Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಈ ತಿಂಗಳು ಕೆಲವು ಜಿಲ್ಲೆಗಳಿಗೆ ಮಾತ್ರ ಅನ್ನಭಾಗ್ಯ ಯೋಜನೆಯ ಅಕ್ಕಿ & ಹಣ ಸಿಗೋದು.! ಯಾವ ಜಿಲ್ಲೆಗೆ ಸಿಗಲಿದೆ ಯಾವ ಜಿಲ್ಲೆಯ ಜನರಿಗೆ ಬರಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Posted on September 8, 2023 By Rishi The Power No Comments on ಈ ತಿಂಗಳು ಕೆಲವು ಜಿಲ್ಲೆಗಳಿಗೆ ಮಾತ್ರ ಅನ್ನಭಾಗ್ಯ ಯೋಜನೆಯ ಅಕ್ಕಿ & ಹಣ ಸಿಗೋದು.! ಯಾವ ಜಿಲ್ಲೆಗೆ ಸಿಗಲಿದೆ ಯಾವ ಜಿಲ್ಲೆಯ ಜನರಿಗೆ ಬರಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಅನ್ನ ಭಾಗ್ಯ ಯೋಜನೆಯ (Annabhagya Scheme) ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ (BPL RC Card) ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೂ ಕೂಡ 10Kg ಪಡಿತರ ನೀಡಲಾಗುವುದು ಎಂದು ರಾಜ್ಯ ಸರ್ಕಾರ (government) ಆದೇಶ ನೀಡಿತ್ತು. ಆದರೆ ಕೊನೆ ಸಮಯದಲ್ಲಿ ಅಕ್ಕಿ ದಾಸ್ತಾನು ಕೊರತೆ ಉಂಟಾಗಿರುವ ಕಾರಣ ಎಂದಿನಂತೆ 5Kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲು ಪ್ರತಿ ಸದಸ್ಯನಿಗೆ 170 ರೂಗಳಂತೆ ಆ ಕುಟುಂಬದ ಮುಖ್ಯಸ್ಥನ ಖಾತೆಗೆ (head of the family account) ಹಣ ವರ್ಗಾವಣೆ ಮಾಡುತ್ತಿದೆ.

ಜುಲೈ ತಿಂಗಳಿಂದ ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಲ್ಲಿ ಇದ್ದು, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಹೆಚ್ಚುವರಿ ಅಕ್ಕಿಯ ಹಣ (Annabhagya amount) ಕೂಡ ವರ್ಗಾವಣೆಯಾಗಿದೆ. ಆದರೆ ಇನ್ನೂ ಕೂಡ ಅನೇಕರು ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ ಅದರ ಬಗ್ಗೆ ಆಹಾರ ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪರವರು (Minister K.H Muniyappa) ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

LIC ಪೆನ್ಷನ್ ಪ್ಲಾನ್, ಒಂದು ಸಲ 1,50,000 ಕಟ್ಟಿದ್ರೆ ಸಾಕು, ಗಂಡ ಹೆಂಡತಿಗೆ ಇಬ್ಬರಿಗೂ ಜೀವನ ಪೂರ್ತಿ ಪ್ರತಿ ತಿಂಗಳು 9,832 ಪೆನ್ಷನ್ ಸಿಗುತ್ತೆ.!

ಅವರು ಮಾತನಾಡಿರುವ ವಿಷಯಗಳ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಮೊದಲಿಗೆ ಅನ್ನಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿ ಹಣದ ಬಗ್ಗೆ ಮಾತನಾಡಿದ ಸಚಿವರು ಅನೇಕ ಫಲಾನುಭವಿಗಳ ಆಧಾರ್ ಸಂಖ್ಯೆ ಅವರ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿಲ್ಲ ಈ ಕಾರಣದಿಂದ ಅರ್ಹರಾಗಿದ್ದರು ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ.

ಜುಲೈ ತಿಂಗಳಲ್ಲಿ ಹೆಚ್ಚು ಈ ಸಮಸ್ಯೆ ಕಂಡು ಬಂದಿತ್ತು, ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ (check DBT Status through ahara website) ಅನ್ನಭಾಗ್ಯ ಯೋಜನೆಯ ಹಣದ DBT ಸ್ಟೇಟಸ್ ಚೆಕ್ ಮಾಡಲು ಅವಕಾಶ ನೀಡಿದ್ದೆವು. ಅದರಲ್ಲಿದ್ದ ಘೋಷಣೆ ಪ್ರಕಾರ ಸಮಸ್ಯೆ ಪರಿಹರಿಸಿಕೊಂಡವರಿಗೆ ಆಗಸ್ಟ್ ತಿಂಗಳಲ್ಲಿ ಹಣ ವರ್ಗಾವಣೆ ಆಗಿದೆ. ಆಗಸ್ಟ್ ತಿಂಗಳಲ್ಲಿ 25 ಲಕ್ಷ ಫಲಾನುಭವಿಗಳು ತಮ್ಮ ಸಮಸ್ಯೆ ಬಗ್ಗೆ ಹರಿಸಿಕೊಂಡಿರುವುದು ತಿಳಿದು ಬಂದಿದೆ.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್, ಇಂಥವರಿಗೆ ಇನ್ಮುಂದೆ 5 Kg ಅಕ್ಕಿಯೂ ಇಲ್ಲ ಜೊತೆಗೆ ಹಣವೂ ಇಲ್ಲ.! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯೇ ಚೆಕ್ ಮಾಡಿ.!

