ರೇಷನ್ ಕಾರ್ಡ್ ಸದ್ಯಕ್ಕೆ ರಾಜ್ಯದಾದ್ಯಂತ ಹೆಚ್ಚು ಸುದ್ದಿಯಲ್ಲಿರುವ ವಿಷಯ. ಯಾಕೆಂದರೆ ಕರ್ನಾಟಕ ರಾಜ್ಯ ಸರ್ಕಾರವು (Karnataka Government) ಪರಿಚಯಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ (Gyaranty Scheme) ಕುಟುಂಬದ ಮುಖ್ಯಸ್ಥೆ ಮಹಿಳೆ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವಂತಹ ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯು (Annabhagya and Gruhalakshmi Schemes) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ (Rationcard Based) ಎಂದೇ ಹೇಳಬಹುದು.
ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ಅನ್ನಭಾಗ್ಯ ಯೋಜನೆಯನ್ನು ಪರಿಚಯಿಸಿದೆ ಮತ್ತು ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಸದಸ್ಯನಿಗೂ 10Kg ಉಚಿತ ಪಡಿತರ ನೀಡುವುದಾಗಿ ಘೋಷಿಸಿದೆ. ಆದರೆ ಅಕ್ಕಿ ದಾಸ್ತಾನು ಲಭ್ಯವಿರದ ಕಾರಣ ಅಲ್ಲಿಯವರೆಗೂ 5Kg ಉಚಿತ ಪಡಿತರದ ಜೊತೆಗೆ ಪ್ರತಿ ಸದಸ್ಯರಿಗೂ 170 ರೂಪಾಯಿಯನ್ನು ಆ ಕುಟುಂಬದ ಮುಖ್ಯಸ್ಥನ ಖಾತೆಗೆ DBT ಮೂಲಕ ವರ್ಗಾವಣೆ ಮಾಡುತ್ತಿದೆ.
ಈ ಸುದ್ದಿ ಓದಿ:- ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
ಇದೇ ರೀತಿಯಾಗಿ ಗೃಹಲಕ್ಷ್ಮಿ ಯೋಜನೆ ಮೂಲಕ ಕುಟುಂಬದ ನಿರ್ವಹಣೆಗಾಗಿ ಪ್ರತಿ ತಿಂಗಳು APL ರೇಷನ್ ಕಾರ್ಡ್ ಸೇರಿದಂತೆ ಎಲ್ಲಾ ಪಡಿತರ ಚೀಟಿದಾರರಿಗೂ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಹಿರಿಯ ಮಹಿಳೆಯ ಖಾತೆಗೆ ರೂ.2000 ಸಹಾಯಧನವನ್ನು DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.
ಈ ಎರಡು ಅನುದಾನವನ್ನು ಪಡೆಯಬೇಕು ಎಂದರೆ ಬ್ಯಾಂಕ್ ಖಾತೆ ಆಕ್ಟಿವ್ ಇರಬೇಕು, ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗಿರಬೇಕು. ಇದೆರಡಕ್ಕಿಂತ ಮುಖ್ಯವಾಗಿ ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರುಗಳು ಸರಿಯಾಗಿರಬೇಕು ಮತ್ತು ಸದಸ್ಯರ
ಇ-ಕೆವೈಸಿ (e-KYC) ಆಗಿರಬೇಕು. ಇಷ್ಟಿದ್ದರೆ ಈ ಎರಡು ಯೋಜನೆಗಳ ಹಣವನ್ನು ಕುಟುಂಬದ ಮುಖ್ಯಸ್ಥೆಯು ಪಡೆಯಬಹುದು.
ಈ ಸುದ್ದಿ ಓದಿ:- ಭಾರತೀಯ ರೈಲ್ವೆ ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ ವೇತನ 29,200/-
ರೇಷನ್ ಕಾರ್ಡ್ ಜಾರಿಗೊಳಿಸಿರುವ ಮೂಲ ಉದ್ದೇಶವೇ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಪಡಿತರ ನೀಡಲು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಸುಲಭವಾಗಿ ಗುರುತಿಸಿ ಸರ್ಕಾರದಿಂದ ಅವರಿಗೆ ವೈದ್ಯಕೀಯ ಶುಲ್ಕಗಳಲ್ಲಿ ಮತ್ತು ಶಿಕ್ಷಣದ ಖರ್ಚು ವೆಚ್ಚಗಳಲ್ಲಿ ರಿಯಾಯಿತಿ ನೀಡಬೇಕು ಎನ್ನುವುದು.
