ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಂತೆ ಸಹಕಾರಿ ಬ್ಯಾಂಕ್ (co-operative banks) ಗಳು ಕೂಡ ಕನ್ನಡ ಆರ್ಥಿಕ ಚಟುವಟಿಕೆ ಭಾಗವಾಗಿವೆ. ಜನರು ಸಹಕಾರಿ ಬ್ಯಾಂಕುಗಳನ್ನು ಕೂಡ ಸಾಲ ಪಡೆಯುವುದು ಉಳಿತಾಯ ಮಾಡುವುದು, ಠೇವಣಿ ಇರುವುದು ಇನ್ನೂ ಮುಂತಾದ ಸೇವೆಗಳನ್ನು ಪಡೆಯುತ್ತಾರೆ. ಹಲವು ಕಾರಣಗಳಿಂದ ಆಯಾ ವ್ಯಾಪ್ತಿಯಲ್ಲಿ ಬರುವ ಸಹಕಾರಿ ಬ್ಯಾಂಕ್ ಗಳು ಬಹಳ ಆತ್ಮೀಯವೆನಿಸುತ್ತವೆ.
ಹಾಗೆಯೇ ಹೇಳದೆ ಕೇಳದೆ ಗ್ರಾಹಕರಿಗೆ ಕ್ಲೀನ್ ಚಿಟ್ ಕೊಟ್ಟ ಸಹಕಾರಿ ಬ್ಯಾಂಕಗಳ ಉದಾಹರಣೆಗೂ ಕಡಿಮೆ ಇಲ್ಲ, ಇದೊಂದು ಕಡೆಯಾದರೆ ಬ್ಯಾಂಕ್ ಗಳಿಂದ ಸಾಲ ಪಡೆದು ಪರಾರಿ ಆದವರ ಉದಾಹರಣೆಗಳೂ ಇವೆ. ದೇಶದಲ್ಲಿ ಅನೇಕ ಉದ್ಯಮಿಗಳು ಸಾಲ (loan) ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಇದು ಗೊತ್ತೇ ಇದೆ, ಆದರೆ ಸಹಕಾರಿ ವಲಯಕ್ಕೂ ಕೂಡ ಇದೇ ಗಾಳಿ ಬೀಸಿದ್ದು ಸಹಕಾರಿ ಬ್ಯಾಂಕ್ ಗಳಿಂದ ಹಣ ಪಡೆದವರು ಕೂಡ ನಾಪತ್ತೆಯಾಗಿದ್ದಾರೆ.
ಪ್ರೈಸ್ ಮನಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸುವುದು ಹೇಗೆ.? ಬೇಕಾಗುವ ದಾಖಲೆಗಳೇನು ನೋಡಿ.!
ನಮ್ಮ ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಇರುವ ಸಹಕಾರಿ ಬ್ಯಾಂಕ್ ಗಳಲ್ಲಿ ಈ ರೀತಿ ಸಾಲ ಪಡೆದು ಪರಾರಿ ಆದವರ ವಿವರ ನೋಡುವುದಾದರೆ ನಮ್ಮ ಬೆಂಗಳೂರು (Bengalore) ಇದರಲ್ಲಿ ಅಗ್ರಸ್ಥಾನದಲ್ಲಿ ಇದೆ ಎಂದೇ ಹೇಳಬಹುದು. ಗ್ರಾಮೀಣ ಭಾಗಗಳಲ್ಲಿ ಕೃಷಿ ಕಾರ್ಯಕ್ಕಾಗಿ ರೈತರು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆಯುತ್ತಾರೆ. ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳು ಕೂಡ ರೈತರ ಮೇಲಿರುವ ಸಾಲದ ಹೊರೆ ಇಳಿಸಲು ಹಲವು ವರ್ಷಗಳಿಂದ ಸಾಲ ಮರುಪಾವತಿ ಮಾಡದೆ ಸುಸ್ಥಿತರಾಗಿರುವ ರೈತರು ಮತ್ತು ಬ್ಯಾಂಕ್ ಮುಖ್ಯಸ್ಥರ ಸಮ್ಮುಖದಲ್ಲಿ ಸಂಧಾನ ನಡೆಸುವ ಪ್ರಯತ್ನವನ್ನು ಕೂಡ ಮಾಡಿದ್ದರು.
