ರೈತರ ಜಮೀನಿನ ಮಧ್ಯೆ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ ಗಳು ಬರುತ್ತವೆ. ವಿದ್ಯುತ್ ಸಂಪರ್ಕ ಕೂಡ ಒಂದು ಮೂಲಭೂತ ಅವಶ್ಯಕತೆ ಆದರೆ ಇದು ರೈತನ ಕೃಷಿ ಜಮೀನಿನ ಮೇಲೆ ಬರುವುದರಿಂದ ರೈತನಿಗೆ ಇದರಿಂದ ಅಪಾರ ನಷ್ಟ ಆಗುತ್ತದೆ ಆದರೆ ಈಗಾಗಲೇ ಇವುಗಳನ್ನು ಕೃಷಿ ಭೂಮಿಯಲ್ಲಿ ಅಳವಡಿಸಲಾಗಿದ್ದರೆ ರೈತನಿಗೆ ವಿದ್ಯುತ್ ಇಲಾಖೆ ಮತ್ತು ಸರ್ಕಾರದ ಕಡೆಯಿಂದ ಕೆಲ ಪರಿಹಾರ ಸಿಗುತ್ತದೆ.
ಸರ್ಕಾರಿ ನಿಯಮ ಮತ್ತು ವಿದ್ಯುಚ್ಛಕ್ತಿ ಕಾಯ್ದೆ ಪ್ರಕಾರವಾಗಿ ರೈತರಿಗೆ ಸಿಗುವ ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರೆ ರೈತನು ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕು ಈ ತನ ದಾಖಲೆಗಳು ಸರಿಯಾಗಿದ್ದರೆ ಸ್ಥಳ ಪರೀಕ್ಷೆ ಸಂಬಂಧಿತ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ಅನುಮೋದಿಸಿದರೆ 30 ದಿನಗಳ ನಂತರ ಈ ಕೆಳಕಂಡ ಎಲ್ಲಾ ಸವಲತ್ತುಗಳು ಕೂಡ ರೈತನಿಗೆ ಸಿಗುತ್ತವೆ.
ಅವುಗಳ ಪಟ್ಟಿ ಹೀಗಿವೆ :-
* ವಾರಕ್ಕೆ ರೂ.100 ರಂತೆ ಯಾವ ರೈತನ ಜಮೀನಿನ ಮೇಲೆ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಹೋಗಿದೆ ಆ ರೈತನಿಗೆ ಆರ್ಥಿಕ ನೆರವು ಸಿಗುತ್ತದೆ.
* ಎಲೆಕ್ಟ್ರಿಕಲ್ ಟ್ರಾನ್ಸ್ಫರ್ಮರ್ ಅಥವಾ ವಿದ್ಯುತ್ ಲೈನ್ ನಲ್ಲಿ ಏನಾದರೂ ದೋಷವಿದ್ದರೆ ಅದನ್ನು ಕಂಪ್ಲೇಂಟ್ ಮಾಡಿದ 48 ಗಂಟೆಗಳ ಒಳಗೆ ಸರಿಪಡಿಸಬೇಕು, ವಿಳಂಬ ಮಾಡಿದಲ್ಲಿ ದಿನಕ್ಕೆ ರೂ.50 ಲೆಕ್ಕದಲ್ಲಿ ಪರಿಹಾರ ನೀಡಬೇಕಾಗುತ್ತದೆ.
* ಡೊಮೆಸ್ಟಿಕ್ ಪರ್ಪಸ್ (DP) ಮತ್ತು ಪಂಪ್ ಲೋಡ್ (PL) ಜೊತೆಗೆ 2,000 ದಿಂದ 5,000 ಯೂನಿಟ್ ವಿದ್ಯುತ್ ಪ್ರಯೋಜನ ಕೂಡ ಆ ರೈತರಿಗೆ ಸಿಗುತ್ತದೆ
* ಒಂದು ವೇಳೆ ತನ್ನ ಜಮೀನಿನಲ್ಲಿ ಈ ರೀತಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಳ್ಳುವುದಕ್ಕೆ ತನ್ನ ತಕರಾರು ಏನು ಇಲ್ಲ ಎಂದು ರೈತ NOC ನೀಡಿದರೆ ಕಂಪನಿ ಮತ್ತು ರೈತರ ನಡುವೆ ಭೂ ಗುತ್ತಿಗೆ ಒಪ್ಪಂದ ಆಗುತ್ತದೆ. ಈ ಒಪ್ಪಂದದ ಮೂಲಕ ತನ್ನ ಜಮೀನನ್ನು ರೂ.5,000 ದವರೆಗೆ ಗುತ್ತಿಗೆ ಆಧಾರದಲ್ಲಿ ಮಾತನಾಡಿ ಇಲಾಖೆಗೆ ನೀಡಬಹುದು.ಇದರಿಂದ ರೈತನಿಗೆ ಪ್ರತಿ ತಿಂಗಳು ಆದಾಯ ದೊರೆತ ರೀತಿ ಆಗುತ್ತದೆ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.!