ಆದರೆ ಇನ್ನೂ ಕೂಡ ಲಕ್ಷಾಂತರ ಫಲಾನುಭವಿಗಳು ಇದೇ ಸಮಸ್ಯೆಯಲ್ಲಿ ಇರುವುದರಿಂದ ಈ ತಿಂಗಳಿನಿಂದ ಮತ್ತೊಂದು ನಿರ್ಧಾರ ಕೈಗೊಂಡಿದ್ದೇವೆ. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲೂ (fare price shop) ಕೂಡ ಯಾರೆಲ್ಲ ಈ ರೀತಿ ತಮ್ಮ ಖಾತೆಯಲ್ಲಿರುವ ಸಮಸ್ಯೆ ಕಾರಣದಿಂದಾಗಿ ಹಣ ಪಡೆಯಲು ಸಾಧ್ಯವಾಗಿಲ್ಲ ಅವರ ಲಿಸ್ಟ್ ತಯಾರಿಸಿ ಅವರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇವೆ.

ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!

ಅದೇ ರೀತಿ ಸೆಪ್ಟೆಂಬರ್ ತಿಂಗಳಿಂದಲೇ ಅನ್ನ ಭಾಗ್ಯ ಯೋಜನೆಡಿ ಹಣದ ಬದಲು ಪೂರ್ತಿ 10Kg ಪಡಿತರ ನೀಡಬೇಕು ಎನ್ನುವ ಇಚ್ಛೆ ಸರ್ಕಾರಕ್ಕಿದೆ. ನಾವು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮುಂತಾದ ಕಡೆಯಲ್ಲ ಅಕ್ಕಿ ಖರೀದಿಗೆ ಪ್ರಯತ್ನಿಸುತ್ತಿದ್ದೇವೆ. ದಾಸ್ತಾನು ಲಭ್ಯವಾದರೆ ಸೆಪ್ಟೆಂಬರ್ ತಿಂಗಳದಿಂದಲೇ ಹಣದ ಬದಲು ಅಕ್ಕಿಯನ್ನು ವಿತರಣೆ ಮಾಡಲಿದ್ದೇವೆ. ಎನ್ನುವುದನ್ನು ತಿಳಿಸಿದ ಅವರು ಮತ್ತೊಂದು ಹೊಸ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಅದೇನೆಂದರೆ ಈಗ ರಾಜ್ಯದಲ್ಲಿ ಬರಪೀಡಿತ (drought declared thaluk) ವಾತಾವರಣವಿದೆ. ಈಗಾಗಲೇ 114 ತಾಲ್ಲೂಕುಗಳನ್ನು ಕೇಂದ್ರ ಸರ್ಕಾರದ ಗೈಡ್ಲೈನ್ಸ್ (According to central government guidlines) ಪ್ರಕಾರ ಬರಪೀಡಿತ ತಾಲ್ಲೂಕುಗಳು ಎಂದು ನಿರ್ಧರಿಸಿ ಪಟ್ಟಿ ತಯಾರಿಸಿ ಘೋಷಿಸಲಾಗಿದೆ ಈ ಲಿಸ್ಟಿಗೆ ಇನ್ನಷ್ಟು ತಾಲೂಕುಗಳು ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!

ಈಗ ಘೋಷಣೆಯಾಗಿರುವ 114 ಬರಪೀಡಿತ ತಾಲೂಕುಗಳಿಗೆ 10Kg ಪಡಿತರ ವಿತರಣೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಉಳಿದ ತಾಲೂಕುಗಳಿಗೆ ಒಂದು ವೇಳೆ ಅಕ್ಕಿ ದಾಸ್ತಾನು ಲಭ್ಯವಾಗದಿದ್ದರೆ ಎಂದಿನಂತೆ ಹಣ ವರ್ಗಾವಣೆ ಮಾಡಲಾಗುತ್ತದೆ ಆದರೆ ಬರಪಿಡಿತ ಪ್ರದೇಶದಲ್ಲಿರುವ ಜನರಿಗೆ ಆಹಾರದ ಕೊರತೆ ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಮೊದಲಿಗೆ ಅವರಿಗೆ 10Kg ಅಕ್ಕಿ ನೀಡಲು ಸರ್ಕಾರ ಪ್ರಯತ್ನಿಸುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Useful Information
WhatsApp Group Join Now
Telegram Group Join Now

Post navigation

Previous Post: LIC ಪೆನ್ಷನ್ ಪ್ಲಾನ್, ಒಂದು ಸಲ 1,50,000 ಕಟ್ಟಿದ್ರೆ ಸಾಕು, ಗಂಡ ಹೆಂಡತಿಗೆ ಇಬ್ಬರಿಗೂ ಜೀವನ ಪೂರ್ತಿ ಪ್ರತಿ ತಿಂಗಳು 9,832 ಪೆನ್ಷನ್ ಸಿಗುತ್ತೆ.!
Next Post: ಮನೆ ಅಥವಾ ಜಮೀನಿನ ಆಸ್ತಿ ಪತ್ರ ಕಳೆದು ಹೋದರೆ ಮರಳಿ ಪಡೆಯುವ ವಿಧಾನ ಇಲ್ಲಿದೆ ನೋಡಿ.!

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore