ಸೌಲಭ್ಯಗಳ ಫಲಾನುಭವಿಗಳಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗಲಿಂದಲೂ ಜನಸಾಮಾನ್ಯರಿಗಾಗಿ ಈ ರೀತಿಯ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತಂದೇ ಇದ್ದಾರೆ. ಇದರಲ್ಲಿ ಜನ ಮೆಚ್ಚಿದ ಜನಪ್ರಿಯ ಯೋಜನೆ ಆದ ಆಯುಷ್ಮಾನ್ ಕಾರ್ಡ್ ಯೋಜನೆಯಲ್ಲಿ ದೇಶದ ಅಪಾರ ಜನಸಂಖ್ಯೆಯ ಜನರು ಪಾಲುದಾರರಾಗಿದ್ದಾರೆ. ಈಗ ದೇಶದಲ್ಲಿ ಆಯುಷ್ಮಾನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಸರ್ಕಾರದ ವತಿಯಿಂದ ಸಿಹಿ ಸುದ್ದಿ … Read more

ಪೌತಿ ಖಾತೆ ನಂತರ ಜಮೀನು ಭಾಗ ಮಾಡಿಕೊಳ್ಳುವುದು ಹೇಗೆ.!

  ಪೌತಿ ಖಾತೆ ನಂತರ ಜಮೀನನ್ನು ಹೇಗೆ ಭಾಗ ಮಾಡಿಕೊಳ್ಳಬೇಕು ಅಂದರೆ ತಾತ ಅಥವಾ ತಂದೆಯ ಹೆಸರಿನಲ್ಲಿ ಜಮೀನು ಇರುತ್ತದೆ ಅವರೇನಾದರೂ ಅಕಾಲಿಕವಾಗಿ ಮರಣವನ್ನು ಹೊಂದಿದರೆ. ಅವರ ಹೆಸರಿನಲ್ಲಿ ಇರುವಂತಹ ಆಸ್ತಿಯನ್ನು ಕುಟುಂಬದವರ ಎಲ್ಲರ ಹೆಸರಿಗು ಪೌತಿ ಖಾತೆಯ ಮೂಲಕ ಆಸ್ತಿ ಅಥವಾ ಜಮೀನು ಬರುತ್ತದೆ. ತದನಂತರ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು? ಮತ್ತು ಆಸ್ತಿ ಭಾಗ ಮಾಡಿಕೊಂಡ ನಂತರ ರಿಜಿಸ್ಟ್ರೇಷನ್ ಅಂದರೆ ನೋಂದಣಿಯನ್ನು ಹೇಗೆ ಮಾಡಿಸಬೇಕು? ಎನ್ನುವಂತಹ ಮಾಹಿತಿ ಹೆಚ್ಚಾಗಿ ಯಾರಿಗೂ … Read more

ರೇಷನ್ ಕಾರ್ಡ್ ಇರುವ ಪ್ರತಿಯೊಬ್ಬರೂ ಏಪ್ರಿಲ್ 31 ರ ಒಳಗೆ ಈ ಕೆಲಸ ಮಾಡಬೇಕು, ಇಲ್ಲದಿದ್ದರೆ ರೇಷನ್ ದೊರೆಯುವುದಿಲ್ಲ ಜೊತೆಗೆ ನಿಮ್ಮ ಕಾರ್ಡ್ ರದ್ದಾಗುತ್ತದೆ.

  ದೇಶದ ಎಲ್ಲಾ ಪಡಿತರ ಚೀಟಿದಾರರಿಗೂ ಕೂಡ ಸರ್ಕಾರ ಪಡಿತರ ಚೀಟಿಯೊಂದಿಗೆ ಸದಸ್ಯರೆಲ್ಲರ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎನ್ನುವ ನಿಯಮ ಹೇರಿತ್ತು. ಈ ಸೂಚನೆ ನೀಡಿ ವರ್ಷವೇ ಆಗಿದೆ ಹಾಗೂ ಡಿಸೆಂಬರ್ 2022 ಒಳಗೆ ಮಾಡಿಸಬೇಕು ಇದಕ್ಕೆ ಗಡುವನ್ನು ಕೂಡ ನೀಡಿತ್ತು. ಆದರೆ ಜನಸಾಮಾನ್ಯರಿಗೆ ಇದರ ಮಾಹಿತಿ ಕೊರತೆ ಇದೆ ಎನ್ನುವುದನ್ನು ಅರಿತ ಸರಕಾರ ದೇಶದ ಜನರಿಗಾಗಿ ಮತ್ತೊಮ್ಮೆ ಮಾರ್ಚ್ 31ರವರೆಗೆ ಆ ಅವಧಿಯನ್ನು ವಿಸ್ತರಿಸಿತು. ಈಗಾಗಲೇ ಸಾಕಷ್ಟು ಬಾರಿ ಸರ್ಕಾರ ಜಾಹೀರಾತುಗಳ ಮೂಲಕ ಮಾರ್ಚ್ … Read more