* ತಮ್ಮ ಜಮೀನಿನಲ್ಲಿ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಹೊಂದಿರುವ ಭೂ ಮಾಲೀಕರು ವಸತಿ ಅಥವಾ ಕೃಷಿ ಉದ್ದೇಶಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ಬಯಸಿದರೆ ಆ ಸಮಯದಲ್ಲಿ ಕೂಡ ಅವರಿಗೆ ಅನೇಕ ವಿನಾಯಿತಿ ಇರುತ್ತದೆ. ಹೀಗೆ ಹೊಸ ವಿದ್ಯುತ್ ಸಂಪರ್ಕ ಪಡೆದಾಗ ರೂ.1500 ಇಂದ ರೂ.5000 ವರೆಗೆ ನಿರ್ವಹಣೆ ಶುಲ್ಕ ಬರುತ್ತದೆ ಇದನ್ನು ಕೂಡ ಕಂಪನಿಯೇ ನಿಭಾಯಿಸುತ್ತದೆ.
ಕೆಲ ವರ್ಷಗಳವರೆಗೆ ರೈತರಿಗೆ ಅವರ ಜಮೀನಿನ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸುವಂತಹ ವಿದ್ಯುತ್ ಕಂಬಗಳ ಅಥವಾ ಟ್ರಾನ್ಸ್ಫರ್ಮರ್ ಕಾರ್ಯಾಚರಣೆ ನಡೆಯುವುದಾಗಿ ಹೇಳಿದಾಗ ಅಥವಾ ನಡೆದಿದ್ದಾಗ ಬಹಳ ಗಾಬರಿಕೊಳ್ಳುತ್ತಿದ್ದರು. ಆದರೆ ಇದರಿಂದ ಆಗುವ ಅಪಾಯದ ಪ್ರಮಾಣವೂ ಬಹಳ ಕಡಿಮೆಯಾಗಿದೆ.
ಈ ಸುದ್ದಿ ಓದಿ:- 365 ದಿನವೂ ಬೇಡಿಕೆ, ನಿರಂತರ ಮಾರ್ಕೆಟ್, ಪ್ರತಿ ಸೀಜನ್ ನಲ್ಲಿ ಎಕರೆಗೆ 3 ಲಕ್ಷ ಆದಾಯ, ನೀಡುವ ಕೃಷಿ ಇದು.!
ಆದ್ದರಿಂದ ರೈತರಿಗೆ ಮನವರಿಕೆ ಮಾಡಲು ಮತ್ತು ಅನುಕೂಲತೆ ಮಾಡಿಕೊಳ್ಳಲು ಈ ಮೇಲೆ ತಿಳಿಸಿದಂತಹ ಎಲ್ಲಾ ಸವಲತ್ತುಗಳನ್ನು ಒದಗಿಸಿ ಕೊಡಲಾಗುತ್ತಿದೆ ಮತ್ತು ಇದರ ನಿರ್ವಹಣಾ ಬಗ್ಗೆ ಜಾಗೃತಿ ಹಾಗೂ ಮಾರ್ಗದರ್ಶನ ಕೂಡ ನೀಡಲಾಗುತ್ತಿದೆ. ಆದ್ದರಿಂದ ಇನ್ನು ಮುಂದೆ ಇಂತಹ ರೈತರು ಯಾವುದೇ ಟೆನ್ಶನ್ ಇಲ್ಲದೆ ಆರಾಮಾಗಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.