ಆದರೆ ಅನೇಕರು ಸಮಾಜದಲ್ಲಿ ಸುಸ್ಥಿತಿಯಲ್ಲಿ ಇದ್ದರು ಬಡ ಜನರಿಗೆ ಸಿಗುತ್ತಿರುವ ವೈದ್ಯಕೀಯ ರಿಯಾಯಿತಿ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಲುವಾಗಿ ಅನಧಿಕೃತವಾಗಿ BPL ರೇಷನ್ ಕಾರ್ಡ್ ಹೊಂದಿದ್ದಾರೆ ಇದರಿಂದ ಅಸಲಿ ಫಲಾನುಭವಿಗಳಿಗೆ ಬಹಳ ಅ’ನ್ಯಾ’ಯವಾಗುತ್ತಿದೆ.
ಈ ಸುದ್ದಿ ಓದಿ:- ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡ್’ಗೆ ಇಷ್ಟು ಗ್ಯಾಸ್ ಮಾತ್ರ ಬುಕ್ ಮಾಡಲು ಅವಕಾಶ.! ಕೇಂದ್ರದ ಹೊಸ ನಿಯಮ.!
ಇದನ್ನೆಲ್ಲಾ ಪರಿಶೀಲಿಸಿದ ಆಹಾರ ಇಲಾಖೆ ಅಧಿಕಾರಿಗಳು ಅಂತಹ ರೇಷನ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಒಂದು ಮಹತ್ವದ ನಿರ್ಧಾರಕ್ಕೆ ಕೂಡ ಬಂದಿದ್ದಾರೆ. ಅದೇನೆಂದರೆ, ಯಾರೆಲ್ಲಾ ಕಳೆದ ಆರು ತಿಂಗಳಿಂದ ಈ ಉಚಿತ ಪಡಿತರ ಪಡೆದಿಲ್ಲ ಅವರು ಪಡಿತರದ ಉದ್ದೇಶದಿಂದಾಗಿ ರೇಷನ್ ಕಾರ್ಡ್ ಪಡೆದಿಲ್ಲ ಎಂದು ಪರಿಗಣಿಸಿ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲು (ration card Cancel) ತೀರ್ಮಾನಕ್ಕೆ ಬರಲಾಗಿದೆ.
ಈಗಾಗಲೇ ಸರ್ಕಾರಿ ನಿಯಮಾವಳಿ ಉಲ್ಲಂಘಿಸಿ ಪಡೆದಿರುವ ಪಡಿತರ ಚೀಟಿಗಳನ್ನು ವಶಕ್ಕೆ ಪಡೆದಿರುವ ಸರ್ಕಾರ ಇಂತಹದೊಂದು ಕಠಿಣ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ ಪ್ರಾಮಾಣಿಕ ಕಾರಣಗಳಿಂದ ನೀವೇನಾದರೂ ಆರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ನೀವು ಪಡಿತರವನ್ನು ಪಡೆಯಲಾಗದಿದ್ದರೆ ಕೂಡಲೇ ಆಹಾರ ಇಲಾಖೆಗೆ ಕಾರಣವನ್ನು ಕೊಡಬೇಕು.
ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!
ನಿಮ್ಮ ಕಾರಣ ಸೂಕ್ತವಾಗಿದ್ದರೆ ಅಧಿಕಾರಿಗಳು ರದ್ದುಪಡಿಸಿರುವ ಕಾರ್ಡುಗಳನ್ನು ಹಿಂತಿರುಗಿಸುತ್ತಾರೆ. ಇಲ್ಲದೆ ಇದ್ದಲ್ಲಿ ನಿಮ್ಮ ಪಡಿತರ ಚೀಟಿಯನ್ನು ರದ್ದಾಗುತ್ತದೆ. ನಂತರ ಅನ್ನಭಾಗ್ಯ ಯೋಜನೆ ಮಾತ್ರವಲ್ಲದೆ ರೇಷನ್ ಕಾರ್ಡ್ ಆಧಾರಿತವಾಗಿ ಯಾವುದೇ ಸರ್ಕಾರಿ ಯೋಜನೆಯಿಂದ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಕೂಡಲೇ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಎಲ್ಲರಿಗೂ ಈ ವಿಷಯ ತಿಳಿಯುವಂತೆ ಮಾಡಿ.