ರೈತರಿಗೆ ಬೆಳೆ ಹಾನಿ ಅಥವಾ ಕುಸಿದ ಬೆಲೆ, ಅತಿವೃಷ್ಟಿ, ಅನಾವೃಷ್ಟಿ ಇಂತಹ ಕಾರಣಗಳಿಂದಾಗಿ ಸಹಾ ಪಡೆದುಕೊಂಡ ಸಾಲವನ್ನು ತೀರಿಸಲು ಆಗಿರುವುದಿಲ್ಲ. ಒಂದೆರಡು ವರ್ಷಗಳ ಕಾಲ ಸಾಲ ಮರುಪಾವತಿ ಮಾಡದೆ ಇದ್ದರೆ ಅದು ಆತನ ಕೈಮೀರಿ ಬೆಳೆದು ಬಿಡುತ್ತದೆ. ಅದರ ರೈತರು ತಮ್ಮ ಜಮೀನು ಮಾರಿಯಾದರೂ ಸಾಲ ತೀರಿಸಲು ಪ್ರಯತ್ನ ಪಡುತ್ತಾರೆ. ಸಾಧ್ಯವಾಗದೇ ಇದ್ದಾಗ ಆ.ತ್ಮಹ.ತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ರೈತರು ಇದ್ದಾರೆ.
ಇಂಥವರಿಗೆ ಗೃಹಲಕ್ಷ್ಮಿ ಹಣ ಬರಲ್ಲ.! 1 ಲಕ್ಷ APL, BPL, ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗಳು ತಿರಸ್ಕೃತ.!
ಆದರೆ ಉದ್ಯಮಿಗಳು ಹಣ ಪಡೆದು ವಂಚಿಸುವವರೇ ಹೆಚ್ಚು ಹಾಗಾಗಿ ನಮ್ಮ ರಾಜ್ಯದಲ್ಲಿ ಯಾವ ಯಾವ ಜಿಲ್ಲೆಯಲ್ಲಿ ಹೆಚ್ಚು ಸಹಕಾರಿ ಸಂಘಗಳಲ್ಲಿ ಹಣ ಪಡೆದು ನಾಪತ್ತೆ ಆಗಿರುವ ಪ್ರಕರಣಗಳು ಹೆಚ್ಚಿದೆ ಎಂದು ನೋಡೋಣ. ಈಗ ರಾಜ್ಯದಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಹಾಗೂ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ 1,404 ಕೋಟಿ ಸಾಲವನ್ನು ಪಡೆದಿದ್ದಂತ 2,888 ಮಂದಿ ಸಾಲ ತೀರಿಸದೆ ತಲೆಮರೆಸಿಕೊಂಡಿದ್ದಾರೆ ಎನ್ನುವ ಶಾ-ಕಿಂಗ್ ವಿಚಾರ ಬಯಲಾಗಿದೆ.
ಇನ್ನೂ ಹೀಗೆ 1,404 ಕೋಟಿ ಸಾಲ (Loan) ಪಡೆದು ನಾಪತ್ತೆಯಾಗಿರುವಂತ 2,888 ಮಂದಿಯಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಸಹಕಾರಿ ಬ್ಯಾಂಕಿನದ್ದೇ ಹೆಚ್ಚಿನ ಪಾಲು. ಆಗಿದೆ. ಈ ಬ್ಯಾಂಕ್ ಎವರ್ ಗ್ರೀನ್ ಕ್ರೆಡಿಟ್ ಎಂಬುದಾಗಿ ಹಾಗೂ ಆ 1,400 ಕೋಟಿ ರೂ.ಸಾಲವನ್ನು ಅನುತ್ಪಾದಕ ಆಸ್ತಿನಷ್ಟವೆಂದೂ ಘೋಷಿಸಿ ಬಿಟ್ಟಿದೆ.
ವ್ಯಕ್ತಿ ಮ-ರಣದ ನಂತರ ಅವರ ಖಾತೆಯಲ್ಲಿ ಇರುವ ಹಣ ಯಾರಿಗೆ ಸೇರುತ್ತೆ.?
ರಾಜ್ಯದ ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ ಸಹಾ 25 ರಿಂದ 30 ವರ್ಷಗಳಾದರೂ ಸಾಲ ಪಡೆದವರು ತಾವು ಪಡೆದಿರುವ ಸಾಲ ಹಿಂತಿರುಗಿಸದ ಪರಿಣಾಮ ಅಸಲುಗಿಂತ ಬಡ್ಡಿಯೇ ಜಾಸ್ತಿ ಬೆಳೆದಿದೆ. ಕೆಲವರು ತಪ್ಪು ವಿಳಾಸ ಮತ್ತು ಸುಳ್ಳು ದಾಖಲೆ ಕೊಟ್ಟು ವಂಚಿಸಿ ಕೊಟ್ಟು ಸಾಲ ಪಡೆದಿದ್ದರೇ, ಕೆಲವರು ಸಾಲ ಪಡೆದು ಅಸಲು, ಬಡ್ಡಿ ಏನನ್ನು ಕಟ್ಟದೆ ಎಸ್ಖೇಪ್ ಆಗಿದ್ದಾರೆ ಎನ್ನುವುದನ್ನು ಅಂಕಿ ಅಂಶಗಳು ಹೇಳುತ್ತಿವೆ